ಸುಬ್ರಹ್ಮಣ್ಯ ವಿವಾದ : ಸ್ಥಳೀಯ ವಿಹಿಂಪ ಮುಖಂಡರು ಗೈರು ಏಕೆ ?

June 7, 2019
9:34 PM

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಸ್ವಾಮಿ ಮಠದ ನಡುವಿನ ವಿವಾದ ಬಗೆಹರಿಸಲು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಸಂದರ್ಭ ಜಿಲ್ಲೆಯಿಂದ ವಿಹಿಂಪ ಮುಖಂಡರು ಹಾಗೂ ಬಜರಂಗದಳ ಮುಖಂಡರು ಆಗಮಿಸಿದರೂ ಸ್ಥಳೀಯ ವಿಹಿಂಪ ಮುಖಂಡರು  ಹಾಗೂ ಸುಳ್ಯ ತಾಲೂಕಿನ ವಿಹಿಂಪ ಮುಖಂಡರೂ ಸಭೆಯಲ್ಲಿ  ಇರಲಿಲ್ಲ.  ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನನದ ಆಡಳಿತವನ್ನೂ ಸಂಘಪರಿವಾರ ವಹಿಸಿಕೊಂಡಿತ್ತು. ಆಗಲೂ ಸರ್ಪಸಂಸ್ಕಾರ ಸೇರಿದಂತೆ ವಿವಿಧ ಚರ್ಚೆಗಳು ನಡೆಯುತ್ತಿತ್ತು. ಇದೀಗ ಹಿಂದೂ ಸಮಾಜದ ಪ್ರಮುಖ ಹಾಗೂ ಪ್ರಭಾವಿ ಸ್ವಾಮೀಜಿಗಳಾದ  ಪೇಜಾವರ ಶ್ರೀಗಳು ಆಗಮಿಸಿದ ಸಂದರ್ಭ ಈ ಹಿಂದಿನ ಆಡಳಿತ ಸಮಿತಿ ಸದಸ್ಯ ಕಿಶೋರ್ ಶಿರಾಡಿ ಹೊರತುಪಡಿಸಿ ಉಳಿದ ಯಾರೊಬ್ಬರೂ ಕಂಡುಬಂದಿರಲಿಲ್ಲ. ಈ ಬಗ್ಗೆ ತಾಲೂಕಿನ ವಿಹಿಂಪ ಮುಖಂಡರು ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳೀಯ ವಿಹಿಂಪ ಮುಖಂಡರೂ ಸಭೆಯಲ್ಲಿ ಕಾಣಿಸಲಿಲ್ಲ.

Advertisement
Advertisement

ಈ ಹಿಂದೆ ದೇವಸ್ಥಾನದ ಪರವಾಗಿ ಮಾತನಾಡಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕಿಶೋರ್ ಶಿರಾಡಿ ಅವರನ್ನು ಬಿಜೆಪಿಯ  ಹಾಗೂ ಸಂಘಪರಿವಾರದ ಎಲ್ಲಾ ಹುದ್ದೆಯಿಂದ ವಜಾ ಮಾಡಲಾಗಿತ್ತು.  ದೇವಸ್ಥಾನ ಹಾಗೂ ಮಠ ಎರಡೂ ಸಮಾಜ ಎಂದು ಸಂಘ ಪರಿವಾರ ಸೂಚಿಸಿದ ಹಿನ್ನೆಲೆಯಲ್ಲಿ  ಕಿಶೋರ್ ಶಿರಾಡಿ ಅವರ ಹುದ್ದೆಯಿಂದ ವಜಾ ಮಾಡಲಾಗಿತ್ತು. ಆದರೆ ವಿಶ್ವ ಹಿಂದೂ ಪರಿಷದ್ ಸಂಘಪರಿವಾರದ ಧಾರ್ಮಿಕ ಸಂಘಟನೆಯಾಗಿ ಸ್ಥಳೀಯ ಘಟಕಗಳಿಗೆ, ತಾಲೂಕು ಘಟಕಗಳಿಗೆ ಸಹಿತ ಯಾರಿಗೂ ಮಾಹಿತಿ ನೀಡದೆ ಮಠದ ಪರವಾಗಿ ಮಾತನಾಡಿರುವುದು ಸರಿಯೇ  ಕಿಶೋರ್ ಶಿರಾಡಿ ಅಭಿಮಾನಿ ಬಳಗ ಅಸಮಾಧಾನ ವ್ಯಕ್ತಪಡಿಸುತ್ತದೆ.

Advertisement

 

 

Advertisement

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೋದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ.ಬಿ.ವಿ.ಸತ್ಯನಾರಾಯಣ ನೇಮಕ|
May 1, 2024
10:52 AM
by: ದ ರೂರಲ್ ಮಿರರ್.ಕಾಂ
ಮೇ.2 | ಸಾಯಿನಿಕೇತನ ಸೇವಾಶ್ರಮದಲ್ಲಿ ಕಟ್ಟಡ ಉದ್ಘಾಟನೆ
April 29, 2024
11:12 PM
by: ದ ರೂರಲ್ ಮಿರರ್.ಕಾಂ
ಕೋವಿ ಠೇವಣಾತಿ | ಕೃಷಿ ರಕ್ಷಣೆಗಾಗಿ ಕೋವಿ ಹಿಂಪಡೆಯಲು ಆದೇಶ |
April 29, 2024
6:36 PM
by: ದ ರೂರಲ್ ಮಿರರ್.ಕಾಂ
ಮೇ.1 | ಮಳೆಗಾಗಿ ನಡೆಯಲಿದೆ ಪಂಜದಲ್ಲಿ ಪ್ರಾರ್ಥನೆ
April 28, 2024
12:20 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror