ಸುಬ್ರಹ್ಮಣ್ಯದಲ್ಲಿ 3 ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಗಾರ

Advertisement

ಸುಬ್ರಹ್ಮಣ್ಯ: ಶ್ರೀ ಸರಸ್ವತೀ ಸಂಗೀತ ಶಾಲೆ ಸುಬ್ರಹ್ಮಣ್ಯ ಇದರ ವತಿಯಿಂದ ಮೂರು ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಗಾರವು ಮೇ.2ರಿಂದ 5ರ ತನಕ ಆದಿಸುಬ್ರಹ್ಮಣ್ಯದಲ್ಲಿ ನಡೆಯಲಿದೆ.
ಉದ್ಯಮಿ ಹರೀಶ್ ಕಾಮತ್ ಕಾರ್ಯಗಾರ ಉದ್ಘಾಟಿಸುವರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಯಾಗಿ ವಿದುಷಿ ಕಾಂಚನ ಎಸ್ ಶ್ರುತಿರಂಜನಿ ಉಪಸ್ಥಿತರಿರುವರು ಎಂದು ಶ್ರೀ ಸರಸ್ವತೀ ಸಂಗೀತ ಶಾಲೆ ಶಿಕ್ಷಕಿ ವಿದ್ಯಾಗೋವಿಂದ ತಿಳಿಸಿದ್ದಾರೆ.
ಮೇ.5ರಂದು ನಡೆಯುವ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಹಾಡುಗಾರಿಕೆ ನಡೆಯಲಿದೆ ಮೃದಂಗದಲ್ಲಿ ಆಚಿಂತ್ಯಕೃಷ್ಣ ಪುತ್ತೂರು, ಸುಶಾಂತ್.ಜಿ ಸಂವೀತ್ ಬೆಂಗಳೂರು ವಯೋಲಿನ್‍ನಲ್ಲಿ ಅಂಕಿತಾ, ಅಖಿಲಾ ಭಟ್ ಸಹಕರಿಸುವರು.

Advertisement

ಮೇ 5ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ವಹಿಸುವರು. ಅತಿಥಿಗಳಾಗಿ ಶ್ರೀ ವೇದವ್ಯಾಸ ರಾಮಕುಂಜ ಇಲ್ಲಿಯ ಡಾ.ಎಚ್.ಆರ್ ಶಿವಕುಮಾರ್ ಹೊಸೋಳಿಕೆ ಉಪಸ್ಥಿತರಿರುವರು. ವಿದುಷಿ ಕಾಂಚನ ಶ್ರುತಿ ರಂಜಿನಿ ವೇದಿಕೆಯಲ್ಲಿರುವರು.
ಸಂಜೆ ಬೆಂಗಳೂರಿನ ಸಹೋದರಿಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ ದ್ವಂದ್ವ ಗಾಯನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಅವರು  ತಿಳಿಸಿದ್ದಾರೆ.

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸುಬ್ರಹ್ಮಣ್ಯದಲ್ಲಿ 3 ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಗಾರ"

Leave a comment

Your email address will not be published.


*