ಕಾಡಿಗೆ “ಡಾಮರು” ಸುರಿತಾರಾ…..! ವ್ಯವಸ್ಥೆ ನೋಡಿದರೆ ನಿಮಗೇ ಅಚ್ಚರಿಯಾಗುತ್ತದೆ…….!

May 25, 2019
9:59 AM

ಸುಳ್ಯ: ರಸ್ತೆಗೆ  ಡಾಮರು ಹಾಕುವುದು , ಕಾಡಿಗೆ ಡಾಮರು ಸುರಿಯುವುದು…!.

Advertisement
Advertisement

ಇದೊಂದು ಅಚ್ಚರಿ ಹಾಗೂ ಪ್ರಶ್ನಾರ್ಹ ಸಂಗತಿ. ಆದರೆ ಈ ಬಗ್ಗೆ ಮಾತನಾಡುವವರು, ಪ್ರಶ್ನೆ ಮಾಡುವವರು ಯಾರು ?. ಅಧಿಕಾರಿಗಳು ನೋಡ್ತಾರಾ , ಇಲಾಖೆಗಳು ಬರ್ತಾವಾ ? ಜನಪ್ರತಿನಿಧಿಗಳು ಕೇಳ್ತಾರಾ ? ಜನರು ಮಾತಾಡ್ತಾರಾ ?

Advertisement

ಹೌದು, ಸುಮಾರು ಒಂದು ಪಿಕ್ ಅಪ್ ನಲ್ಲಿ ಹಿಡಿಯಬಹುದಾದಷ್ಟು ಜಲ್ಲಿ ಮಿಶ್ರಣ ಮಾಡಿರುವ ಡಾಮರು ಕಾಡಿನಲ್ಲಿ ಸುರಿಯಲಾಗಿದೆ. ಜನ   ಓಡಾಟ ವಿರಳ ಇರುವ ಪ್ರದೇಶದವಲ್ಲಿ ಈ ಡಾಮರು ಸುರಿಯಲಾಗಿದೆ. ಹಾಗಿದ್ದರೆ ಎಲ್ಲಿ  ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

 

Advertisement

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ದೈವಸ್ಥಾನದ ಬಳಿಯ ಮೊಗ್ರ ಭಜನಾ ಮಂದಿರದಿಂದ ಕೊಂಚ ದೂರದಲ್ಲಿ  ರಬ್ಬರ್ ತೋಟವೊಂದರ ಬಳಿಯ ಕಿರಾಲ್ ಬೋಗಿ ಮರದ ಪಕ್ಕ ಮಿಕ್ಸ್ ಮಾಡಿರುವ ಡಾಮರು  ಸುರಿಯಲಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಮೊಗ್ರ -ಏರಣಗುಡ್ಡೆ -ಎಡೋಣಿ ರಸ್ತೆಗೆ ಡಾಮರು ಹಾಕಲಾಗಿತ್ತು. ಇದಕ್ಕೆ ಈ ಬಾರಿ ಅಲ್ಲಲ್ಲಿ ತೇಪೆ ಮಾಡುತ್ತಾ ಬರಲಾಗಿತ್ತು. ಕೊನೆಗೆ ಉಳಿದ ಡಾಮರು ಇಲ್ಲಿ  ಸುರಿಯಲಾಗಿದೆಯೇ ಎಂಬ ಸಂದೇಹ ಇಲ್ಲಿ ಮೂಡಿದೆ.

Advertisement

 

Advertisement

ಇಲ್ಲಿರುವ ಪ್ರಶ್ನೆ ಇದಲ್ಲ. ಇದು ಗುತ್ತಿಗೆದಾರ ಹಣವೇ ಆಗಿರಬಹುದು, ಆದರೆ ಅದು ಸರಕಾರದಿಂದ ಮಂಜೂರಾಗುವ ಹಣ. ಜನರ ತೆರಿಗೆಯ ಹಣ. ಅದನ್ನು ಹೀಗೆ ಎಸೆದು ಹೋಗುವದು ಎಷ್ಟು ಸರಿ. ಮೊಗ್ರ -ಏರಣಗುಡ್ಡೆ -ಎಡೋಣಿ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಒತ್ತಾಯ ಕೇಳಿಬರುತ್ತಿದೆ. ಅಲ್ಲಲ್ಲಿ  ಹೊಂಡಗಳು ಇವೆ.  ಒಂದು ಸೇತುವೆಗೆ ಹಲವು ವರ್ಷಗಳಿಂದ ಬೇಡಿಕೆ ಇದೆ.  ಇದೇ ರಸ್ತೆಯಲ್ಲಿ ಈಗಲೂ ಕೆಲವು ಕಡೆ ಹೊಂಡಗಳು ಇವೆ. ಕನಿಷ್ಠ ಇಲ್ಲಿಗಾದರೂ ಈ ಡಾಮರು ಹಾಕಬಹುದಾಗಿತ್ತು ಎಂಬುದು ಜನರ ಒತ್ತಾಯ. ಅದೂ ಅಲ್ಲದೆ ಇದೇ ರಸ್ತೆಯನ್ನು  ಕಾಂಕ್ರೀಟ್ ರಸ್ತೆ ಮೂಲಕ ಅಭಿವೃದ್ಧಿ ಮಾಡಲಾಗಿದೆ. ಅದರ ಆರಂಭಕ್ಕೆ ಡಾಮರು ಹಾಕಬಹುದಾಗಿತ್ತು. ಅವಕಾಶಗಳು ಸಾಕಷ್ಟು ಇತ್ತು. ಅದಿಲ್ಲದೆ ಹೀಗೆ ರಸ್ತೆ ಬದಿಯ ಕಾಡಿಗೆ ಎಸೆದು ಹೋಗುವುದು  ಎಷ್ಟು ಸರಿ ಎಂಬ ಪ್ರಶ್ನೆ ಈಗ ಜನರು ಕೇಳುತ್ತಾರೆ. ಯಾವ ಜನಪ್ರತಿನಿಧಿ ಈ ಬಗ್ಗೆ ಮಾತನಾಡುತ್ತಾರೆ ? ಯಾವ ಅಧಿಕಾರಿ ಇಂತಹವರ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ? ಯಾರು ಚೌಕೀದಾರ್ ಆಗುತ್ತಾರೆ ?

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆಗಾಲದ ಖಾದ್ಯ ಮರಕೆಸು | ಮನೆಯಂಗಳದಲ್ಲಿ ಬೆಳೆದ “ಮರಕೆಸು” | ನಗರದಲ್ಲೂ ಕೆಸುವಿನ ಬೆಳೆಯ “ವಿಶ್ವಾಸ” |
July 21, 2024
11:42 PM
by: ಮಹೇಶ್ ಪುಚ್ಚಪ್ಪಾಡಿ
ಕೃಷಿ ಅರಣ್ಯ ಎಂದರೇನು? | ಸ್ಥಳೀಯ ಅನುಕೂಲತೆಗೆ ತಕ್ಕಂತೆ ಕೃಷಿ ಅರಣ್ಯದ ವಿನ್ಯಾಸ ಮುಖ್ಯ
July 20, 2024
1:01 PM
by: The Rural Mirror ಸುದ್ದಿಜಾಲ
ಮಳೆಯಬ್ಬರ ಹೆಚ್ಚಾಗುತ್ತಿದ್ದಂತೆಯೇ ಅಡಿಕೆ ಬೆಳೆಗಾರರಲ್ಲಿ ಆತಂಕ | ಶಿರಸಿಯಲ್ಲಿ ಕೊಳೆರೋಗವಂತೆ..!
July 19, 2024
1:28 PM
by: ವಿಶೇಷ ಪ್ರತಿನಿಧಿ
ಇಷ್ಟೇನಾ ಅಂತ ಕೇಳ್ಬೇಡಿ – ಪರಿಸರವನ್ನು ಪ್ಲಾಸ್ಟಿಕ್‌ ಮಾಲಿನ್ಯದಿಂದ ಕಾಪಾಡಲು ಇಷ್ಟು ಸಾಕು..
July 19, 2024
12:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror