ಪಾಲ್ತಾಡಿ ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ,ಪುಸ್ತಕ ವಿತರಣೆ

Advertisement

ಸವಣೂರು: ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಪಾಲ್ತಾಡಿ ಹಾಗೂ ಬಿಲ್ಲವ ಮಹಿಳಾ ವೇದಿಕೆ ಪಾಲ್ತಾಡಿ ಇದರ ವಾರ್ಷಿಕ ಮಹಾಸಭೆ ,ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಬೊಳಿಯಾಲ ಜನಾರ್ಧನ ಬಂಗೇರ ಅವರ ಮನೆಯಲ್ಲಿ ನಡೆಯಿತು.

Advertisement

ಕಾರ್ಯಕ್ರಮವನ್ನು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಉದ್ಘಾಟಿಸಿದರು. ಬಿಲ್ಲವ ಸಂಘ ಪಾಲ್ತಾಡಿ ಗ್ರಾಮ ಸಮಿತಿ ಅಧ್ಯಕ್ಷ ಕರುಣಾಕರ ಸಾಲಿಯಾನ್ ಕಲ್ಲಕಟ್ಟ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಕಾರ್ಯದರ್ಶಿ ಕೇಶವ ಬೆದ್ರಾಳ, ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಕಾರ್ಯನಿರ್ವಹಣಾ„ಕಾರಿ ಆರ್.ಸಿ.ನಾರಾಯಣ ರೆಂಜ, ಬಿಲ್ಲವ ಸಂಘದ ಕುಂಬ್ರ ವಲಯ ಸಂಚಾಲಕ ಕೋಚಣ್ಣ ಪೂಜಾರಿ ಎಂಡೆಸಾಗು,ಉದ್ಯಮಿ ವಜ್ರಾಕ್ಷ ಎಂ, ಮೋನಪ್ಪ ಪಿ ಕೆಯ್ಯೂರು ದೇವಿನಗರ,ಸವಣೂರು ಗ್ರಾಮ ಪಂಚಾಯತ್ ಸದಸ್ಯ ದಿವಾಕರ ಬಂಗೇರ ಬೊಳಿಯಾಲ,ಉದ್ಯಮಿ ರೋಶನ್ ಬಂಗೇರ ಬಾಲಯ ಶುಭಹಾರೈಸಿದರು.
ಬಿಲ್ಲವ ಸಂಘದ ಪಾಲ್ತಾಡಿ ಗ್ರಾಮ ಸಮಿತಿ ಕಾರ್ಯದರ್ಶಿ ವಾರಿಜಾ ಯತೀಶ್ ಪಲ್ಲತ್ತಡ್ಕ,ಜತೆ ಕಾರ್ಯದರ್ಶಿ ಮೋಹಿತ್ ಬೈಲಮೂಲೆ,ಕೋಶಾಧಿಕಾರಿ ವಿನೀತ್ ಕಲ್ಲಕಟ್ಟ,ಸದಸ್ಯರಾದ ತಾರಾನಾಥ ಬೊಳಿಯಾಲ,ಗುರುಕಿರಣ್ ಬೊಳಿಯಾಲ,ತಾರಾನಾಥ ಸಾಲಿಯಾನ್ ಕಲ್ಲಕಟ್ಟ, ರಾಮಚಂದ್ರ ಸಾಲಿಯಾನ್,ಪ್ರಕಾಶ್ ಪಾಲ್ತಾಡಿ,ಸಚ್ಚೀಂದ್ರ ಸುವರ್ಣ ಬೊಳಿಯಾಲ,ವಿಶ್ವನಾಥ ಪೂಜಾರಿ ಬೊಳಿಯಾಲ,ರಮಾನಾಥ ಬೊಳಿಯಾಲ,ದಿವಾಕರ ಬಂಗೇರ ಬೊಳಿಯಾಲ,ಜಗದೀಶ್ ಕಲ್ಲಕಟ್ಟ,ಪ್ರವೀಣ್ ಸಾಲಿಯಾನ್ ಕಲ್ಲಕಟ್ಟ,ಮೋಹನ್‍ದಾಸ್ ಪಾಲ್ತಾಡಿ,ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋಧಾ ಹಸಂತಡ್ಕ,ಉಪಾಧ್ಯಕ್ಷೆ ಕುಸುಮಾ ಪೆಲತ್ತಡ್ಕ ಉಪಸ್ಥಿತರಿದ್ದರು.

Advertisement
Advertisement

ಇದೇ ಸಂದರ್ಭದಲ್ಲಿ ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾಗಿ ಆಯ್ಕೆಯಾದ ಗುರುಕಿರಣ್ ಬೊಳಿಯಾಲ , ನವದಂಪತಿ ತಾರಾನಾಥ ಸ್ವಾತಿ ಅವರನ್ನು ತಾಲೂಕು ಘಟಕದ ಅಧ್ಯಕ್ಷ ಜಯಂತ ನಡುಬೈಲು ಅಭಿನಂದಿಸಿದರು.ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಕರುಣಾಕರ ಸಾಲ್ಯಾನ್ ಸ್ವಾಗತಿಸಿ, ದೇವಿಕಾ ಸುವರ್ಣ ಬೊಳಿಯಾಲ ವಂದಿಸಿದರು.ವೇಣುಗೋಪಾಲ ಬೊಳಿಯಾಲ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಪಾಲ್ತಾಡಿ ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ,ಪುಸ್ತಕ ವಿತರಣೆ"

Leave a comment

Your email address will not be published.


*