ಲೋಕಸಭಾ ಚುನಾವಣೆ ಮತ ಎಣಿಕೆ : ಮಂಗಳೂರಿಗೆ ತೆರಳಿದ ಪಕ್ಷದ ಏಜೆಂಟ್ ಗಳ ತಂಡ

ಮತ ಎಣಿಕೆಯ ಕೇಂದ್ರದತ್ತ ತೆರಳಿದ ಸುಳ್ಯ ಬಿಜೆಪಿ ತಂಡ
Advertisement

ಸುಳ್ಯ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಿಕೆ ಸುರತ್ಕಲ್ ಎನ್ಐಟಿಕೆ ಮತಎಣಿಕೆ ಕೇಂದ್ರದಲ್ಲಿ ಮೆ.23ರಂದು ನಡೆಯಲಿದೆ. ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸುವ ವಿವಿಧ ಪಕ್ಷಗಳ ಮತ ಎಣಿಕೆ ಏಜೆಂಟ್ ಗಳ ತಂಡ ಬುಧವಾರ ಮಂಗಳೂರಿಗೆ ತೆರಳಿದ್ದಾರೆ.

Advertisement

ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಒಬ್ಬ ಸಹಾಯಕ ಚುನಾವಣಾಧಿಕಾರಿಯ ಏಜೆಂಟ್‌ ಮತ್ತು ಪ್ರತಿ ಟೇಬಲ್ ಗೆ ಒಬ್ಬರಂತೆ 14 ಮಂದಿ ಮತ ಎಣಿಕೆ ಏಜೆಂಟ್ ಗಳು ಸೇರಿ 15 ಮಂದಿಯ ತಂಡ ತೆರಳಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ ತಲಾ 14 ಟೇಬಲ್ ಗಳಲ್ಲಿ ನಡೆಯುತ್ತದೆ. 8 ವಿಧಾನ ಸಭಾ ಕ್ಷೇತ್ತದಲ್ಲಿ ತಲಾ 14 ರಂತೆ ಒಟ್ಟು 112 ಟೇಬಲ್ ಗಳಿರುತ್ತದೆ. 15 ರಿಂದ 18 ಸುತ್ತುಗಳಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

Advertisement
Advertisement

ಸುಳ್ಯ ಕ್ಷೇತ್ರದ ಮತ ಎಣಿಕೆ 17 ಸುತ್ತುಗಳಲ್ಲಿ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯಲಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದ 5 ಬೂತ್ ಗಳ ವಿವಿ ಪ್ಯಾಟ್ ಎಣಿಕೆ ಕೂಡ ನಡೆಯಲಿದೆ. ಮಧ್ಯಾಹ್ನದ ಬಳಿಕ ಪೂರ್ಣ ಫಲಿತಾಂಶ ಹೊರಬರುವ ನಿರೀಕ್ಷೆ ಇದೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಲೋಕಸಭಾ ಚುನಾವಣೆ ಮತ ಎಣಿಕೆ : ಮಂಗಳೂರಿಗೆ ತೆರಳಿದ ಪಕ್ಷದ ಏಜೆಂಟ್ ಗಳ ತಂಡ"

Leave a comment

Your email address will not be published.


*