ಬೋರ್ಡ್ ಬೇರೆ……. ಕಾಮಗಾರಿ ಬೇರೆ….!

May 14, 2019
1:00 PM

ಆಲಂಕಾರು : ಇಲ್ಲೊಂದು ಕಾಮಗಾರಿ ನಡೆದಿದೆ… ಆದರೆ ಕಾಮಗಾರಿ ಹೆಸರು , ಊರಿನ ಹೆಸರು ಮಾತ್ರಾ ಬೇರೆ…!

Advertisement
Advertisement
Advertisement

ಪುತ್ತೂರು ತಾಲ್ಲೂಕಿನ ಕೊಯಿಲ ಗ್ರಾಮದ ಕುದ್ಲೂರು ಅಂಗನವಾಡಿ ಕೇಂದ್ರದ ಬಳಿ ಕೆಲ ಸಮಯದ ಹಿಂದೆ ಕಾಂಕ್ರೀಟ್ ರಸ್ತೆ ಯಾಗಿತ್ತು. ಈ ಕಾಮಗಾರಿಗೆ 2 ವರ್ಷ ಕಳೆಯಿತು. ಆದರೆ ಬೋರ್ಡ್ ಹಾಕಿದವರು ಮಾತ್ರಾ ಈ ಕಾಮಗಾರಿ ಪ್ರದೇಶ ಗಮನಿಸಲಿಲ್ಲ. ಊರಿನವರು ಯಾರು ಗಮನಿಸಲಿಲ್ಲ. ಇದರಲ್ಲಿ  ಕಾಮಗಾರಿ ಫಲಕ ಮಾತ್ರಾ ಬದಲಾಗಿದೆ.

Advertisement

ಈ  ಗ್ರಾಮದ ಹೆಸರು ಕೊಯಿಲ , ಆದರೆ  ಫಲಕದಲ್ಲಿ ಕೋಡಿಂಬಳ ಹೆಸರು ಇದೆ…!. ಊರಿನ ಹೆಸರು ಕುದ್ಲೂರು. ಆದರೆ ಈ ಫಲಕದಲ್ಲಿ ಮಾಲೇಶ್ವರ ಅಂತ ಇದೆ…!. ಇದು ಹೇಗಾಯಿತು ಎನ್ನುವುದು  ಪ್ರಶ್ನೆಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಇದನ್ನು ಗಮನಿಸಲಿಲ್ಲವೇ ? ಶಾಸಕ ಎಸ್.ಅಂಗಾರ ಗಮನಕ್ಕೂ ಇದು ಬರಲಿಲ್ಲವೇ ? ಅಧಿಕಾರಿಗಳು ನೋಡಲಿಲ್ಲವೇ ಎಂಬಿತ್ಯಾದಿ ಪ್ರಶ್ನೆಗೆ ಉತ್ತರವಿಲ್ಲ. ಕಾಮಗಾರಿಗೆ ಫಲಕ ಏಕೆ ಅವಶ್ಯ ಎಂಬ ಪ್ರಶ್ನೆಗೆ, ಕಾಮಗಾರಿ ನಡೆಸಿದ ಬಗ್ಗೆ ಊರ ಜನರಿಗೆ ಸರಿಯಾದ ಮಾಹಿತಿ ಬೇಕು ಎಂಬುದಷ್ಟೇ ಉದ್ದೇಶ.

ಫಲಕ ಬದಲಾಗಿ ಅನೇಕ ಸಮಯವಾದರೂ ಯಾರೂ ಗಮನಿಸದೇ ಇರುವುದು  ಅಚ್ಚರಿ ಮೂಡಿಸಿದೆ. ಅಧಿಕಾರಿಗಳು , ಜನಪ್ರತಿನಿಧಿಗಳು ಸರಿಯಾದ ಫಲಕ ಅಳವಡಿಸಬೇಕು ಎಂದು ಸ್ಥಳೀಯರಾದ  ಜೀಯಾ ಝೀಯಾ ಆತೂರು  ಸುಳ್ಯನ್ಯೂಸ್.ಕಾಂ ಗೆ ಹೇಳುತ್ತಾರೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸ್ನೇಹದಲ್ಲಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ | ಪಕ್ಷಿಗಳ ಸ್ವರ ಸಾಮ್ರಾಜ್ಯಕ್ಕೆ ಸಸ್ಯರಾಶಿ ಅವಶ್ಯ
September 24, 2023
7:40 PM
by: ದ ರೂರಲ್ ಮಿರರ್.ಕಾಂ
ಪೆರಾಜೆ ಕಲ್ಲಿನ ಗಣಿಗಾರಿಕೆ | ಸ್ಪೋಟಕ ಬಳಸದೇ ಗಣಿಗಾರಿಕೆಗೆ ಸೂಚನೆ | ಪೆರಾಜೆ ಶಾಸ್ತಾವು ದೇವಳದಲ್ಲಿ ಸಾರ್ವಜನಿಕರಿಂದ ಪೂಜೆ |
September 24, 2023
7:33 PM
by: ದ ರೂರಲ್ ಮಿರರ್.ಕಾಂ
ಅಮೇರಿಕಾ ಪ್ರವಾಸದಲ್ಲಿರುವ ಚಿತ್ರನಟ ರವಿಚಂದ್ರನ್‌ ಅವರಿಗೆ ಹಲ್ಲುನೋವು…! | ಭಾರತೀಯ ದಂತ ವೈದ್ಯೆಯಿಂದ ಚಿಕಿತ್ಸೆ ಪಡೆದ ಚಿತ್ರನಟ |
September 22, 2023
2:28 PM
by: ದ ರೂರಲ್ ಮಿರರ್.ಕಾಂ
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಗಣೇಶ ಚೌತಿ ಆಚರಣೆ | ಮುಂದಿನ ಎಲ್ಲಾ ಶತಮಾನಗಳೂ ಭಾರತದ್ದಾಗಿರಬೇಕು : ಸುಬ್ರಹ್ಮಣ್ಯ ನಟ್ಟೋಜ
September 21, 2023
9:50 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror