ಕುಶಾಲನಗರದಲ್ಲಿ ಸೇನಾ ಆಯ್ಕೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ತರಬೇತಿ ಶಿಬಿರ

October 27, 2019
6:37 PM

ಮಡಿಕೇರಿ : ಭಾರತೀಯ ಸೇನೆಗೆ ಸೇರಲು ಮಡಿಕೇರಿಯಲ್ಲಿ ನಡೆದ ಸೇನಾ ಆಯ್ಕೆ ಶಿಬಿರದಲ್ಲಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಕುಶಾಲನಗರದ ಅನುಗ್ರಹ ಕಾಲೇಜಿನಲ್ಲಿ ಆರಂಭಿಸಿದ ಲಿಖಿತ ಪರೀಕ್ಷೆಯ ಉಚಿತ ಕಾರ್ಯಾಗಾರವನ್ನು ನಿವೃತ್ತ ಯೋಧರಾದ ಗಣೇಶ್ ಪೊನ್ನಪ್ಪ ಉದ್ಘಾಟಿಸಿದರು.

Advertisement
Advertisement

ನಂತರ ಮಾತನಾಡಿದ ಅವರು, ಸೇನೆಗೆ ಸೇರಲು ಈಗಾಗಲೇ ಮೆಡಿಕಲ್ ಹಾಗೂ ಫಿಸಿಕಲ್ ವಿಭಾಗದಲ್ಲಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಬಹು ಮುಖ್ಯ ಘಟ್ಟ ಲಿಖಿತ ಪರೀಕ್ಷೆ ಎದುರಿಸುವುದಾಗಿದೆ. ಕುಶಾಲನಗರದ ನಿವೃತ್ತ ಯೋಧರಾದ ಜನಾರ್ಧನ್ ಅವರ ಪರಿಶ್ರಮದಿಂದ ಬಹಳಷ್ಟು ಯುವಕರು ಇತ್ತೀಚಿನ ವರ್ಷಗಳಲ್ಲಿ ಆಯ್ಕೆಯಾಗುತ್ತಿರುವುದು ಸಂತಸದ ವಿಚಾರ. ಅಭ್ಯರ್ಥಿಗಳು ಸೇನೆಗೆ ಸೇರುವುದು ಅದೊಂದು ಬದುಕಿನ ಸೌಭಾಗ್ಯ ಎಂಬಂತೆ ಸ್ವೀಕರಿಸಿ ದೇಶ ಸೇವೆ ಮಾಡುವ ಅವಕಾಶವನ್ನು ಪಡೆದುಕೊಳ್ಳಬೇಕು, ಸತತವಾದ ಅಧ್ಯಯನ ಹಾಗೂ ಪರಿಶ್ರಮದಿಂದ ಸೇನಾ ಲಿಖಿತ ಪರೀಕ್ಷೆ ಎದುರಿಸಲು ಕರೆಕೊಟ್ಟರು.

ನಿವೃತ್ತ ಹವಾಲ್ದಾರ್ ಜನಾರ್ಧನ್ ಮಾತನಾಡಿ, ಸೇನೆಗೆ ಸೇರುವ ಮಕ್ಕಳಿಗೆ ನಾವು ಉಚಿತವಾದ ಸೇವೆ ಒದಗಿಸುತ್ತಿದ್ದೇವೆ. ನುರಿತ ಸಂಪನ್ಮೂಲ ಶಿಕ್ಷಕರಿಂದ ಜನವರಿ 16 ರ ವರೆಗೂ ಉಚಿತವಾಗಿ ಪ್ರತೀ ಶನಿವಾರ ಹಾಗೂ ಭಾನುವಾರಗಳಂದು ತರಗತಿ ಕೊಡಲಿದ್ದೇವೆ. ಅಭ್ಯರ್ಥಿಗಳು ಸಮಯ ಪಾಲನೆ ಮತ್ತು ಶಿಸ್ತಿನಿಂದ ಈ ಉಚಿತ ಶಿಬಿರದ ಸದುಪಯೋಗ ಪಡೆಯಲು ಕರೆಕೊಟ್ಟರು.

ಅನುಗ್ರಹ ಕಾಲೇಜಿನ ಪ್ರಾಂಶುಪಾಲ ಪಂಡರೀನಾಥ ನಾಯ್ಡು ಅವರು ಉಪಸ್ಥಿತರಿದ್ದರು.

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸರುಚಿ | ಹಲಸಿನ ಕಾಯಿ ಬೋಂಡಾ ರೆಸಿಪಿ – ಇದು ರುಚಿಕರ ಗ್ರಾಮೀಣ ಸ್ನ್ಯಾಕ್
February 15, 2026
6:32 AM
by: ದಿವ್ಯ ಮಹೇಶ್
ಜೀವನಪ್ರೀತಿ
February 15, 2026
6:21 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಗೋವಾದಲ್ಲಿ ಗೇರು ಕೃಷಿಗೆ ಕೋತಿಗಳ ಉಪಟಳ | ಕರಾವಳಿ ಕರ್ನಾಟಕದ ಗೇರು ಕೃಷಿಗೆ ಮುನ್ನೆಚ್ಚರಿಕೆಯ ಸಂದೇಶ ?
February 15, 2026
6:13 AM
by: ಮಿರರ್‌ ಡೆಸ್ಕ್
ಅಂಕದ “ಸುರಕ್ಷತೆ”ಯಾ? ಬದುಕಿನ “ಸುರಕ್ಷತೆ”ಯಾ? – ಗ್ರಾಮೀಣ ಶಿಕ್ಷಣದ ಮಣ್ಣಿನ ಸತ್ವ ಕಳೆದುಕೊಳ್ಳದಿರೋಣ
February 15, 2026
5:54 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror