ಯೂವಿ ನೀನೆಂತ ಅದ್ಭುತ…

June 10, 2019
7:43 PM

ಬರಹ : ಈರಯ್ಯ ದೂಂತೂರು.

Advertisement

ಈಗ ತಾನೆ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಯುವರಾಜ್ ಸಿಂಗ್ ಎಂಬ ಅದ್ಭುತ ಕ್ರಿಕೆಟ್ ಆಟಗಾರನ ಬಗ್ಗೆ ಮಾತನಾಡುತ್ತಾ ಬಂದು ಟಿ.ವಿ. ಆನ್ ಮಾಡಿದರೆ ಯೂವಿ ಕ್ರಿಕೆಟ್ ನಿಂದ ನಿವೃತ್ತಿ ಎಂಬ ಸುದ್ದಿ ಬರುತ್ತಿತ್ತು.. ಯುವಿ ಎಂಬ ಅದ್ಭುತ ಕ್ರಿಕೆಟ್ ಆಟಗಾರನ ಬದುಕು, ನಮ್ಮ ಬಾಲ್ಯದ ಕ್ರಿಕೆಟ್ ಆಟದ ನೆನಪುಗಳು ಮನಸ್ಸಿನಲ್ಲಿ ಹಾದು ಹೋದವು..

ಯುವರಾಜ್ ಸಿಂಗ್ ಎಂಬ ಕ್ರಿಕೆಟ್ ನ ಮಹಾಕಾವ್ಯದ ಬಗ್ಗೆ ಬರೆಯುವ ಮುಂಚೆ ..
ನಮ್ ಕೆಂಗೇರಿ ಟೀಮ್ ಬಗ್ಗೆ ಪ್ರಸ್ತಾಪಿಸಲೇಬೇಕು…ನಮಗೆ ಭಾನುವಾರವೆಂದರೆ ಕ್ರಿಕೆಟ್‌ ಹಬ್ಬ..

ಆಗ ಕಾಲೇಜು, ಮನೆ ಈಗ ವೃತ್ತಿ ಒತ್ತಡ ಮತ್ತು ಸಾಂಸಾರಿಕ ಒತ್ತಡದ ನಡುವೆಯೂ ಎಲ್ಲ ಮರೆತು ಆಡುತ್ತಿದ್ದೆವು.. ಮತ್ತು ಈಗಲೂ ಸಹ ಆಡುತ್ತಿದ್ದಾರೆ….
ಇಂದಿಗೂ ಚೆನ್ನಾಗಿ ನೆನಪಿದೆ ಬರೀ ಕ್ರಿಕೆಟ್‌ ಆಡುವುದಕ್ಕೆ ಒಟ್ಟು ಸೇರಲು ಬಾಡಿಗೆ ಮನೆ ಮಾಡಿದ್ದಂತ ಗ್ಯಾಂಗ್ ನಮ್ದು…ಇಂಗ್ಲೆಂಡ್ ವಿರುದ್ದ ಮುನ್ನೂರಕ್ಕೂ ಹೆಚ್ಚು ರನ್ ಹೊಡೆಸಿಕೊಂಡು ನಮ್ಮವರು ಟಪಟಪನೆ ನಾಲ್ಕು ವಿಕೆಟ್‌ ಬಿದ್ದಾಗ ಬೈಕೊಂಡು ಟಿವಿ ಆಫ್ ಮಾಡಿ ಮಲಗಿದ್ದವರಿಗೆ ಬೆಳಿಗ್ಗೆ ಪೇಪರ್ ನಲ್ಲಿ ಯುವರಾಜ್ ಸಿಂಗ್ ಮತ್ತು ಕೈಫ್ ರ ಆಟದಿಂದ ಮ್ಯಾಚ್ ಗೆದ್ದಿರೋದನ್ನ ನೋಡಿ ಮತ್ತೆ ಮತ್ತೆ ರಿಪೀಟ್ ಟೆಲಿಕಾಸ್ಟ್ ನಲ್ಲಿ ನೋಡಿದ್ದಿದೆ.

ಯುವರಾಜ್ ಎಂದರೆ ಫೀಲ್ಡಿಂಗ್, ಯುವರಾಜ್ ಎಂದರೆ ಸಿಕ್ಸರ್,ಯುವರಾಜ್ ಎಂದರೆ ಎಂಟರ್ಟೈನ್ಮೆಂಟ್, ಯುವರಾಜ್ ಎಂದರೆ ಟೀಂ ಇಂಡಿಯಾ ಎಂತಹಾ ದಿನಗಳು ಅವು.. ವಾಹ್ ಎಂತಹ ಆಟಗಾರ.‌.2011 ರ ವರ್ಲ್ಡ್‌ ಕಪ್ ನ ದಿನಗಳು ಮರೆಯಲು ಸಾಧ್ಯವೇ ಇಲ್ಲ.

ಇಂದಿಗೂ ನೆನಪಿದೆ 2011 ವರ್ಲ್ಡ್‌ ಕಪ್ ಇಂಗ್ಲೆಂಡ್ ವಿರುದ್ಧದ ಮ್ಯಾಚ್ ಗೆ ಟಿಕೆಟ್ ಸಿಗದೆ ಕಾಲ್ತುಳಿತವಾದಾಗ ಯಾಕ್ ಹಿಂಗ್ ಸಾಯ್ತಾರೋ ಈ ಜನ ಅಂತ ಬೈಕೊಂಡು ಕರ್ತವ್ಯ ನಿರ್ವಹಿಸಿದ ನಮಗೆ ವರ್ಲ್ಡ್ ಕಪ್ ಗೆದ್ದಾಗ ಆದ ರೋಮಾಂಚನವೇ ಬೇರೆ.

ಹೌದು ಈ ಕಾರಣಕ್ಕೆ ಕ್ರಿಕೆಟ್‌ ಅಂದ್ರೆ ಹಿಂಗೇ ಇರಬೇಕು ಅಂತ ನನಗೇ ಅನ್ನಿಸಿದ್ದಿದೆ. ಎಲ್ಲಕ್ಕೂ ಮಿಗಿಲು ಯುವಿ ತಾನೇ ಹೇಳುವಂತೆ “ಆಕಾಶದಲ್ಲಿ ಹಾರುತ್ತಿದ್ದ ಹಕ್ಕಿ ಇದ್ದಕ್ಕಿದ್ದಂತೆ ರೆಕ್ಕೆ ಮುರಿದು ಪಾತಾಳಕ್ಕೆ ಬೀಳುವಂತೆ ಎರಗಿದ ಕ್ಯಾನ್ಸರ್ ಎಂಬ ನರಕದಿಂದ ಮತ್ತೆ ವಾಪಸ್ ಬಂದಿದ್ದು ನನ್ನಮ್ಮನ ಹಾರೈಕೆ ಯಿಂದ” ಎಂದು ತನ್ನಲ್ಲಾ ಯಶಸ್ಸು, ಸಾಧನೆಯನ್ನು ಅಮ್ಮನಿಗರ್ಪಿಸಿದ …
ಯುವಿ….ನಿಮಗೆ ಒಳಿತಾಗಲಿ..

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಮಂಚೂರಿ – ಕರಾವಳಿಯ ಸಾಂಪ್ರದಾಯಿಕ ರುಚಿಗೆ ಚೈನೀಸ್ ಟ್ವಿಸ್ಟ್
April 20, 2026
9:40 PM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!
April 18, 2026
7:28 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ – ಎಳೆಯ ಹಲಸಿನ ಕಾಯಿ ಬಾಲ್ : ಕರಕರಾ, ರುಚಿಕರ ಮತ್ತು ಆರೋಗ್ಯಕರ ಸ್ನ್ಯಾಕ್
April 11, 2026
6:16 PM
by: ದಿವ್ಯ ಮಹೇಶ್
ಕುಟುಂಬದಲ್ಲೇ ಆರೋಗ್ಯದ ಬೀಜ – ಕುಟುಂಬದಲ್ಲಿ ಆರೋಗ್ಯಕರ ಅಭ್ಯಾಸಗಳ ಬೆಳವಣಿಗೆ
April 10, 2026
6:11 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror