ಬಳ್ಪದ ಬೋಗಾಯನಕೆರೆಯಲ್ಲಿ ಕೆಸರು ಇದೆ ಮಾರಾಯ್ರೆ….!

April 28, 2019
7:29 AM

ಬಳ್ಪ: ಬಳ್ಪದ ಬೋಗಾಯನ ಕೆರೆ ಸಂಪೂರ್ಣ ಬತ್ತಿಹೋಗಿದೆ. ಕೆರೆಯನ್ನು ಹೂಳೆತ್ತಿ ಪುನಶ್ಚೇತನಗೊಳಿಸಲು ಇದು ಸಕಾಲವಾಗಿದೆ. ಸುಮಾರು 1.5 ಎಕ್ರೆ ವಿಸ್ತೀರ್ಣದ ಕೆರೆಯಲ್ಲಿ ಸಂಪೂರ್ಣ ಹೋಳೇ ತುಂಬಿಕೊಂಡ ಕಾರಣ ನೀರಿಲ್ಲದೆ ಕೆರೆ ಬರಿದಾಗಿದೆ.

Advertisement
Advertisement
Advertisement

ಸಂಸದರ ಆದರ್ಶಗ್ರಾಮ ಯೋಜನೆಯಲ್ಲಿ ಅಭಿವೃದ್ಧಿ ಕಾಣುತ್ತಿರುವ ಬಳ್ಪದಲ್ಲಿನ ಬೋಗಾಯನ ಕೆರೆಗೆ ಐತಿಹಾಸಿಕ ಮಹತ್ವವೂ ಇದೆ. ಕದಂಬರ ಕಾಲದಲ್ಲಿ ಕಟ್ಟಿಸಲಾದ ಕೆರೆ ಎಂದು ಇತಿಹಾಸಗಳಿಂದ ತಿಳಿಯುತ್ತದೆ. ಈ ಕೆರೆ ಹಿಂದೆ ಹಲವು ಪ್ರದೇಶಗಳಿಗೆ ನೀರುಣಿಸುತ್ತಿತ್ತು. ಕಾಲಾನಂತರದಲ್ಲಿ ಸರಿಯಾದ ನಿರ್ವಹಣೆಯಿಲ್ಲದೇ ಹೂಳು ತುಂಬಿಕೊಂಡಿದ್ದು ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ತುಂಬಿಕೊಂಡಿರುತ್ತದೆ.
ಈ ಇತಿಹಾಸ ಪ್ರಸಿದ್ಧ ಕೆರೆ ಅಭಿವೃದ್ಧಿಯಾಗಬೇಕು, ಸಂಸದರ ಆದರ್ಶ ಗ್ರಾಮಕ್ಕೆ ಕೀರೀಟವಾಗಬೇಕು ಎಂಬ ಕನಸು ಸ್ಥಳಿಯ ಜನರದ್ದು ಆಗಿತ್ತು. ಆದರೆ ಅಭಿವೃದ್ಧಿ ಭಾಗ್ಯ ಕಂಡಿರಲಿಲ್ಲ. ಈ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸಬಹುದು ಎಂಬ ಸಲಹೆಯೂ ಇದೆ. ಇದಕ್ಕಾಗಿ ಮಂಗಳೂರಿನ ತೋಟಗಾರಿಕಾ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಯನ್ನು ಪರಿಶೀಲನೆ ನಡೆಸಿದ್ದು ಕೆರೆಯನ್ನು ಅಭಿವೃದ್ಧಿ ಪಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಅಲ್ಲದೇ ಕೆರೆಯ ಪಕ್ಕದಲ್ಲೇ ಪುಷ್ಟವನವನ್ನೂ ನಿರ್ಮಾಣ ಮಾಡುವ ಯೋಜನೆ ತಯಾರಾಗಿದೆ.

Advertisement

ಸಂಪೂರ್ಣ ಬರಿದು:

ಕೆರೆ ಈಗ ಸಂಪೂರ್ಣವಾಗಿ ಬರಿದಾಗಿದ್ದು ಕೆರೆಯನ್ನು ಅಭಿವೃದ್ಧಿಪಡಿಸಲು ಇದು ಸಕಾಲವಾಗಿದೆ. ನೀರಿಲ್ಲದೇ ಇರುವ ಕಾರಣ ಕೆರೆಯ ಹೂಳೆತ್ತುವುದು ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಇಲಾಖೆಗಳು ಮುತುವರ್ಜಿ ವಹಿಸಬೇಕಿದೆ.

Advertisement

ಹಿಂದೊಮ್ಮೆ ಹೂಳು ತೆಗೆಯಲಾಗಿತ್ತು:

ಕೆಲ ವರ್ಷದ ಹಿಂದೊಮ್ಮೆ ಈ ಕೆರೆಯ ಹೂಳು ತೆಗೆಯಲಾಗಿತ್ತು. ಈ ಹೂಳನ್ನು ಕೆರೆಯ ಮೇಲ್ಭಾಗದಲ್ಲಿ ಹಾಕಲಾಗಿತ್ತು. ಮಳೆಗಾಲ ಮತ್ತೆ ಅದೇ ಕೆಸರು ಮಣ್ಣು ಕೆರೆಗೆ ಸೇರಿತ್ತು. ಹೂಳು ಈ ಬಾರಿ ತೆಗೆಯುವುದಿದ್ದರೆ ಮತ್ತೆ ಅದೇ ಸ್ಥಿತಿ ಆಗದಿರಲಿ ಎಂಬುದು ಸ್ಥಳೀಯರ ಒತ್ತಾಯ.

Advertisement

ಕೆರೆ ಅಭಿವೃದ್ಧಿ ಬಗ್ಗೆ ಮಾತನಾಡಿದ ಬಳ್ಪ ಪಿಡಿಒ ಶ್ಯಾಮ ಪ್ರಸಾದ್, “ಕೆರೆಯ ದುರಸ್ಥಿಗೆ ಇಲಾಖೆಗಳಿಂದ 1.25 ಕೋಟಿ ರೂ. ಬಿಡುಗಡೆ ಮಾಡುವ ಯೋಜನೆ ತಯಾರಾಗಿರುವ ಮಾಹಿತಿ ಇದೆ. ಚುನಾವಣಾ ಘೋಷಣೆ ಹಾಗೂ ನೀತಿ ಸಂಹಿತೆ ಇರುವ ಕಾರಣ ಮುಂದಿನ ಕ್ರಮಗಳು ಸ್ಥಗಿತಗೊಂಡಿವೆ” ಎನ್ನುತ್ತಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ | ಸಂಕ್ರಾಂತಿ ಶುಭತರಲಿ
January 14, 2025
7:21 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 13-01-2025 | ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಮುಂದೆ ತಾಪಮಾನ ಏರಿಕೆ ನಿರೀಕ್ಷೆ |
January 13, 2025
1:18 PM
by: ಸಾಯಿಶೇಖರ್ ಕರಿಕಳ
ಸಂಸ್ಕೃತ ಕೈಬಿಟ್ಟರೆ ಕನ್ನಡಕ್ಕೇ ನಷ್ಟ  | ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯ
January 12, 2025
9:20 PM
by: The Rural Mirror ಸುದ್ದಿಜಾಲ
ದೇಶದಲ್ಲೇ ಅಪರೂಪವಾದ ಜೀವ ವೈವಿಧ್ಯತೆ ಉತ್ತರ ಕನ್ನಡ ಜಿಲ್ಲೆಯಲ್ಲಿದೆ
January 12, 2025
9:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror