ಚೊಕ್ಕಾಡಿಯಲ್ಲಿ ಅಮರ ಜ್ಞಾನ ಕಾರ್ಯಕ್ರಮ

October 21, 2019
8:00 AM

ಚೊಕ್ಕಾಡಿ: ಅಮರ ಸಂಘಟನಾ ಸಮಿತಿ ಅಮರ ಮೂಡ್ನೂರು ಮತ್ತು ಪಡ್ನೂರು ಇದರ ಆಶ್ರಯದಲ್ಲಿ ಅಮರ ಜ್ಞಾನ ಕಾರ್ಯಕ್ರಮ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಚೊಕ್ಕಾಡಿ ಪ್ರೌಢಶಾಲೆ ಪ್ರಭಾರ ಮುಖ್ಯಗುರು ಚಂದ್ರಶೇಖರ ಮೂಕಮಲೆ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ ಅಧ್ಯಕ್ಷ
ಶಿವಪ್ರಸಾದ್ ದೊಡ್ಡಿಹಿತ್ಲು ಅಧ್ಯಕ್ಷರು ಅಮರ ಸಂಘಟನಾ ಸಮಿತಿ ಇವರು ವಹಿಸಿದ್ದರು. ವೇದಿಕೆಯಲ್ಲಿ ಸುಲೋಚನ ಗೌಡ ದೊಡ್ಡಿಹಿತ್ಲು ಸಂಚಾಲಕರು ಉಪಸ್ಥಿತರಿದ್ದರು.

ನಂತರ  ಸತೀಶ್ ಭಟ್ ಬಿಳಿನೆಲೆ ಇವರಿಂದ ನನ್ನ ಕನಸು ನನ್ನ ಭವಿಷ್ಯ ಪ್ರೌಢಶಿಕ್ಷಣದ ನಂತರ ಮುಂದಿನ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ  ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪೋಷಕರ ಆರೋಗ್ಯದ ಬಗ್ಗೆ ಡಾ| ಪ್ರಿಯಾಂಕ ನಾಟಿಕೇರಿ ಇವರು ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಬ್ಯಾಂಕ್ ಸೌಲಭ್ಯಗಳ ಮಾಹಿತಿಯನ್ನು ಬ್ಯಾಂಕ್ ಬರೋಡ ಕುಕ್ಕುಜಡ್ಕ ಶಾಖೆಯ ಮ್ಯಾನೇಜರ್ ನಿಡಿದರು.

ಬಳಿಕ ಅಗ್ನಿ ಶಾಮಕ ಠಾಣೆ ಸುಳ್ಯ ಇವರಿಂದ ಅಗ್ನಿ ಶಮನದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ, ಸ.ಹಿ.ಪ್ರಾ ಶಾಲೆ ಕುಕ್ಕುಜಡ್ಕ,ಸ.ಹಿ.ಪ್ರ.ಶಾಲೆ ಪೈಲಾರು, ಸ.ಹಿ.ಪ್ರ ಶಾಲೆ ಅಜ್ಜನಗದ್ದೆ, ಸ.ಹಿ.ಪ್ರ ಶಾಲೆ ದೊಡ್ಡತೋಟ, ಸ.ಹಿ.ಪ್ರಾ.ಶಾಲೆ ಶೇಣಿ ಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಭಾಗವಹಿಸಿದರು.

ಮಿಥುನ್ ಕೆರೆಗದ್ದೆ ಸದಸ್ಯರು ಸ್ವಾಗತ ನೆರವೇರಿಸಿದರು. ಪ್ರದೀಪ್ ಬೊಳ್ಳೂರು ಸ್ಥಾಪಕಾಧ್ಯಕ್ಷರು ಧನ್ಯವಾಧ ನೆರವೇರಿಸಿದರು, ಶಶಿಕಾಂತ್ ಮಿತ್ತೂರು ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?
September 8, 2026
9:43 AM
by: ದ ರೂರಲ್ ಮಿರರ್.ಕಾಂ
ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!
September 7, 2026
9:38 PM
by: ದ ರೂರಲ್ ಮಿರರ್.ಕಾಂ
ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?
September 7, 2026
8:58 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?
September 7, 2026
1:29 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror