ಪಂಜದಲ್ಲಿ ವ್ಯಕ್ತಿ ನಾಪತ್ತೆ: ನೀರು ಪಾಲಾಗಿರುವ ಸಂದೇಹ , ಮುಂದುವರಿದ ಶೋಧಕಾರ್ಯ

September 5, 2019
9:00 AM

ಪಂಜ: ಅನಾರೋಗ್ಯ ಹಿನ್ನಲೆಯಲ್ಲಿ ಔಷಧಿ ತರಲೆಂದು ಪೇಟೆಗೆ ತೆರಳಿದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಪಂಜ ಸಮೀಪದ ಕೂತ್ಕುಂಜ ಗ್ರಾಮದಲ್ಲಿ ಬುಧವಾರ ನಡೆದಿದೆ.
ಕೂತ್ಕುಂಜ ಕುದ್ವ ಶೇಷಪ್ಪ ಗೌಡ ನಾಪತ್ತೆಯಾದ ವ್ಯಕ್ತಿ. ಅವರು ಪಲ್ಲೋಡಿ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು ಈ ಹಿನ್ನಲೆಯಲ್ಲಿ ಬುಧವಾರ ಪಂಜದ ಹೊಳೆಯಲ್ಲಿ ಅವರ ಹುಡುಕಾಟ ನಡೆಯಿತು.

ಮಂಗಳವಾರ ಶೇಷಪ್ಪ ಗೌಡರು ಮೈ ಹುಷಾರಿಲ್ಲ ಎಂದು ಮನೆಯವರಲ್ಲಿ ಹೇಳಿ ಪಂಜ ಪೇಟೆಗೆ ತೆರಳಿದ್ದರು. ಬಳಿಕ ಅವರು ಮರಳಿ ಮನೆಗೆ ಬಂದಿರಲಿಲ್ಲ. ಅವರನ್ನು ಹುಡುಕುತ್ತ ಮಗ ಪಂಜದ ಕಡೆ ಹೊರಟಿದ್ದರು. ಕಾಲು ದಾರಿಯಲ್ಲಿ ಹುಡುಕುತ್ತ ಹೋಗುತಿದ್ದಾಗ ತೋಟದ ಪಕ್ಕ ಹರಿಯುವ ತೋಡಿಗೆ ಹಾಕಿದ್ದ ಮರದ ಪಾಲದ ಬದಿಗೆ ಅಳವಡಿಸಿದ ಅಡ್ಡ ತುಂಡಾಗಿ ಬಿದ್ದಿರುವುದು ಕಂಡು ಬಂದಿತ್ತು. ಸಂಶಯಗೊಂಡು ಹುಡುಕಾಟ ನಡೆಸಿದಾಗ ತೋಡಲ್ಲಿ ಅವರ ಚಪ್ಪಲಿ ಪತ್ತೆಯಾಗಿತ್ತು.

ಅವರು ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಶಂಕೆ  ಹಿನ್ನಲೆಯಲ್ಲಿ ರಾತ್ರಿಯೇ ಗ್ರಹರಕ್ಷಕ ದಳದವರನ್ನು ಹಾಗೂ ಮುಳುಗು ತಜ್ಞರನ್ನು ಕರೆಯಿಸಿ ಬುಧವಾರ ಹುಡುಕಾಟ ನಡೆಸಲಾಯಿತು. ಸಂಜೆ ತನಕವೂ ಯಾವುದೇ ಸುಳಿವು ದೊರಕಿಲ್ಲ. ಸ್ಥಳಕ್ಕೆ ಸುಳ್ಯ ತಹಶೀಲ್ದಾರ್ ಕುಂಞ ಅಹಮ್ಮದ್ ಭೇಟಿ ನೀಡಿ ಮಾಹಿತಿ ಪಡೆದರು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದಾವಣಗೆರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ | ಬಾಡಿಗೆ ಆಧಾರದಲ್ಲಿ ಖಾಸಗಿ ಕೊಳವೆಬಾವಿ
March 16, 2025
7:53 AM
by: The Rural Mirror ಸುದ್ದಿಜಾಲ
ಯಾದಗಿರಿ ಜಿಲ್ಲೆಗೆ ತಾಪಮಾನ ಎಚ್ಚರಿಕೆ | ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆ
March 16, 2025
7:36 AM
by: The Rural Mirror ಸುದ್ದಿಜಾಲ
ಏಪ್ರಿಲ್ 30 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
March 16, 2025
7:29 AM
by: The Rural Mirror ಸುದ್ದಿಜಾಲ
ರೈತರಿಗೆ ಕೃಷಿ ಚಟುವಟಿಕೆ ಜೊತೆಗೆ ಜಾನುವಾರು ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ
March 16, 2025
7:24 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror