ವಿಶ್ವ ಆಹಾರ ಸುರಕ್ಷಾ ದಿನದ ತರಬೇತಿ ಕಾರ್ಯಕ್ರಮದ ಸಮಾರೋಪ

Advertisement

ಪುತ್ತೂರು: ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ‘ವಿಶ್ವ ಆಹಾರ ಸುರಕ್ಷಾ ದಿನದ’ ಅಂಗವಾಗಿ ನಡೆದ ನಾಲ್ಕು ದಿನದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

Advertisement

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷರಾದ ಎಸ್.ಆರ್ ಸತೀಶ್ಚಂದ್ರ  ವಹಿಸಿ  “ವೈಯುಕ್ತಿಕವಾಗಿ ವ್ಯಕ್ತಿ ಬೆಳೆದಾಗ ಸಮಾಜವು ಕೂಡಾ ಬೆಳೆಯುತ್ತದೆ”,” ಕೆಲವೊಂದು ವಿಶೇಷ ಕಲೆಗಳು ಅನುವಂಶೀಯವಾಗಿ ಕೊಡುಗೆಯಾಗಿ ಬಂದಿದೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಂತಹ ವಿಶೇಷ ಶಕ್ತಿಯಿದ್ದು ಅದನ್ನು ಹೊರತರುವ ಪ್ರಯತ್ನ ನಡೆಯಬೇಕು” ಎಂದು ಹೇಳಿದರು.

Advertisement
Advertisement

ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರಾದ  ಸುರೇಶ್ ಭಂಡಾರಿ ಮಾತಾಡಿ ” ಹೊಸತನವನ್ನು ಅಳವಡಿಸಿಕೊಳ್ಳುವ ಮೂಲಕ ಫ್ಯಾಕ್ಟರಿಯನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಿದ್ದು ಎಲ್ಲರೂ ಸಮರ್ಪಣಾ ಭಾವದಿಂದ ಕೊಡುಗೆ ನೀಡಿದಾಗ ಇದು ಸಾಧ್ಯ ಎಂದರು .

ನೆಸ್ಲೆ ಘಟಕದ ಮುಖ್ಯಸ್ಥರಾದ ಪ್ರದೀಪ್ ವಲ್ಸಲಾ ,ಕ್ಯಾಂಪ್ಕೋ ಉತ್ಪದನಾ ಘಟಕದ ಎ.ಜಿ.ಮ್ ಅನೂಪ್ ,ತಾಂತ್ರಿಕ ಎ.ಜಿ.ಎಮ್ ಶ್ಯಾಮ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ರಾಕೇಶ್ ಕಾರ್ಯಕ್ರಮ ನಿರೂಪಿಸಿದರು. ರಾಧೇಶ್ ಕುಂದಲ್ಪಾಡಿ ಸ್ವಾಗತಿಸಿ,  ಜೀವನದಾಸ್ ರೈ ವಂದಿಸಿದರು, ಶ್ರೀನಿವಾಸ ಕುಂಜತ್ತಾಯ ,ರಾಜೇಶ್ , ಪ್ರಶಾಂತ್ ಡಿ.ಎಸ್,ಪಿ.ಪಿ ಜೈನ್, ಪ್ರಮೋದ್ ಕೆ .ಯು ಗುಂಪು ಚಟುವಟಿಕೆಗಳನ್ನು ನಡೆಸಿಕೊಟ್ಟರು.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ವಿಶ್ವ ಆಹಾರ ಸುರಕ್ಷಾ ದಿನದ ತರಬೇತಿ ಕಾರ್ಯಕ್ರಮದ ಸಮಾರೋಪ"

Leave a comment

Your email address will not be published.


*