ಸುದ್ದಿಗಳು

1912 ಬಗ್ಗೆ ಮೆಸ್ಕಾಂ ಸಿಬಂದಿಗಳಿಗೆ ತರಬೇತಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ವಿವಿಧ ಮಾಧ್ಯಮಗಳ ಮೂಲಕ ಮೆಸ್ಕಾಂ ಗ್ರಾಹಕರ ಸೇವಾ ಕೇಂದ್ರ 1912 ಸೌಲಭ್ಯದ  ಬಗ್ಗೆ ವಿವಿಧ ಭಾಗಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಸ್ಕಾಡಾ ಮತ್ತು ಕೇಂದಿಕೃತ ಗ್ರಾಹಕರ ಸೇವಾ ಕೇಂದ್ರದ ಅಧೀಕ್ಷಕ ಎಂಜಿನಿಯರ್ ಪಿ.ಡಿ.ಬಿ.ರಾವ್ ಹೇಳಿದರು.

Advertisement
Advertisement

ಅವರು ತಾ.ಪಂ.ಸಭಾಂಗಣದಲ್ಲಿ ಮಂಗಳವಾರ ಸ್ಕಾಡಾ ಮತ್ತು ಕೇಂದಿಕೃತ ಗ್ರಾಹಕರ ಸೇವಾ ಕೇಂದ್ರ 1912 ಕುರಿತು ಮೆಸ್ಕಾಂ ಸುಳ್ಯ ಉಪ ವಿಭಾಗದ ಅಧಿಕಾರಿ ನೌಕರರುಗಳಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ  ಮಾಹಿತಿ ನೀಡಿದರು.

ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಇಲ್ಲದೆ ಸೇವಾ ಕೇಂದ್ರದ ದೂರವಾಣಿ ಸಂಪರ್ಕ ಸಾಧ್ಯವಾಗದ ಬಗ್ಗೆ ನೌಕರರು ಪ್ರಸ್ತಾವಿಸಿದರು. ಇಂತಹ ಸಮಸ್ಯೆ ಇರುವುದು ನಿಜ. ಆದರೆ ನೆಟ್‍ವರ್ಕ್ ಇಲ್ಲದ ಕಡೆ ಸಂವಹನ ಕಷ್ಟ. ಆದರೆ ಲಭ್ಯ ಇರುವ ಕಡೆ ಸಮರ್ಪಕ ಸೇವೆ ನೀಡಲು ಆ ಸಂಸ್ಥೆಗೆ ಮನವಿ ಮಾಡಲಾಗಿದೆ ಎಂದು ಪಿಡಿಬಿ ರಾವ್ ಹೇಳಿದರು.

ಕರೆ ಮಾಡುವ ಗ್ರಾಹಕರು ಸಮಸ್ಯೆ ಕುರಿತು ಸಮರ್ಪಕ ಮಾಹಿತಿ ನೀಡಬೇಕು. ಶೇ. 99 ಪ್ರಕರಣಗಳಲ್ಲಿ ಸೂಕ್ತ ಮಾಹಿತಿ ದಾಖಲಿಸಲು ಸಾಧ್ಯವಿದೆ. ಶೇ.1 ರಷ್ಟು ಮಾಹಿತಿ ನೀಡಲು ಸಾಧ್ಯವಿಲ್ಲದ ಸಂದರ್ಭ ಇರಬಹುದಷ್ಟೆ. ಕರೆ ಮಾಡಿದ ಗ್ರಾಹಕರು ಸಮಸ್ಯೆ ಇರುವ ವ್ಯಾಪ್ತಿಯ ಆರ್ ಆರ್ ನಂಬರ್, ಪ್ರದೇಶದ ಬಗ್ಗೆ ಮಾಹಿತಿ ಕೊಡಬೇಕು. ಬಳಿಕ ಅದನ್ನು ಸಂಬಂಧಿಸಿದ ಮೆಸ್ಕಾಂ ವಿಭಾಗಕ್ಕೆ ವರ್ಗಾಯಿಸಲಾಗುತ್ತದೆ. ಸಾಪ್ಟ್ ವೇರ್ ಕೂಡ ಅದೇ ತರಹ ಇದ್ದು, ವಾರ್ಡ್ ಪ್ರಕಾರವೇ ಅಪ್ಲೋಡ್ ಮಾಡುವ ನಿಯಮವಿದೆ ಎಂದು ಪಿ.ಡಿ.ಬಿ.ರಾವ್ ಹೇಳಿದರು.

ಈ ಸಂದರ್ಭದಲ್ಲಿ ಸ್ಕಾಡಾ ಮತ್ತು ಕೇಂದಿಕೃತ ಗ್ರಾಹಕರ ಸೇವಾ ಕೇಂದ್ರದ ಸಹಾಯಕ ಎಂಜಿನಿಯರ್ ನಂದ ಕುಮಾರ್, ಸುಳ್ಯ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ |29.05.2025 | ಮೇ.31ರಿಂದ ಮಳೆ ಪ್ರಮಾಣ ಕಡಿಮೆ

30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

6 hours ago

ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…

13 hours ago

ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…

13 hours ago

14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ

ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…

13 hours ago

ಭ್ರಷ್ಟಾಚಾರ  ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ – ಉಪಲೋಕಾಯುಕ್ತ ಬಿ. ವೀರಪ್ಪ

ಭ್ರಷ್ಟಾಚಾರ  ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ  ಉಪಲೋಕಾಯುಕ್ತ ಬಿ.…

13 hours ago