ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ “ಗ್ರಾಮ ವಿಕಾಸ” ಅಧ್ಯಯನ ಪ್ರವಾಸ

May 22, 2019
5:21 PM

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ “ಗ್ರಾಮ ವಿಕಾಸ” ಎಂಬ ಯೋಜನೆಯ ಅಡಿಯಲ್ಲಿ ಮೇ 18 ಮತ್ತು 19ರಂದು ಧಾರವಾಡ ಮತ್ತು ಮಹಾರಾಷ್ಟ್ರದ ಹಲವು ಪ್ರದೇಶಗಳಿಗೆ ಅಧ್ಯಯನ ಪ್ರವಾಸ ನಡೆಸಲಾಯಿತು.
ಈ ಸಂದರ್ಭ ಅಲ್ಲಿನ ವಿವಿಧ ಗ್ರಾಮ ವಿಕಾಸದ ಕಲ್ಪನೆಯ ಕುರಿತಾಗಿ ಸವಿವರವಾಗಿ ಅಧ್ಯಯನ ನಡೆಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣಸಂಸ್ಥೆಗಳ ಮೂಲಕ ವಿವಿಧ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಲ್ಲಿ ಅಭಿವೃದ್ಧಿ ಕಾರ್ಯ ನಡೆಸುತ್ತಿರುವುದರ ಹಿನ್ನೆಲೆಯಲ್ಲಿ ಈ ಪ್ರವಾಸವನ್ನು ಹಮ್ಮಿಕೊಳ್ಳಲಾಯಿತು. ಗ್ರಾಮ ವಿಕಾಸ ಯೋಜನೆಯ ಅಡಿಯಲ್ಲಿ ಸುಮಾರು 17 ಗ್ರಾಮಗಳಿಂದ ಹಾಗೂ ವಿವಿಧ ವಿವೇಕಾನಂದ ವಿದ್ಯಾಸಂಸ್ಥೆಗಳಿಂದ ಸುಮಾರು 35 ಪ್ರತಿನಿಧಿಗಳು ಈ ಪ್ರವಾಸದಲ್ಲಿ ಭಾಗವಹಿಸಿದ್ದರು.

Advertisement

ಜ್ಞಾನವಿಕಾಸ ತರಬೇತಿ ಸಂಸ್ಥೆಗೆ ಭೇಟಿ

ಮೇ 18ರಂದು ಧಾರವಾಡದ ರಾಯಪುರದಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ತರಬೇತಿ ಸಂಸ್ಥೆಗೆ ಭೇಟಿ ನೀಡಲಾಯಿತು. ಅಲ್ಲಿ ಜ್ಞಾನವಿಕಾಸ ತರಬೇತಿ ಸಂಸ್ಥೆಯ ನಿರ್ದೇಶಕ ಡಾ. ಪ್ರಕಾಶ್ ಭಟ್ ಅವರು ಕೃಷಿ ಸಂಬಂಧಿ ವಿಷಯ, ಭೂಮಿ, ನೀರು, ಸಾವಯವ ಕೃಷಿ, ಕೃಷಿ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹೀಗೆ ಕೃಷಿಯಲ್ಲಿ ಲಾಭಗಳಿಸುವ ವಿಧಾನ, ಸುಸ್ಥಿರ ಅಭಿವೃದ್ಧಿ, ಕೊಳವೆ ಬಾವಿಗೆ ಜಲ ಮರುಪೂರಣೆ ಹೀಗೆ ಹಲವು ವಿಷಯದ ಕುರಿತು ಸಂವಾದ ನಡೆಸಲಾಯಿತು. ಸೋಲಾರ್ ಶಕ್ತಿಯಿಂದ ಬಳಸಬಹುದಾದ ಆಧುನಿಕ ಯಂತ್ರಗಳ ಲ್ಯಾಬ್, ಸಿರಿಧಾನ್ಯಗಳ ಮಿಶ್ರಣಗಳ ಉತ್ಪಾದನಾ ಘಟಕ, ಕಟ್ಟಡದ ಮೇಲೆ ಬೀಳುವ ಮಳೆನೀರಿನ ಮರುಬಳಕೆಯನ್ನು ಮಾಡುವ ವಿಧಾನ, ಪ್ರತಿ ದಿನ ಸುಮಾರು 50 ಕೆ.ಜಿ. ಬಯೋಗ್ಯಾಸ್ ಉತ್ಪಾದಿಸುವ ಘಟಕವನ್ನು ಜ್ಞಾನ ವಿಕಾಸ ತರಬೇತಿ ಸಂಸ್ಥೆಯಲ್ಲಿ ವೀಕ್ಷಿಸಲಾಯಿತು.

ಕಣೇರಿ ಸಿದ್ದಗಿರಿ ಮಠಕ್ಕೆ ಭೇಟಿ

ಮೇ 19ರಂದು ಮಹಾರಾಷ್ಟ್ರದ ಕೊಲ್ಲಾಪುರದ ಕಣೇರಿ ಸಿದ್ದಗಿರಿ ಮಠಕ್ಕೆ ಗ್ರಾಮ ವಿಕಾಸ ತಂಡ ಭೇಟಿ ನೀಡಿತು. ಕಣೇರಿ ಮಠದ ಮೂಲಕ ನಡೆಸಲಾಗುತ್ತಿರುವ ವಿವಿಧ ಶಿಕ್ಷಣ ಸಂಬಂಧಿ ಚಟುವಟಿಕೆ ಮಾತ್ರವಲ್ಲದೆ ಆರೋಗ್ಯ, ಯೋಗವಿಜ್ಞಾನ, ಸಾವಯವ ಕೃಷಿ, ಹೈನುಗಾರಿಕೆ ಇತ್ಯಾದಿ ಕ್ಷೇತ್ರಗಳಿಗೆ ಮಠ ನೀಡುತ್ತಿರುವ ಕೊಡುಗೆಗಳ ಬಗೆಗೆ ತಿಳಿದುಕೊಳ್ಳಲಾಯಿತು. ಕಣೇರಿ ಮಠದ ಸುತ್ತ ಸುಮಾರು 250 ಎಕ್ರೆಯಲ್ಲಿ ನಾನಾ ರೀತಿಯ ಗೆಡ್ಡೆ ಗೆಣಸು, ಬಳ್ಳಿಗಳ ಆಹಾರ ಪದಾರ್ಥಗಳು, ಹಣ್ಣು-ಹಂಪಲುಗಳು, ಹೂವು, ಮೇವು, ಮನೆ ಮದ್ದು, ದ್ವಿದಳ ಧಾನ್ಯ, ಎಣ್ಣೆಕಾಳು, ಮಸಾಲೆ ಬೆಳೆಗಳನ್ನು ವೀಕ್ಷಿಸಲಾಯಿತು.

ಗ್ರಾಮ ವಿಕಾಸ ಅಧ್ಯಯನ ಪ್ರವಾಸದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಅಧ್ಯಯನ ಪ್ರವಾಸದ ಸಂಘಟಕ ವೆಂಕಟೇಶ್ ಮತ್ತು ಹಲವು ಶಾಲಾ, ಕಾಲೇಜು ಆಡಳಿತ ಮಂಡಳಿಯವರು, ಅಧ್ಯಾಪಕರು, ಗ್ರಾಮಸ್ಥರು ಪಾಲ್ಗೊಂಡರು.

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಂದಕ ಬದು ನಿರ್ಮಾಣ ಕುರಿತ ಕಾರ್ಯಾಗಾರ | ಬದು ನಿರ್ಮಾಣದಿಂದ ಮಳೆ ನೀರು ಪೋಲು ನಿಯಂತ್ರಣ |
March 26, 2025
7:06 AM
by: The Rural Mirror ಸುದ್ದಿಜಾಲ
ಹಾಸನ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ | ಸೆರೆ ಹಿಡಿದ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ
March 26, 2025
6:49 AM
by: The Rural Mirror ಸುದ್ದಿಜಾಲ
ಕೋಲಾರ ತಾಲೂಕಿನ ಅಬ್ಬಣಿ ಕಿರು ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವು  ಕಾರ್ಯಾಚರಣೆ
March 26, 2025
6:46 AM
by: ದ ರೂರಲ್ ಮಿರರ್.ಕಾಂ
ಕೃಷಿ ವಿಜ್ಞಾನ ಕೇಂದ್ರದಲ್ಲಿ  ಸಸ್ಯ ತಳಿಗಳ ಸಂರಕ್ಷಣೆ ತರಬೇತಿ
March 26, 2025
6:40 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror