ಬೆಳ್ಳಾರೆ: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ರಾಷ್ಟ್ರೀಯ ಜನಸಂಖ್ಯೆ ಯೋಜನೆಯ ಸಹಪಠ್ಯ ಚಟುವಟಿಕೆ ಆಧಾರಿತ ಪಾತ್ರಾಭಿನಯ ಸ್ಪರ್ಧೆಯಲ್ಲಿ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸ್ಪರ್ಧೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯರಾದ ಪದ್ಮಿನಿ, ಸಿಂಚನ, ಪ್ರಜ್ಞ, ಗಾಯತ್ರಿ, ತಸ್ವಿ ಇವರು ಭಾಗವಹಿಸಿದವರಾಗಿದ್ದಾರೆ. ಶಿಕ್ಷಕರಾದ ರೂಪಶ್ರೀ, ಮಮತಾ ಹಾಗು ಚಂದ್ರಶೇಖರ್ ಒಳಗೊಂಡ ತಂಡ ಮಾರ್ಗದರ್ಶನ ನೀಡಿರುತ್ತಾರೆ. ಉಪಪ್ರಾಂಶುಪಾಲೆ ಉಮಾಕುಮಾರಿ ಸಹಕರಿಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel