ಬೆಳ್ಳಾರೆ ಪೇಟೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಬೇಕಂತೆ….!

July 5, 2019
9:00 AM

ಗ್ರಾಮೀಣ ಭಾಗದಲ್ಲಿ ಅಲ್ಲ, ಇದು ಬೆಳ್ಳಾರೆ ಪೇಟೆಯ ಪ್ರಶ್ನೆ. ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲಿ ಹರಿಯುತ್ತದೆ, ಜನರಿಗೆ ಅಭಿಷೇಕವಾಗುತ್ತದೆ. ಸೂಕ್ತ ಕ್ರಮವಾಗಬೇಕು, ಚರಂಡಿ ವ್ಯವಸ್ಥೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನಹರಿಸಬೇಕಿದೆ.

ಭರ್ಜರಿ ಮಳೆ ಬಂದರಂತೂ ಸಾಕು ಬೆಳ್ಳಾರೆ ಪೇಟೆಯ ರಸ್ತೆ ಮೇಲೆ ಸಂಪೂರ್ಣ ಚರಂಡಿ ನೀರು ಹರಿದು ಪೇಟೆಯೇ ಹೊಳೆಯಂತಾಗುತ್ತದೆ. ಅತಿಯಾದ ನೀರಿನ ಹರಿವಿನಿಂದ ನಡು ಪೇಟೆಯ ರಸ್ತೆಯೇ ಸಂಪೂರ್ಣ ಕೆಸರುಮಯವಾಗಿ ವಾಹನ ಸವಾರರು ಹಾಗು ಪಾದಾಚಾರಿಗಳು ಸಂಕಷ್ಟ ಎದುರಿಸುವಂತಾಗಿದೆ. ಇದಕ್ಕೆಲ್ಲ ಕಾರಣ ಬೆಳ್ಳಾರೆ ಪೇಟೆಯಲ್ಲಿರುವ ಅಸಮರ್ಪಕ ಚರಂಡಿ ವ್ಯವಸ್ಥೆ.

ಬೆಳ್ಳಾರೆ ಮೇಲಿನ ಪೇಟೆಯ ಬಸ್ ನಿಲ್ದಾಣ ಎದುರಿನಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದ್ದು ಕೆಸರು ನೀರು ನಿಂತು ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ಪ್ರಯಾಣಿಕರಿಗೆ ಕೆಸರಿನ ಅಭಿಷೇಕವಾಗುತ್ತಿದೆ. ಇದರಿಂದ ಕೆಲವು ಬಸ್‍ಗಳು ನಿಲ್ದಾಣದೊಳಗೆ ಬಾರದೆ ರಸ್ತೆಯ ಮೇಲೆಯೆ ಹಲವು ಬಾರಿ ನಿಲುಗಡೆಯೂ ಮಾಡುವಂತಾಗಿದೆ. ನಿಲ್ದಾಣದ ಮುಂಭಾಗದಲ್ಲಿ ನಡೆಯಲಾರದಷ್ಟು ಕೆಸರಿನ ನೀರು ತುಂಬುತ್ತಿರುತ್ತದೆ. ಕೆಸರು ನೀರಿನೊಂದಿಗೆ ಪೇಟೆಯ ತ್ಯಾಜ್ಯಗಳು ಬೆರೆತಿರುವುದನ್ನು ಜೋರು ಮಳೆ ಬಂದಾಗ ಕಾಣ ಸಿಗುವುದು.
ಕೆಳಗಿನ ಪೇಟೆಯ ರಸ್ತೆಯೂ ಕೆಸರು ಗದ್ದೆಯಂತೆ ಬೆಳ್ಳಾರೆಯ ಮೇಲೆ ಪೇಟೆಗಿಂತ ಕೆಳಗಿನ ಪೇಟೆಯ ಸ್ಥಿತಿಯೂ ಭಿನ್ನವಾಗಿಲ್ಲ. ಇಲ್ಲಿಯೂ ಚರಂಡಿಯ ವ್ಯವಸ್ಥೆ ಸರಿಯಾಗಿಲ್ಲ. ಅಸಮರ್ಪಕವಾದ ಸ್ಲ್ಯಾಬ್ ಅಳವಡಿಕೆಯಿಂದಾಗಿ ಚರಂಡಿಯೊಳಗಿನ ನೀರು ತುಂಬಿ ರಸ್ತೆಯ ಮೇಲೆ ಹರಿಯುವಂತಗಿದೆ. ಉದಾಹರಣೆಯಾಗಿ ವರ್ಷದ ಮೊದಲ ಮಳೆಗೆ ಬೆಳ್ಳಾರೆಯ ಹಲವರಿಗೆ ಕೆಸರಿನ ಸಿಂಚನವಾಗಿದೆ.

ಅಭಿವೃದ್ದಿಯ ಶಿಖರದೆಡೆಗೆ ದಾಪುಗಾಲಿಡುತ್ತಿರುವ ಬೆಳ್ಳಾರೆ ಪೇಟೆಯ ಶೋಭೆಯನ್ನು ಇಂತಹ ಸಮಸ್ಯೆಗಳು ಕುಂದಿಸುತ್ತಿದೆ. ಪ್ರತಿ ನಿತ್ಯ ಪೇಟೆಯ ರಸ್ತೆಯ ಮೇಲೆ ನೂರಾರು ವಿದ್ಯಾರ್ಥಿಗಳು, ವೃದ್ದರು ನಡೆದುಕೊಂಡು ಹೋಗುತ್ತಿರುತ್ತಾರೆ. ಕೆಸರಿದ್ದಾಗ ನಡೆದುಕೊಂಡು ಹೋಗಲು ಕಷ್ಟಪಡುವ ಇಂಥಹವರು ಕೆಲವು ಬಾರಿ ಕೆಳ ಪೇಟೆಯಿಂದ ಮೇಲೆ ಪೇಟೆಗೆ ಅಂದರೆ 100ರಿಂದ 150 ಮೀ. ರಸ್ತೆಯನ್ನೂ ರಿಕ್ಷಗಳಲ್ಲಿ ಹೋಗುವ ಪರಿಸ್ಥಿಯುಂಟಾಗಿದೆ.

ಚರಂಡಿಯ ದುಸ್ಥಿತಿಯಿಂದಾಗಿ ಉಂಟಾಗುತ್ತಿರುವ ತೊಂದರೆಯನ್ನು ಕಣ್ಣಾರೆ ಕಂಡ ಹಲವು ಜನರು ಮಳೆಗಾಲಕ್ಕೂ ಮೊದಲೇ ಚರಂಡಿ ಸರಿಪಡಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿದ್ದರೆ ಈ ಸಮಸ್ಯೆಯನ್ನು ತಪ್ಪಿಸಬಹುದಿತ್ತೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚರಂಡಿ ಸರಿಪಡಿಸಿ ಸರಾಗವಾಗಿ ನೀರು ಹರಿದುಹೋಗಲು ವ್ಯವಸ್ಥೆ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲಾಗಿದೆ. – ಶಕುಂತಳಾ ನಾಗರಾಜ್ ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್‌ಗೆ ಮಂಗಳೂರಿನಲ್ಲಿ ಅಭಿನಂದನೆ – ಪುಟ್ಟ ಕಲಾವಿದನ ಸಾಧನೆಯ ಹಿಂದಿನ ಪಯಣಕ್ಕೆ ಮೆಚ್ಚುಗೆ
September 14, 2026
2:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?
September 14, 2026
12:51 PM
by: ಸಾಯಿಶೇಖರ್ ಕರಿಕಳ
ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ
September 14, 2026
11:33 AM
by: ದ ರೂರಲ್ ಮಿರರ್.ಕಾಂ
ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ
September 14, 2026
11:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror