ಕೊರೋನಾ ವೈರಸ್‌ – ಗಡಿಬಿಡಿ ಬೇಡ | ಡಿಸ್ಚಾರ್ಜ್‌ ಹಾಗೂ ಹೋಂ ಐಸೊಲೇಷನ್‍ನಲ್ಲಿ ಬದಲಾವಣೆ | ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಬದಲಾವಣೆ |

August 12, 2020
10:33 PM

ಕೊರೋನಾ ವೈರಸ್‌ ಸೋಂಕಿತರು ಆಸ್ಪತ್ರೆಗೆ ದಾಖಲಾದರೆ  ಡಿಸ್ಚಾರ್ಜ್‌ ಹಾಗೂ  ಹೋಂ ಐಸೊಲೇಷನ್‍ನಲ್ಲಿ ಬದಲಾವಣೆ ತರಲಾಗಿದೆ. ಕೇಂದ್ರ ಸರ್ಕಾರದ ಮಾರ್ಗ ಸೂಚಿಯ ಮೇರೆಗೆ  ಆರೋಗ್ಯ ಇಲಾಖೆ ಈ ಬದಲಾವಣೆ ತಂದಿದೆ.

. ಲಕ್ಷಣ ಇರುವವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು 10 ದಿನಕ್ಕೆ ಡಿಸ್ಚಾರ್ಜ್ ಮಾಡಲು ತೀರ್ಮಾನಿಸಲಾಗಿದೆ. ಡಿಸ್ಚಾರ್ಜ್ ಸಂದರ್ಭದಲ್ಲಿ ಯಾವುದೇ ಕೋವಿಡ್ ಟೆಸ್ಟ್ ನಡೆಸುವುದಿಲ್ಲ.ಡಿಸ್ಚಾರ್ಜ್ ಆದ ಬಳಿಕ 14 ದಿನಗಳ ಬದಲು 7 ದಿನ ಹೋಂ ಕ್ವಾರಂಟೈನ್ ಮಾಡಲಾಗುವುದು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೂ ಕೊರೊನಾ ಲಕ್ಷಣಗಳು ಕಂಡುಬಂದರೆ ಆಪ್ತಮಿತ್ರ ಹೆಲ್ಪ್ ಲೈನ್‍ಗೆ ತಿಳಿಸಬೇಕು.

  • ಕಡಿಮೆ ಮತ್ತು ಸಾಧಾರಣ ರೋಗ ಲಕ್ಷಣ ಇರುವವರನ್ನು 10 ದಿನ ಆಸ್ಪತ್ರೆಗೆ ದಾಖಲು ಮಾಡಿಕೊಂಡು ಡಿಸ್ಚಾರ್ಜ್ ಮಾಡುವ ಮೂರು ದಿನ ಮೊದಲು ಕೊರೊನಾ ಪರೀಕ್ಷೆ ನಡೆಸಿ ಲಕ್ಷಣಗಳು ಕಂಡುಬರದಿದ್ದರೆ ಬಿಡುಗಡೆ ಮಾಡಲಾಗುವುದು.
  • 10 ದಿನಗಳ ನಂತರವೂ ರೋಗ ಲಕ್ಷಣ ಮುಂದುವರಿದರೆ 17ನೆ ದಿನಕ್ಕೆ ಡಿಸ್ಚಾರ್ಜ್ ಮಾಡಲಾಗುವುದು. ಆ ಸಂದರ್ಭದಲ್ಲಿ ಕೊರೊನಾ ಪರೀಕ್ಷೆ ನಡೆಸುವುದಿಲ್ಲ. ಡಿಸ್ಚಾರ್ಜ್ ಆದ ಬಳಿಕ ಏಳು ದಿನ ಹೋಂ ಕ್ವಾರಂಟೈನ್‍ನಲ್ಲಿರಬೇಕು. 14 ದಿನ ಟೆಲಿ ಕಾನರೆನ್ಸ್ ಮಾಡಬೇಕು.
  • ಹೋಂ ಕ್ವಾರಂಟೈನ್ ಆಗುವವರು 10 ದಿನ ಮನೆಯಲ್ಲಿರಬೇಕು. ಮೂರು ದಿನಗಳೊಳಗೆ ಜ್ವರ ಬಾರದಂತಿರಬೇಕು. ಬಳಿಕ ಏಳು ದಿನ ಮನೆಯಲ್ಲೇ ಇರಬೇಕಿದ್ದು, ಪಲ್ಸ್ ಚೆಕ್ ಮಾಡಿಸಿಕೊಳ್ಳಬೇಕು
  • ಕೆಲಸಕ್ಕೆ ಹೋಗಲೇಬೇಕಾದರೆ ಕೊರೋನಾ ನೆಗೆಟಿವ್ ಸರ್ಟಿಫಿಕೆಟ್ ಪಡೆದುಕೊಳ್ಳುವುದು ಈಗ ಕಡ್ಡಾಯವಾಗಿದೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಅಭಿಯಾನಕ್ಕೆ ಚಾಲನೆ | ಕೃಷಿ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ
March 30, 2026
10:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 30-03-2026 | ಇವತ್ತಿನ ಮಳೆ ಎಲ್ಲಿ…? ಎಷ್ಟು ದಿನ ಇದೆ ಮಳೆ…?
March 30, 2026
12:06 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಹಲವೆಡೆ ಮಳೆ ; ಬೆಂಗಳೂರಿನಲ್ಲಿ ಹಗುರ ಮಳೆ ಸಾಧ್ಯತೆ
March 30, 2026
7:52 AM
by: ದ ರೂರಲ್ ಮಿರರ್.ಕಾಂ
ಮಂಗಳವಾರದಿಂದ ರಾಜ್ಯದಲ್ಲಿ ಹೋಟೆಲ್‌ಗಳಿಗೆ ಹೆಚ್ಚಿನ ವಾಣಿಜ್ಯ ಅಡುಗೆ ಸಿಲಿಂಡರ್‌ಗಳ ಸರಬರಾಜು
March 30, 2026
7:44 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror