ಇಬ್ಬನಿ ಇಯರ್ ಎಂಡ್ ಟ್ರೋಫಿ-2

January 2, 2020
8:57 AM

ಸುಳ್ಯ: ಡಿ 29 ಇಬ್ಬನಿ ಸುಳ್ಯ ಸಾದರ ಪಡಿಸಿರುವ ಇಬ್ಬನಿ ಇಯರ್ ಎಂಡ್ ಟ್ರೋಫಿ ಸೀಸನ್ 2ರ ಅಂಡರ್ ಆರ್ಮ್ ಕ್ರಿಕೆಟ್ ಲೀಗ್ ಪಂದ್ಯಾಕೂಟ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಮೈದಾನದಲ್ಲಿ ಜರಗಿತು.

ಸುಳ್ಯ ವಿಧಾನ ಸಭಾ ವ್ಯಾಪ್ತಿಯ 96 ಆಟಗಾರರನ್ನು ಆಯ್ಕೆ ಮಾಡಿ ಐಪಿಯಲ್ ಮಾದರಿಯಲ್ಲಿ ಹರಾಜು ಮಾಡಿ 8 ಮಾಲಕರಿಗೆ ನೀಡಲಾಗಿತ್ತು. ಈ ಒಂದು ಪಂದ್ಯಾಕೂಟದಲ್ಲಿ ಬಿ.ಎಂ ರಫೀಕ್ ಮಾಲಿಕತ್ವದ ಬಿ.ಎಂ.ಎ ಚಾಲೆಂಜರ್ಸ್ ತಂಡವು 2019ರ ಇಬ್ಬನಿ ಇಯರ್ ಎಂಡ್ ಟ್ರೋಫಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ದ್ವಿತೀಯ ಸ್ಥಾನವನ್ನು ರಝಾಕ್ ಕೆ.ಎಂ ಮಾಲಿಕತ್ವದ ಫ್ರೆಂಡ್ಸ್ ಜಟ್ಟಿಪಳ್ಳ ತಂಡವು ತೃಪ್ತಿಪಟ್ಟುಕೊಂಡಿದೆ.

ಪಂದ್ಯಾಕೂಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಜಯಿಸಿದ ಕ್ರೀಡಾಪಟು ಸಂಶೀರ್ ಸುಳ್ಯ ಅವರು ಗಣ್ಯ ಆತಿಥಿಗಳಾಗಿ ವೇದಿಕೆಗೆ ಮೆರುಗು ನೀಡಿದರು. ಈ ಪಂದ್ಯಾಕೂಟದಲ್ಲಿ ರಾಮಚಂದ್ರ ಪೆಲ್ತಡ್ಕ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನವೀನ್ ಕುಮಾರ್ ಕಜೆ, ಅಬ್ದುಲ್ ಕಲಾಂ ಸುಳ್ಯ, ರಷೀದ್ ಜಟ್ಟಿಪಳ್ಳ, ತಾಜ್ ಅಬೂಬಕ್ಕರ್ ಜನಪ್ರಿಯ, ಶರೀಫ್ ಜಟ್ಟಿಪಳ್ಳ, ಫೈಝಲ್ ಕಟ್ಟೆಕ್ಕಾರ್, ಹಂಝ ಕಾತೂನ್ , ಶಿಹಾಬ್ ಷಾ ಜಟ್ಟಿಪಳ್ಳ, ಉಪಸ್ಥಿತರಿದ್ದರು ಇಬ್ಬನಿ ಅಧ್ಯಕ್ಷ ಖಾದರ್ ಜಟ್ಟಿಪಳ್ಳ ಸ್ವಾಗತಿಸಿ ವಂಧಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

E20 ಪೆಟ್ರೋಲ್‌ನಿಂದ ಮೈಲೇಜ್ ಕಡಿಮೆಯಾಗುತ್ತದೆಯೇ? ಹಳೆಯ ವಾಹನಗಳಿಗೆ ಅಪಾಯ ಇದೆಯೇ?
July 6, 2026
3:59 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 06-07-2026 | ಕರ್ನಾಟಕದಲ್ಲಿ ಮಳೆ ಮತ್ತಷ್ಟು ಕಡಿಮೆಯಾಗುವ ಸೂಚನೆ | ಜುಲೈ 10ರಿಂದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಸಾಧ್ಯತೆ
July 6, 2026
3:08 PM
by: ಸಾಯಿಶೇಖರ್ ಕರಿಕಳ
ಅಡಿಕೆ ಕತ್ತರಿಸಿ ಹಲಸು ನೆಟ್ಟ ಕೃಷಿಕ
July 5, 2026
11:19 PM
by: ದ ರೂರಲ್ ಮಿರರ್.ಕಾಂ
ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ
July 5, 2026
5:47 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror