ಅಡಿಕೆ ಹಳದಿ ರೋಗ ಪ್ರದೇಶದ ರೈತರ ಅಹವಾಲು ಸ್ವೀಕಾರ ಮತ್ತು ಬದಲಿ ಕೃಷಿಯ ವಿಚಾರ ಸಂಕಿರಣ

November 2, 2019
8:32 PM

ಸುಳ್ಯ: ಸಂಪಾಜೆ ಮತ್ತು ಅರಂತೋಡು ಪರಿಸರದಲ್ಲಿ ಬಾಧಿಸಿರುವ ಅಡಿಕೆ ಎಲೆ ಹಳದಿ ರೋಗದ ಕುರಿತು ಅಧ್ಯಯನ ಮತ್ತು ಬದಲಿ ಕೃಷಿಯ ಕುರಿತು ಸರಕಾರಕ್ಕೆ ಪರಿಣಾಮಕಾರಿ ರೀತಿಯಲ್ಲಿ ಹಕ್ಕೊತ್ತಾಯ ಮಂಡಿಸುವ ಸಲುವಾಗಿ ಅಡಿಕೆ ಎಲೆ ಹಳದಿ ಪೀಡಿತ ಪ್ರದೇಶದ ರೈತರ ಅಹವಾಲು ಸ್ವೀಕಾರ ಮತ್ತು ಬದಲಿ ಕೃಷಿಯ ಕುರಿತು ವಿಚಾರ ಸಂಕಿರಣ ಅರಂತೋಡು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಶಾಸಕ ಎಸ್.ಅಂಗಾರ ಉದ್ಘಾಟಿಸಿದರು.

Advertisement
Advertisement

ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಂಟಾಗಿರುವ ಹಳದಿ ಎಲೆ ರೋಗದಿಂದ ನಷ್ಟ ಉಂಟಾಗಿರುವ ಕೃಷಿಕರಿಗೆ ಸಮರ್ಪಕ ಪರಿಹಾರ ಒಸಗಿಸುವ ನಿಟ್ಟಿನಲ್ಲಿ ರಾಜ್ಯ ಕೃಷಿ ಮತ್ತು ತೋಟಗಾರಿಕಾ ಸಚಿವರ ಜೊತೆ ಚರ್ಚೆ ನಡೆಸುವುದಾಗಿ ಅವರು ಹೇಳಿದರು. ಕೃಷಿಕರು ಮುಂದಿರಿಸಿದ ಎಲ್ಲಾ ಅಹವಾಲುಗಳನ್ನು ಕ್ರೋಢೀಕರಿಸಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿ ಸಮಗ್ರ ವಿವರಗಳನ್ನೊಳಗೊಂಡ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿ ಸಮರ್ಪಕವಾದ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

ಹಳದಿ ಪೀಡಿತ ಪ್ರದೇಶದ ಸರ್ವೆ: ಡಾ.ಸೆಲ್ವಮಣಿ
ಅಡಕೆ ರೋಗಕ್ಕೆ ಹಳದಿ ಎಲೆ ರೋಗ ಬಾದಿಸಿ ಕೃಷಿ ನಾಶವಾದ ಪ್ರದೇಶದ ಸಮಗ್ರ ಸರ್ವೆ ನಡೆಸಲಾಗುದು ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ.ಆರ್ ಹೇಳಿದ್ದಾರೆ. ಹಳದಿ ರೋಗಕ್ಕೆ ಕಾರಣ ಮತ್ತು ಅದರ ಪರಿಹಾರದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕಾಗಿದೆ. ಈ ಕುರಿತು ವಿಜ್ಞಾನಿಗಳ ಜೊತೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು. ಪರ್ಯಾಯ ಕೃಷಿಯನ್ನು ಅನುಕೂಲಕ್ಕೆ ತಕ್ಕಂತೆ ರೈತರೇ ಆಯ್ಕೆ ಮಾಡಬೇಕು. ಸಾಂಬಾರ ಬೆಳೆಗಳನ್ನು ಬೆಳೆಸಲು ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.

ಸುಳ್ಯ ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಸದಸ್ಯರಾದ ಪುಷ್ಪಾ ಮೇದಪ್ಪ, ಉದಯ ಕೊಪ್ಪಡ್ಕ, ಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್.ಆರ್.ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೈತರ ಅಹವಾಲು: ಅರಂತೋಡು, ತೊಡಿಕಾನ, ಸಂಪಾಜೆ, ಆಲೆಟ್ಟಿ, ಉಬರಡ್ಕ, ಮರ್ಕಂಜ, ಮಡಪ್ಪಾಡಿ ಮತ್ತಿತರ ಗ್ರಾಮಗಳಲ್ಲಿ ಹಳದಿ ಎಲೆ ಬಾದೆಯಿಂದ ಅಡಿಕೆ ನಾಶದ ಅಂಚಿನಲ್ಲಿದೆ. ಕೊಡಗಿನ ಪೆರಾಜೆ, ಸಂಪಾಜೆ ಹಾಗೂ ಚೆಂಬು ಗ್ರಾಮಗಳಲ್ಲಿ ಇದೇ ಪರಿಸ್ಥಿತಿ ಇದೆ. ಹಳದಿ ರೋಗ ಪೀಡಿತ ಪ್ರದೇಶದ ಜಂಟಿ ಸಮೀಕ್ಷೆ ನಡೆಸಬೇಕು, ವಿಶೇಷ ಬಾದಿತ ಪ್ರದೇಶವೆಂದು ಘೋಷಿಸಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು, ಈ ಭಾಗದ ಅಡಕೆ ಕೃಷಿಕರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ರೈತರಿಗೆ ಬದಲಿ ಕೃಷಿ ಮಾಡಲು ಆರ್ಥಿಕ ಸಹಾಯ ನೀಡಬೇಕು, ಅಡಕೆ ಕೃಷಿಕರ ಆರ್ಥಿಕ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು, ಕೃಷಿಕರಿಗೆ ಶೂನ್ಯ ಬಡ್ಡಿಯಲ್ಲಿ ದೀರ್ಘಾವಧಿ ಸಾಲ ನೀಡಬೇಕು, ಅಡಕೆ ಕೃಷಿ ನಾಶವಾದ ರೈತ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ನೀಡಬೇಕು, ಕಾಡು ಪ್ರಾಣಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು, ಅಡಿಕೆ ರೋಗಗಳಿಗೆ ಔಷಧಿ ಕಂಡು ಹಿಡಿಯಬೇಕು ಎಂದು ಕೃಷಿಕರು ಅಹವಾಲು ಮಂಡಿಸಿದರು.
ಕೃಷಿಕರಾದ ಎ.ಸಿ.ಹೊನ್ನಪ್ಪ, ಶಂಕರನಾರಾಯಣ ಉಪಾಧ್ಯಾಯ, ಎನ್.ಟಿ.ಹೊನ್ನಪ್ಪ, ತೀರ್ಥರಾಮ ನೆಡ್ಚಿಲು, ಉಮಾಶಂಕರ, ಸುಧಾಕರ ತೊಡಿಕಾನ, ಶ್ರೀನಿವಾಸ ನಿಡಿಂಜಿ, ಕೆ.ಪಿ.ಜಗದೀಶ್, ರವಿಕಿರಣ ಪುಣಚ, ಕಿಶೋರ್ ಕುಮಾರ್ ಉಳುವಾರು, ಲೋಲಜಾಕ್ಷ ಭೂತಕಲ್ಲು, ತೀರ್ಥರಾಮ ಉಳುವಾರು ಸಂವಾದದಲ್ಲಿ ಅಹವಾಲು ಮಂಡಿಸಿದರು.

ರೈತರ ಆರ್ಥಿಕ ಪುನಶ್ಚೇತನಕ್ಕೆ ಸಮಗ್ರ ಪ್ಯಾಕೇಜ್- ವಿಚಾರ ಮಂಡನೆಯಲ್ಲಿ ಆಗ್ರಹ:  ಹಳದಿ ಎಲೆ ರೋಗದಿಂದ ಅಡಕೆ ಕೃಷಿ ನಾಶವಾದ ಪ್ರದೇಶದ ರೈತರ ಆರ್ಥಿಕ ಪುನಶ್ಚೇನ ಸಾಧ್ಯವಾಗುವ ನಿಟ್ಟಿನಲ್ಲಿ ಸಮಗ್ರ ಪ್ಯಾಕೇಜ್ ಘೋಷಣೆ ಆಗಬೇಕು ಎಂದು ವಿಚಾರ ಮಂಡಿಸಿದ ಅರಂತೋಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ ಆಗ್ರಹಿಸಿದರು. ಯಾವುದೇ ಪರ್ಯಾಯ ಕೃಷಿಯನ್ನು ಕೃಷಿಕರ ಮೇಲೆ ಹೇರಿಕೆ ಮಾಡಬಾರದು. ಪರ್ಯಾಯ ಕೃಷಿ ರೈತರ ಆಯ್ಕೆಗೆ ಬಿಡಬೇಕು ಎಂದರು.

ಹಳದಿ ರೋಗದ ತಡೆಗೆ ಕ್ರಮ ಮತ್ತು ರೋಗ ಪ್ರತಿರೋಧದ ತಳಿಗಳ ಸಂಶೋಧನೆ ಆಗಬೇಕು ಎಂದು ತಾಲೂಕು ಸಹಕಾರಿ ಯೂನಿಯನ್‍ನ ಅಧ್ಯಕ್ಷ ರಮೇಶ್ ದೇಲಂಪಾಡಿ ಹೇಳಿದರು. ಅಡಕೆ ಕೃಷಿಕರು ಭಯದ ವಾತಾವರಣದಲ್ಲಿಯೇ ದಿನ ಕಳೆಯುವಂತಾಗಿದೆ. ಅಡಕೆ ನಾಶವಾದ ಪ್ರದೇಶದಲ್ಲಿ ಸ್ಥಳೀಯವಾಗಿ ಬೆಳೆಯಬಹುದಾದ ಇತರ ಪರ್ಯಾಯ ಕೃಷಿಗೆ ಒತ್ತು ನೀಡಬೇಕು ಮತ್ತು ಕೃಷಿಯ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊೈಂಗಾಜೆ ಮಾತನಾಡಿ ಅಡಕೆ ಕೃಷಿ ನಾಶವಾದ ಪ್ರದೇಶದಲ್ಲಿ ಕೃಷಿಕರು ಸಾಲದ ಬಾದೆಯಿಂದ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಇಲ್ಲಿ ಆರ್ಥಿಕ ಅನಿಶ್ಚಿತತೆ ಇದೆ. ಆದುದರಿಂದ ಅಡಕೆ ಕೃಷಿಕರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಹೇಳಿದರು. ಅಡಕೆಗೆ ಪರ್ಯಾಯವಾಗಿ ಬೆಳೆಯಬಹುದಾದ ತಾಳೆ ಬೆಳೆಯ ಬಗ್ಗೆ ವಸಂತ ಭಟ್ ತೊಡಿಕಾನ ಮತ್ತು ಜಾಯಿ ಕಾಯಿಯ ಕೃಷಿಯ ಬಗ್ಗೆ ಭಾಸ್ಕರನ್ ನಾಯರ್ ಅರಂಬೂರು ವಿಚಾರ ಮಂಡಿಸಿದರು.

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಡಲಾಮೆಗಳ ಸಂತಾನೋತ್ಪತ್ತಿಗೆ ಅರಣ್ಯ ಇಲಾಖೆ ರಕ್ಷಣೆ | ಬಾವಳ ಕಡಲತೀರದಲ್ಲಿ ಸಂತೋಷದ ಕ್ಷಣ
February 14, 2026
7:55 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಸಂಸದರಿಂದ ಒತ್ತಾಯ
February 14, 2026
7:45 AM
by: ದ ರೂರಲ್ ಮಿರರ್.ಕಾಂ
ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ
February 13, 2026
10:24 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror