ಆಂದೋಲನ ರೂಪ ಪಡೆದ “ಅಡಿಕೆ ಮರ ಏರುವ ತರಬೇತಿ”

May 9, 2019
9:30 AM

ಪಂಜ: ಅಡಿಕೆ ಮರ ಏರುವ ತರಬೇತಿ ಶಿಬಿರ ಈಗ ಆಂದೋಲನದ ರೂಪ ಪಡೆಯುತ್ತಿದೆ. ಸಹಕಾರಿ ಸಂಘಗಳು ಮುಂಚೂಣಿಯಲ್ಲಿ  ನಿಂತು ಅಡಿಕೆ ಬೆಳೆಗಾರರ ರಕ್ಷಣೆಯ ಕಡೆಗೆ ಹೆಜ್ಜೆ ಇಟ್ಟಿವೆ. ಅಡಿಕೆ ಮರ ಏರುವ ತರಬೇತಿ ಮೂಲಕ ಸ್ವ ಉದ್ಯೋಗ, ಕೃಷಿ ರಕ್ಷಣೆಯ ಕಡೆಗೆ ಮನಸ್ಸು ಮಾಡಿದ್ದಾರೆ.

Advertisement
Advertisement
Advertisement

ಕಳೆದ ಡಿಸೆಂಬರ್ ತಿಂಗಳಲ್ಲಿ  ಕ್ಯಾಂಪ್ಕೋ ನೇತೃತ್ವದಲ್ಲಿ ವಿಟ್ಲ ಸಿಪಿಸಿಆರ್ ಐ ವಠಾರದಲ್ಲಿ ಅಡಿಕೆ ಮರ ಏರುವ ತರಬೇತಿ ಶಿಬಿರ ” ಅಡಿಕೆ ಕೌಶಲ್ಯ ಪಡೆ ” ರಚನೆ ಆಗಿತ್ತು. ಅದೇ ಹುಮ್ಮಸ್ಸಿನಲ್ಲಿ ಮತ್ತೊಂದು ಶಿಬಿರ ನಡೆಯಿತು. ಎರಡೂ ಶಿಬಿರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದು ಇಡೀ ಜಿಲ್ಲೆಗೆ, ಅಡಿಕೆ ಬೆಳೆಗಾರರಿಗೆ ಉತ್ತಮ ಸಂದೇಶ ನೀಡಿತು. ಇದರ ಬೆನ್ನಲ್ಲೇ ಸಹಕಾರಿ ಸಂಘಗಳ ಮೂಲಕ ಜಿಲ್ಲೆಯಲ್ಲಿ ಇಂತಹ ಶಿಬಿರ ನಡೆಯುವ ಬಗ್ಗೆ ಯೋಚನೆ ಆರಂಭವಾಯಿತು.

Advertisement

ಇದೀಗ ಆ ಯೋಚನೆ ಕಾರ್ಯರೂಪಕ್ಕೆ ಬಂದಿದೆ. ಈಗಾಗಲೇ ಪೆರ್ಲದಲ್ಲಿ ಅಡಿಕೆ ಮರ ಏರುವ ತರಬೇತಿ ಶಿಬಿರ ಸಹಕಾರಿ ಸಂಘದ ಮೂಲಕ  ನಡೆದಿದೆ. ಇದೀಗ ಪ್ರೇರಣೆ ಪಡೆದ ಇನ್ನೂ ಹಲವಾರು ಸಹಕಾರಿ ಸಂಘಗಳೂ ಮುಂದೆ ಬಂದಿವೆ. ಗ್ರಾಮೀಣ ಭಾಗದಲ್ಲಿ ನುರಿತ ಕಾರ್ಮಿಕರ ತಯಾರು ಮಾಡುವುದು  ಹಾಗೂ ಸ್ವ ಉದ್ಯೋಗಕ್ಕೆ ಅವಕಾಶ ನೀಡುವುದು  ಈಗ ಮುಖ್ಯ ಉದ್ದೇಶವಾಗಿದೆ.

Advertisement

ಶಿಬಿರದ ಬಗ್ಗೆ ಪಂಜ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಹೀಗೆ ಹೇಳುತ್ತಾರೆ,

Advertisement

 

ಶಿಬಿರದ ಬಗ್ಗೆ ಮುಖ್ಯ ತರಬೇತುದಾರ ಅಣ್ಣು ನಾಯ್ಕ್ ಹೀಗೆ ಹೇಳುತ್ತಾರೆ,

Advertisement

ಪಂಜದಲ್ಲಿ ಈಗ ನಡೆಯುತ್ತಿರುವ ಶಿಬಿರವನ್ನು 3 ಸಹಕಾರಿ ಸಂಘಗಳು ಜೊತೆಯಾಗಿ ಸೇರಿ ಮಾಡುತ್ತಿದೆ.  ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಗುತ್ತಿಗಾರು ಮತ್ತು ಕಡಬ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಶ್ರಯದಲ್ಲಿ ಜೇಸಿಐ ಪಂಜ ಪಂಚಶ್ರೀ ಮತ್ತು ಲಯನ್ಸ್ ಪಂಜ  ಸಹಕಾರದೊಂದಿಗೆ ಶಿಬಿರ ನಡೆಯುತ್ತಿದೆ.

Advertisement

(ಪಂಜದಲ್ಲಿ ನಡೆಯುತ್ತಿರುವ ಶಿಬಿರ)

Advertisement

ಶಿಬಿರದ ಬಗ್ಗೆ ಕೃಷಿಕ ಸುರೇಶ್ಚಂದ್ರ ಕಲ್ಮಡ್ಕ ಹೀಗೆ ಅಭಿಪ್ರಾಯಪಡುತ್ತಾರೆ,

Advertisement

 

ಸಹಕಾರಿ ಸಂಘಗಳು ಈಗ ಅಡಿಕೆ ಮರ ಏರುವ ಶಿಬಿರವನ್ನು ಆಂದೋಲನ ರೂಪದಲ್ಲಿ ಮಾಡಿ ಕೃಷಿಕರ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇದೇ ಪ್ರೇರಣೆಯಲ್ಲಿ  ಸುಳ್ಯ ತಾಲೂಕಿನ ವಿವಿಧ ಸಹಕಾರಿ ಸಂಘಗಳು ಆಸಕ್ತಿಯನ್ನು ವಹಿಸಿವೆ. ಜಿಲ್ಲೆಯ ವಿವಿಧ ಸಹಕಾರಿ ಸಂಘಗಳೂ ಮುಂದೆ ಬಂದಿವೆ. ಹೀಗಾಗಿ ಅಡಿಕೆಗೆ ಭವಿಷ್ಯವನ್ನು ಸಹಕಾರಿ ಸಂಘಗಳೇ ರೂಪಿಸುತ್ತಿವೆ.

Advertisement

This slideshow requires JavaScript.

 

 

Advertisement

ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿ ಅಭಿಪ್ರಾಯ ಹೀಗಿದೆ,

Advertisement

 

ಪಂಜದ ಶಿಬಿರದ ತರಬೇತುದಾರರು ಇವರು,

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಬರ ಹಿನ್ನೆಲೆ | ಮೈಸೂರು ಜಿಲ್ಲೆಯಲ್ಲಿ ಪಂಪ್‌ಸೆಟ್ ಬಳಸಿ ಕೃಷಿಗೆ ನದಿ ನೀರು ಬಳಕೆ ನಿಷೇಧ |
March 27, 2024
10:01 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಪ್ರಕರಣಗಳಲ್ಲಿ ದೂರು ದಾಖಲಾಗುತ್ತಿಲ್ಲವೇಕೆ…? | ಆರೋಪಿಗಳು ಪತ್ತೆಯಾಗುತ್ತಿಲ್ಲವೇಕೆ…? |
March 27, 2024
9:32 PM
by: ದ ರೂರಲ್ ಮಿರರ್.ಕಾಂ
ಅರಣ್ಯ ಸುತ್ತಮುತ್ತ ಕೃಷಿ ಮಾಡುವ ರೈತರಿಗೆ ಕೃಷಿ ಭೂಮಿ ಮಂಜೂರಾತಿ : ಕೆಲ ಜಿಲ್ಲೆಗಳ ರೈತರಿಗೆ ಹಕ್ಕುಪತ್ರ ಬಿಡುಗಡೆ ಮಾಡಲಿರುವ ಕಂದಾಯ ಇಲಾಖೆ
March 26, 2024
11:59 PM
by: The Rural Mirror ಸುದ್ದಿಜಾಲ
ತಲಕಾವೇರಿಯಲ್ಲಿ ಮಳೆಗಾಗಿ ಪ್ರಾರ್ಥನೆ | ಈ ಬಾರಿಯಾದರು ವರುಣದೇವ ಕೃಪೆ ತೋರಲಿ..
March 26, 2024
10:33 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror