ನಗರ ಪಂಚಾಯತ್ ಚುನಾವಣೆ : ಮತ್ತೆ ಮೂರು ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

Advertisement

ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಮತ್ತೆ ಮೂರು ವಾರ್ಡ್ ಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರಿಂದ ಒಟ್ಟು 16 ವಾರ್ಡ್ ಗಳ ಅಭ್ಯರ್ಥಿ ಘೋಷಣೆ ಪೂರ್ತಿಯಾಗಿದೆ.
ವಾರ್ಡ್ ಸಂಖ್ಯೆ 3(ಜಯನಗರ)ರಲ್ಲಿ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್, ವಾರ್ಡ್ ಸಂಖ್ಯೆ 4(ಶಾಂತಿನಗರ)ರಲ್ಲಿ ಶಂಕರ್, ವಾರ್ಡ್ ಸಂಖ್ಯೆ 6(ಬೀರಮಂಗಲ)ರಲ್ಲಿ ಧೀರಾ ಕ್ರಾಸ್ತಾ ಅಭ್ಯರ್ಥಿಗಳಾಗಲಿದ್ದಾರೆ.

Advertisement

ನಾಲ್ಕು ವಾರ್ಡ್ ಗಳಲ್ಲಿ ಮುಂದುವರಿದ ಬಿಕ್ಕಟ್ಟು:

Advertisement
Advertisement

20 ವಾರ್ಡ್ ಗಳಲ್ಲಿ 16 ವಾರ್ಡ್ ಗಳ ಅಭ್ಯರ್ಥಿ ಘೋಷಣೆ ಅಂತಿಮಗೊಳಿಸಿದರೂ ನಾಲ್ಕು ವಾರ್ಡ್ ಗಳ ಬಿಕ್ಕಟ್ಟು ಮುಂದುವರಿದಿದೆ. ವಾರ್ಡ್ ಸಂಖ್ಯೆ  12(ಕೆರೆಮೂಲೆ),  13(ಬೂಡು), 15(ಗಾಂಧಿನಗರ-ನಾವೂರು), 17(ಬೋರುಗುಡ್ಡೆ) ವಾರ್ಡ್ ಗಳಲ್ಲಿ ಅಭ್ಯರ್ಥಿ ಘೋಷಣೆ ಆಗಿಲ್ಲ. ಇಲ್ಲಿ ಆಕಾಂಕ್ಷಿಗಳ ಪಟ್ಟಿ ಜಾಸ್ತಿ ಇರುವುದರಿಂದ ಮತ್ತು ಪ್ರಮುಖ ನಾಯಕರು ಆಕಾಂಕ್ಷಿಗಳಾಗಿರುವ ಕಾರಣ ಅಭ್ಯರ್ಥಿ ಆಯ್ಕೆ ನೇತೃತ್ವಕ್ಕೆ ಕಗ್ಗಂಟಾಗಿದೆ.

Advertisement

ಈ ವಾರ್ಡ್ ಗಳಲ್ಲಿ ಅಭ್ಯರ್ಥಿ ಆಯ್ಕೆ ಮಂಗಳವಾರ ಸಂಜೆಯೊಳಗೆ ಪೂರ್ತಿ ಮಾಡುವುದಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯನ್.ಜಯಪ್ರಕಾಶ್ ರೈ ತಿಳಿಸಿದ್ದಾರೆ.

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ನಗರ ಪಂಚಾಯತ್ ಚುನಾವಣೆ : ಮತ್ತೆ ಮೂರು ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ"

Leave a comment

Your email address will not be published.


*