ಕೊರೋನಾ ಭೀಕರತೆ ಇನ್ನಷ್ಟೇ ಬರಬೇಕಿದೆ | ಇನ್ನಷ್ಟು ಕ್ರಮಗಳು ಆಗಬೇಕಿದೆ | ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಎಚ್ಚರಿಕೆ

June 30, 2020
6:11 PM

ಕೊರೋನಾ ವೈರಸ್ (ಕೋವಿಡ್ -19) ಸಾಂಕ್ರಾಮಿಕ ರೋಗ ಇಲ್ಲಿಗೇ ಮುಗಿಯುತ್ತಿಲ್ಲ. ಇದರ ಭೀಕರತೆ ಇನ್ನು ಬರಬೇಕಿದೆ. ಸರ್ಕಾರಗಳು ಸರಿಯಾದ ಕ್ರಮಗಳನ್ನು ಜಾರಿಗೆ ತರಲು ಈಗಲೂ ಪ್ರಾರಂಭಿಸದಿದ್ದರೆ ವೈರಸ್ ಇನ್ನೂ ಅನೇಕ ಜನರಿಗೆ ತಗಲುತ್ತದೆ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

Advertisement
Advertisement
Advertisement
Advertisement

ಕೊರೋನಾ ವೈರಸ್ ಹರಡಲು ಪ್ರಾರಂಭವಾದ ಆರು ತಿಂಗಳ ನಂತರ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಮ್ಮೆ ಎಚ್ಚರಿಸಿದೆ.  ಕೊರೋನಾ ಬಗ್ಗೆ  ಮಾತನಾಡಿದ ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಇದುವರೆಗೆ ಕೊರೋನಾ ಟೆಸ್ಟಿಂಗ್, ಟ್ರೇಸಿಂಗ್ ಹಾಗೂ ಐಸೋಲೇಶನ್, ಕ್ವಾರಂಟೈನ್ ನಲ್ಲಿಯೇ ಕೊರೋನಾ ವೈರಸ್ ತಡೆಯ ಹಂತದಲ್ಲೇ ಉಳಿದಿದೆ. ಅದಕ್ಕಿಂತ ದಾಟಿ ಮುಂದೆ ಸಾಗಬೇಕಿದೆ. ಏಕೆಂದರೆ  “ಕೊರೋನಾ ವೈರಸ್ ಕೊನೆಗೊಂಡಿಲ್ಲ, ಇನ್ನಷ್ಟೇ ಗಂಭೀರ ಹಂತ ತಲುಪಲಿದೆ ಎಂದು ಹೇಳಲು ನನಗೆ ವಿಷಾದವಿದೆ. ನಾವು ಈಗಾಗಲೇ ಬಹಳಷ್ಟು ಕಳೆದುಕೊಂಡಿದ್ದೇವೆ. ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಮುಂದೆ ಬರಲಿದೆ ಎನ್ನುವುದಕ್ಕೆ ವೇದನೆಯಾಗುತ್ತದೆ ಎಂದರು.

Advertisement

ಈಗಾಗಲೇ ಸಾವನ್ನಪ್ಪಿದ ರೋಗಿಗಳ ಸಂಖ್ಯೆ ಈಗ 5,00,000 ಕ್ಕಿಂತ ಹೆಚ್ಚಾಗಿದೆ. ವಿಶ್ವದ ಅರ್ಧದಷ್ಟು ಪ್ರಕರಣಗಳು ಯುಎಸ್ ಮತ್ತು ಯುರೋಪಿನಲ್ಲಿವೆ ಆದರೆ ಕೋವಿಡ್ -19 ಅಮೆರಿಕದಲ್ಲಿ ಈಗ ವೇಗವಾಗಿ ಬೆಳೆಯುತ್ತಿದೆ. ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದ ಮೇಲೂ ಪರಿಣಾಮ ಬೀರುತ್ತಿದೆ, ಅಲ್ಲಿ ಜುಲೈ ಅಂತ್ಯದವರೆಗೆ ಇದು ಕಡಿಮೆಯಾಗುವ ನಿರೀಕ್ಷೆ ಇಲ್ಲ ಎಂದ ಅಧಾನೊಮ್ ಘೆಬ್ರೆಯೆಸಸ್  ನಾವೆಲ್ಲರೂ ಇದು ಮುಗಿಯಬೇಕೆಂದು ಬಯಸುತ್ತೇವೆ, ನಾವೆಲ್ಲರೂ ನಮ್ಮ ಸುಂದರ ಜೀವನವನ್ನು ಮುಂದುವರಿಸಲು ಬಯಸುತ್ತೇವೆ. ಆದರೆ ಕಠಿಣ ವಾಸ್ತವವೆಂದರೆ ಇದು ಮುಗಿಯುವುದು ದೂರದಲ್ಲಿದೆ ಎಂದರು.ಅನೇಕ ದೇಶಗಳು ಸ್ವಲ್ಪ ಪ್ರಗತಿ ಸಾಧಿಸಿದ್ದರೂ, ಜಾಗತಿಕವಾಗಿ ಸಾಂಕ್ರಾಮಿಕ ರೋಗವು ವೇಗವನ್ನು ಹೆಚ್ಚಿಸುತ್ತಿದೆ ಎನ್ನುವುದನ್ನು ಗಮನಿಸಬೇಕು ಎಂದರು. ಇಲ್ಲಿ ರಾಷ್ಟ್ರೀಯ ಏಕತೆಯ ಕೊರತೆ ಮತ್ತು ಜಾಗತಿಕ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ ಎಂದ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್,  ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನ ಉದಾಹರಣೆಗಳನ್ನು ಅನುಸರಿಸಲು ಎಲ್ಲರೂ ಗಮನಹರಿಸಬೇಕು ಎಂದರು.

( Source:REUTERS )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದುಬೈಯಿಂದ ಅಡಿಕೆ ಕಳ್ಳಸಾಗಾಣಿಕೆ ದಂಧೆ | 1.47 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ | 6 ಮಂದಿ ಬಂಧನ |
February 8, 2025
7:44 PM
by: The Rural Mirror ಸುದ್ದಿಜಾಲ
ಗ್ರಾಮೀಣ ಮಹಿಳೆಯರ ಸಶಕ್ತೀಕರಣ, ಡ್ರೋನ್ ದೀದಿ ನೆರವು | ಈವರೆಗೂ 500 ಡ್ರೋನ್ ಗಳ ವಿತರಣೆ
February 8, 2025
7:38 AM
by: The Rural Mirror ಸುದ್ದಿಜಾಲ
ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳ
February 8, 2025
7:29 AM
by: The Rural Mirror ಸುದ್ದಿಜಾಲ
ದೇಶದ 25 ಸಾವಿರ ಗ್ರಾಮಗಳಲ್ಲಿ ಸಂಪರ್ಕ ಕಲ್ಪಿಸುವ ಕ್ರಮ  | 900 ಕ್ಕೂ ಅಧಿಕ ಗ್ರಾಮಗಳಲ್ಲಿ ಮೊಬೈಲ್‌ ಟವರ್‌ ಅಳವಡಿಕೆ |
February 7, 2025
7:10 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror