ಕಾಂಗ್ರೆಸ್, ಜೆಡಿಎಸ್ ನವರಿಗೆ ಇಂದು ನಾಮದ ಮಹತ್ವ ತಿಳಿಯಿತು – ಶಾಸಕ ಅಂಗಾರ

May 23, 2019
10:40 PM
Advertisement

ಸುಳ್ಯ: ಬಿಜೆಪಿಯವರು ನಾಮ ಹಾಕುತ್ತಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ನಾಮವನ್ನು ಗೇಲಿ ಮಾಡುತ್ತಿದ್ದರು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನವರಿಗೆ ಜನರೇ ನಾಮ ಹಾಕಿದ್ದಾರೆ. ಅವರಿಗೆ ಇಂದು ನಾಮದ ಮಹತ್ವ ತಿಳಿದಿರಬಹುದು ಎಂದು ಶಾಸಕ ಅಂಗಾರ ಹೇಳಿದ್ದಾರೆ.

Advertisement

ಲೋಕಸಭಾ ಚುನಾವಣೆ ಗೆಲುವಿನ ಹಿನ್ನಲೆಯಲ್ಲಿ ಸುಳ್ಯದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದು ಐತಿಹಾಸಿಕ ಗೆಲುವು. ನರೇಂದ್ರ ಮೋದಿಯವರ ದೇಶ ಭಕ್ತಿ, ಜನಪರ ಆಡಳಿತ ಜನರಿಗೆ ಅರ್ಥ ಆಗಿದೆ ಎಂದು ಅವರು ಹೇಳಿದರು.

Advertisement
Advertisement

ನ.ಪಂ.ಗೆಲುವು ಕಾಂಗ್ರೆಸ್ ಕನಸು- ಕಂಜಿಪಿಲಿ

ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ ಲೋಕಸಭಾ ಚುನಾವಣೆಯ ಗೆಲುವು ಸುಳ್ಯ ನಗರ ಪಂಚಾಯತ್ ಚುನಾವಣೆಗೆ ದಿಕ್ಸೂಚಿ. ಈ ಗೆಲುವಿನ ಪ್ರೇರಣೆಯಿಂದ ನ.ಪಂ.ನ 20 ವಾರ್ಡ್ ಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದರು. ನಗರ ಪಂಚಾಯತ್ ಗೆಲ್ಲುವುದಾಗಿ ಕೆಲವು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅದು ಅವರ ಕನಸು ಮಾತ್ರ ಎಂದು ಕುಟುಕಿದರು.

Advertisement

ಎ.ವಿ.ತೀರ್ಥರಾಮ ಮಾತನಾಡಿದರು. ವಿನಯಕುಮಾರ್ ಕಂದಡ್ಕ, ನವೀನ್ ರೈ ಮೇನಾಲ, ಉದಯಕುಮಾರ್ ಆಚಾರ್, ಪಿ.ಕೆ.ಉಮೇಶ್, ದಾಮೋದರ ಮಂಚಿ, ಅಬ್ದುಲ್ ಕುಂಞಿ ನೇಲ್ಯಡ್ಕ, ವಿನುತಾ ಪಾತಿಕಲ್ಲು, ನವೀನ್ ಸಾರಕೆರೆ, ಶಂಕರ ಪೆರಾಜೆ, ಶೀನಪ್ಪ ಬಯಂಬು, ಸಂಜಯಕುಮಾರ್ ಪೈಚಾರ್, ಗಿರೀಶ್ ಕಲ್ಲುಗದ್ದೆ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭೋಪಾಲ್‌ ಅನಿಲ ದುರಂತ : 39 ವರ್ಷ ಕಳೆದರು ಇನ್ನೂ ಮಾಸಿಲ್ಲ ನೆನಪು : ಚುನಾವಣಾ ಫಲಿತಾಂಶದ ಹೊತ್ತಿನಲ್ಲಿ ಸಿಎಂ ಶ್ರದ್ಧಾಂಜಲಿ ಸಲ್ಲಿಕೆ
December 3, 2023
12:36 PM
by: The Rural Mirror ಸುದ್ದಿಜಾಲ
ಡಿ.24-25 ರಂದು ಪುತ್ತೂರಿನಲ್ಲಿ ಪುತ್ತಿಲ ಪರಿವಾರದಿಂದ ಶ್ರೀನಿವಾಸ ಕಲ್ಯಾಣೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ |
November 29, 2023
1:45 PM
by: ದ ರೂರಲ್ ಮಿರರ್.ಕಾಂ
ಕೊನೆಗೂ ದಕ್ಕಿದ ಬಿಡುಗಡೆಯ ಭಾಗ್ಯ | 4 ವರ್ಷದ ಬಾಲಕಿ ಸೇರಿ 3ನೇ ಬ್ಯಾಚ್‍ನ 17 ಮಂದಿಯ ಬಿಡುಗಡೆ ಮಾಡಿದ ಹಮಾಸ್ |
November 27, 2023
1:43 PM
by: The Rural Mirror ಸುದ್ದಿಜಾಲ
ಮುಗಿಯದ ಕಾವೇರಿ ವಿವಾದ | ಮತ್ತೆ ತಮಿಳುನಾಡಿಗೆ ನೀರು ಹರಿಸಲು ಕರ್ನಾಟಕಕ್ಕೆ CWRC ಸೂಚನೆ |
November 24, 2023
11:13 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror