ಬೆನ್ನತ್ತಿ ಬಂದ ಮಾಯೆ

May 10, 2019
12:43 AM
ಬೆಳಕನು ಕಾಣಲು‌ ಹಂಬಲಿಸಿ
ಕತ್ತಲೆಯ ಜಗದಿಂದ ಹೊರಬಂದೆ
ಬೆನ್ನ ಹಿಂದೆಯೇ ಮತ್ತಾವುದೋ ಕರಿ ಛಾಯೆ
ನನ್ನ ಹಿಂಬಾಲಿಸಲೆಂದೇ ಬಂದಂತಿದೆ
ಎಲ್ಲರೂ ಅಪರಿಚಿತರು ಕಂಡೊಮ್ಮೆ ಬೆರಗಾದೆ
ಅಮ್ಮ , ಅಪ್ಪ‌ ,ಅಜ್ಜ ,ಅಜ್ಜಿ ಎಂದವರು ಪರಿಚಯಿಸಿದರು
ಹೌದು! ಅಪರಿಚಿತರಲ್ಲ ಇವರು ನನ್ನವರು
ಸದಾ ನನ್ನ ಬೆನ್ನತ್ತಿರುವ ಆ ವ್ಯಾಘ್ರ ರೂಪ ಯಾರದು?
ಹೆಜ್ಜೆ ಕಲಿತೆ, ಓಡಲರಿತೆ‌ ಬಿಡಲಿಲ್ಲ‌ ಮಾಯೆ
ಹೋದಲೆಲ್ಲಾ ನನ್ನನ್ನೇ ಕೈ‌ ಬೀಸಿ ಕರೆಯುತಿದೆ
ಭಕ್ತಿಯಿಂದ ಬೇಡಿದೆ, ಕೈಯಲ್ಲಿದ್ದ ಹಣ ಸುರಿದೆ
ಇಲ್ಲ  ಅದು ಹಿಂಬಾಲಿಸಿದುದು ನನ್ನನ್ನೇ!
ಏಕೋ ಹಿಂತಿರುಗಿ ಮಾತನಾಡಬೇಕೆಸಿತು
ಇದು ನಿನ್ನ ಮನೆಯಲ್ಲ‌ ಎಂದು‌ ಮತ್ತೆ ಕರೆಯಿತು
ಇಲ್ಲಿರುವವರು ನನ್ನವರು ನಾ ಬರಲೊಲ್ಲೆ ಎಂದೆ
ಮತ್ತದೇ ದನಿ “ಅಲ್ಲಿದೆ ನಿನ್ನ ಮನೆ”
ಮಾಯೆಯ ಕಣ್ತಪ್ಪಿಸಿ ಓಡಿ ಸೋತು ಹೋದೆ
ನಾನೇ ಮನೆಯ ದಾರಿ ಹುಡುಕಿ ಮಾಯೆಯ ಕರೆದೆ…
ಬರಲಿಲ್ಲ ಅವಳು ಬಲು ಮಾಟಗಾತಿ..
ಅತ್ತು ಕರೆದು ದಾರಿ ತೋರೆಂದೆ ಬಗ್ಗಲಿಲ್ಲ ಅವಳು
ಮತ್ತೋಮ್ಮೆ ಅವಳೇ ಬಂದಳು ನನ್ನದು ಮೊಂಡುತನ
ಬರಲಿಲ್ಲವೆಂದರೂ ಬಿಡಲಿಲ್ಲ ಅವಳು
ಕೈ ಹಿಡಿದು ಆ ಮನೆಯ ದಾರಿ ತೋರಿದಳು
ಮತ್ತೆಂದು ಈ ಮನೆಗೆ ದಾರಿ ಸಿಗದಂತೆ ಮಾಯ ಮಾಡಿದಳು..
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಉತ್ತಮ ಆರೋಗ್ಯಕ್ಕಾಗಿ ಅಶ್ವಗಂಧ | ಅಶ್ವಗಂಧದ ಉಪಯೋಗಗಳು ಕೇಳಿದ್ರೆ, ನಿಜಕ್ಕೂ ಅಚ್ಚರಿಪಡುವಿರಿ…!
September 15, 2023
2:06 PM
by: The Rural Mirror ಸುದ್ದಿಜಾಲ
ಅಡಿಕೆ ಬೆಲೆ ಮತ್ತು ಬೆಳೆ ಎರಡೂ ಅತಿ‌ ಶೀಘ್ರವಾಗಿ ಬಿದ್ದು ಹೋಗಲಿದೆ….! | “ಇನ್ನು ಅಡಿಕೆ ಗೆ ಭವಿಷ್ಯವಿಲ್ಲ…!”
September 10, 2023
10:38 AM
by: ಪ್ರಬಂಧ ಅಂಬುತೀರ್ಥ
ಒಂದು ಆಹ್ವಾನ….! | ಒಂದು ಟ್ವೀಟ್….!‌ | ವಿದೇಶದಲ್ಲೂ ಸದ್ದು ಮಾಡಿತು ರಿಪಬ್ಲಿಕ್‌ ಆಫ್‌ ಭಾರತ್‌ |
September 6, 2023
3:36 PM
by: ದ ರೂರಲ್ ಮಿರರ್.ಕಾಂ
ಮಳೆ ಬಾರದಿದ್ದರೆ ರೈತರಿಗಷ್ಟೇ ನಷ್ಟವಾ..? | ರೈತ ಬೆಳೆದದ್ದನ್ನು ಉಣ್ಣುವ ನಮಗೂ ಕಾದಿದೆ ಸಂಕಷ್ಟ…? | ಜಗತ್ತು ನಿಂತಿರುವುದು ರೈತನ ಮೇಲೆ….! |
September 5, 2023
3:35 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror