Advertisement
ಸುದ್ದಿಗಳು

ಸಾವಯವ ಕೃಷಿ ಮಾಡುವ ರೈತರಿಗೆ ಸಿಹಿ ಸುದ್ದಿ | ಎಲ್ಲಾ ಗೊಬ್ಬರ, ಕೀಟನಾಶಕಗಳಿಗೆ ಸಬ್ಸಿಡಿ

Share

ರೈತರಿಗೆ ಸಿಹಿ ಸುದ್ದಿ:ಎಲ್ಲಾ ಗೊಬ್ಬರ, ಕೀಟನಾಶಕಗಳಿಗೆ ಸಬ್ಸಿಡಿ :  ಆರಂಭವಾಗಿದೆ ರೈತರಿಗಾಗಿ ಹೊಸ ಯೋಜನೆ

Advertisement
Advertisement
Advertisement
Advertisement

ಸರ್ಕಾರ ರೈತರಿಗಾಗಿ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಲೇ ಇರುತ್ತದೆ. ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅಂತಹ ಯೋಜನೆಗಳಲ್ಲಿ ಪರಂಪರಾಗತ್‌ ಯೋಜನೆ ಕೂಡ ಒಂದು. ಕೇಂದ್ರ ಸರ್ಕಾರವು ದೇಶದ ಕೃಷಿ ಕ್ಷೇತ್ರ ಮತ್ತು ಎಲ್ಲಾ ರೈತರ ಸುಧಾರಣೆಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಸಾವಯವ ಕೃಷಿ ಮಾಡವ ರೈತರಿಗೆ ಸರ್ಕಾರ ಉತ್ತೇಜನ ನೀಡಲಿದೆ. ಕೇಂದ್ರ ಸರ್ಕಾರ ಪರಂಪರಾಗತ್ ಕೃಷಿ ವಿಕಾಸ್ ಯೋಜನೆ 2023ರ ಯೋಜನೆ ಅಡಿಯಲ್ಲಿ ಈ ಸೌಲಭ್ಯವನ್ನು ಎಲ್ಲಾ ರೈತ ಫಲಾನುಭವಿಗಳಿಗೆ ನೀಡಲಿದೆ. ಈ ಯೋಜನೆಯ ಮೂಲಕ ಎಲ್ಲಾ ರೈತರನ್ನು ಸಾವಯವ ಕೃಷಿ ಮಾಡಲು ಪ್ರೋತ್ಸಾಹಿಸಲಾಗುವುದು.

Advertisement

ಯೋಜನೆಯ ಪ್ರಯೋಜನಗಳನ್ನು ನೋಡೋದಾದ್ರೆ

  • PKVY ಮೂಲಕ ಮಣ್ಣಿನ ಗುಣಮಟ್ಟ ಉತ್ತಮವಾಗಿರುತ್ತದೆ ಮತ್ತು ಫಲವತ್ತತೆ ಹೆಚ್ಚಾಗುತ್ತದೆ.
  • ಕೃಷಿ ಕ್ಷೇತ್ರದಲ್ಲಿ ಈ ಯೋಜನೆಯಿಂದ ರೈತರ ಆದಾಯವೂ ಸುಧಾರಿಸುತ್ತದೆ.
  • ಈ ಯೋಜನೆಯಡಿ ಪಡೆದ ಪ್ರೋತ್ಸಾಹಧನವು ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹೋಗುತ್ತದೆ.
  • ದೇಶದ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50,000ಪ್ರಕಾರ 3 ವರ್ಷಗಳ ಅವಧಿಗೆ ಈ ಯೋಜನೆಯಡಿ ಸಹಾಯವನ್ನು ನೀಡಲಾಗುತ್ತದೆ.
  • ರೈತರಿಗೆ ಸಾವಯವ ಗೊಬ್ಬರ, ಬೀಜ ಮತ್ತು ಕೀಟನಾಶಕಗಳಿಗೆ 31 ಸಾವಿರ ರೂ.
  • ಮೌಲ್ಯವರ್ಧನೆ ಮತ್ತು ವಿತರಣೆಗೆ ರೂ.8800 ನೀಡಲಾಗುವುದು.

 PKVY ಅರ್ಹತೆಗಳು:

Advertisement
  • ಯೋಜನೆಯಡಿ ಅರ್ಜಿದಾರರು ರೈತ ವರ್ಗದಿಂದ ಮಾತ್ರ ಇರಬೇಕು.
  • ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
  • ಈ ಯೋಜನೆಯಲ್ಲಿ ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು.

ಈ ಯೋಜನೆ ಪಡೆದುಕೊಳ್ಳಲು ನೀವು ಸಲ್ಲಿಸಬೇಕಾದ ದಾಖಲೆಗಳು :

  • ಮೂಲ ವಿಳಾಸ ಪುರಾವೆ
  • ಆಧಾರ್ ಕಾರ್ಡ್
  • ಪಡಿತರ ಚೀಟಿ
  • ಜನನ ಪ್ರಮಾಣಪತ್ರ
  • ಮೊಬೈಲ್ ನಂಬರ
  • ವಯಸ್ಸಿನ ಪ್ರಮಾಣಪತ್ರ / ಜನನ ಪ್ರಮಾಣಪತ್ರ
  • ಪಾಸ್ಪೋರ್ಟ್ ಗಾತ್ರದ ಫೋಟೋ
  • ಬ್ಯಾಂಕ್ ಖಾತೆ ಹೇಳಿಕೆ

ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಹಾಗೆಯೆ ಅಧಿಕೃತ ವೆಬ್ಸೈಟ್‌ https://pgsindia-ncof.gov.in/PKVY/Index.aspx# ನಲ್ಲೂ ನೀವು ಮಾಹಿತಿ ಹಾಗೂ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 01-03-2025 | ಕರಾವಳಿ ಜಿಲ್ಲೆಯ ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಮಾ.4 ರಂದು ಕೂಡಾ ತುಂತುರು ಮಳೆ ನಿರೀಕ್ಷೆ |

ಈಗಿನಂತೆ ಮಾರ್ಚ್ 4 ಅಥವಾ 5 ರಿಂದ ಮೋಡದ ವಾತಾವರಣ ಹೆಚ್ಚಿರುವ ಸಾಧ್ಯತೆಗಳಿದ್ದು,…

4 hours ago

ಎಥೆನಾಲ್ ಮಿಶ್ರಣ ಶೇ.20ಕ್ಕೆ ಹೆಚ್ಚಿಸುವ ಚಿಂತನೆ |

ಅಭಿವೃದ್ಧಿ ಸವಾಲುಗಳ ನಡುವೆಯೂ ದೇಶದ ಎಲ್ಲ ತೈಲ ಉತ್ಪಾದನಾ ಕಂಪನಿಗಳು 2045ರ ವೇಳೆಗೆ…

10 hours ago

ಭಾರತದಿಂದ 3.84 ಲಕ್ಷ ಮೆಟ್ರಿಕ್ ಟನ್ ಕಾಫಿ ರಫ್ತು |

ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ವಿಸ್ತರಣೆ, ಮಾರುಕಟ್ಟೆ ಅಭಿವೃದ್ಧಿಯಲ್ಲಿ ಕಾಫಿ ಮಂಡಳಿ…

10 hours ago

ರೈತ ಉತ್ಪಾದಕ ಸಂಸ್ಥೆಗಳ ಮೇಳ | ರೈತ ಉತ್ಪಾದಕ ಸಂಸ್ಥೆಗಳಿಂದ ಕೃಷಿ ಕ್ಷೇತ್ರದ ಏಳಿಗೆಗೆ ಕೊಡುಗೆ

ರೈತ ಉತ್ಪಾದಕ ಸಂಸ್ಥೆಗಳು ರೈತರು ಮತ್ತು ಇಲಾಖೆಯ ನಡುವೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ…

11 hours ago

ಕರಾವಳಿ ಭಾಗದಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ | ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚನೆ

ದಕ್ಷಿಣ ಕನ್ನಡದ ಸುಳ್ಯದಲ್ಲಿ  40.4 ಡಿಗ್ರಿ ಸೆಲ್ಸಿಯಸ್,  ಉಪ್ಪಿನಂಗಡಿಯಲ್ಲಿ   39.6, ಪಾಣೆ ಮಂಗಳೂರಿನಲ್ಲಿ …

11 hours ago

ಕೃಷಿಯಲ್ಲಿ ಶೇ.80 ರಷ್ಟು ಮಂದಿ ಸಣ್ಣ ರೈತರು

ಕೃಷಿಯಲ್ಲಿ ತೊಡಗಿರುವವರಲ್ಲಿ ಶೇಕಡಾ 80ರಷ್ಟು ಮಂದಿ ಸಣ್ಣ ರೈತರು. ಈ  ಸಮುದಾಯ ಮಾರುಕಟ್ಟೆ…

11 hours ago