#GreenRevolution | ಡಾ. ಎಂ. ಎಸ್.  ಸ್ವಾಮಿನಾಥನ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ.. : ಹಸಿವು ನಿವಾರಿಸುವ ಹೆಸರಲ್ಲಿ  ಉಸಿರು ತೆಗೆವ “ಪರಿಹಾರಗಳ ”  ಕುರಿತು|ಭಾಗ – 2

ಹಗಲುಗುರುಡಿನ ಗ್ರಹಿಕೆ ಎಂಬುದಕ್ಕೆ ಹಸಿರು ಕ್ರಾಂತಿಯ ವಿನಾಶಕಾರಿ ಪರಿಣಾಮಗಳೇ ಸಾಕ್ಷಿ. ಈ ಉತ್ಪಾದನೆ ಹೆಚ್ಚಳ -ಅರ್ಥಾತ್ ಇದರ ಹಿಂದಿನ ಬೀಜ, ಒಳಸುರಿ ಮತ್ತು ಕೃಷಿ ಮಾರುಕಟ್ಟೆ ದೈತ್ಯಕಾರ್ಪೊರೇಟ್ ಕಂಪನಿಗಳ ಲಾಭದ ವಿಜ್ಞಾನ -ರಾಜಕೀಯ ಮೇಲುಗೈ ಪಡೆದು  ಇತರ ಪರ್ಯಾಯಗಳು  ಮತ್ತು ಅದನ್ನು ಪ್ರತಿಪಾದಿಸುತ್ತಿದ್ದವರು ಸದ್ದಿಲ್ಲದೇ ಹಿನ್ನೆಲೆಗೆ ಸರಿದದ್ದನ್ನು ಇಂದು ಈ ಸಂದರ್ಭದಲ್ಲಿ ನೆನೆಪು ಮಾಡಿಕೊಳ್ಳಬೇಕಿದೆ.