Advertisement
ಮರ್ಕಂಜ : ಮರ್ಕಂಜದ ಗೋಳಿಯಡ್ಕದಲ್ಲಿ ಚುನಾವಣಾ ಬಹಿಷ್ಕಾರದ ಪ್ರಯುಕ್ತ ಸ್ಥಳಕ್ಕೆ ಸುಳ್ಯ ತಾಲೂಕು ತಹಶೀಲ್ದಾರ್ ಅಹಮ್ಮದ್ ಕುಂಞÂ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು.
ಊರವರ ಮನವಿಯನ್ನು ಆಲಿಸಿದ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದು, ಚುನಾವಣಾ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳಲು ತಿಳಿಸಿದರು.ಸ್ಥಳದಲ್ಲಿ ಅಳವಡಿಸಲಾಗಿದ್ದ ಬಹಿಷ್ಕಾರದ ಬ್ಯಾನರನ್ನು ತಹಶೀಲ್ದಾರ್ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು. ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಮೋನಪ್ಪ ಪೂಜಾರಿ, ಮರ್ಕಂಜ ಸೊಸೈಟಿ ಅಧ್ಯಕ್ಷ ರುಕ್ಮಯ ಗೌಡ, ಹೋರಾಟ ಸಮಿತಿ ಅಧ್ಯಕ್ಷ ಗೋವಿಂದ, ರವೀಂದ್ರ ಕೊಚ್ಚಿ, ಬಾಲಕೃಷ್ಣ ಬಲ್ಯಾಯ, ರೇಣುಕಾ ಪ್ರಸಾದ್ ಬಳ್ಕಾಡಿ ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Be the first to comment on "ಗೋಳಿಯಡ್ಕಕ್ಕೆ ತಹಶೀಲ್ದಾರ್,ಅಬಕಾರಿ ಅಧಿಕಾರಿ ಭೇಟಿ"