ಸುಳ್ಯದಲ್ಲಿ ಕಳ್ಳನ ಕರಾಮತ್ತು : ನೋಟು ನೋಡಲು ಕೇಳಿ ಎಗರಿಸಿದ…!

September 3, 2019
8:59 PM

ಸುಳ್ಯ: ಇರಾನಿ ಮೂಲದನು ಎನ್ನಲಾದ ವ್ಯಕ್ತಿಯೊಬ್ಬ ಸುಳ್ಯದಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿ ಮಾಲಕರ ಹಣ ನಾಜೂಕಿನಿಂದ ಎಗರಿಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಸುಳ್ಯದ ಗಾಂಧಿನಗರದ ಇಲೆಕ್ಟ್ರಾನಿಕ್ಸ್ ಅಂಗಡಿಯೊಂದಕ್ಕೆ ಮಧ್ಯಾಹ್ನದ ಹೊತ್ತಿಗೆ ಇರಾನ್ ಮೂಲದ ವ್ಯಕ್ತಿಗಳು ಎನ್ನುತ್ತಾ ಆಗಮಿಸಿ ನಮ್ಮಲ್ಲಿ ಇರುವ ಇಸ್ತ್ರಿ ಪೆಟ್ಟಿಗೆ ಬದಲಾಯಿಸಿ ಮಿಕ್ಸಿ ಕೊಡುತ್ತೀರಾ ಎಂದು ವಿಚಾರಿಸಿಕೊಂಡು ಬಂದಿದ್ದರು. ನಂತರ ಭಾರತದ ದೊಡ್ಡ ನೋಟು ಯಾವುದು ಎಂದು  ಅಂಗಡಿ ಮಾಲಕರ ಬಳಿ ಆತ್ಮೀಯವಾಗಿ ಮಾತನಾಡುತ್ತಾ ಅಂಗಡಿ ಮಾಲಕರ ಬಳಿ ಇದ್ದ ನೋಟುಗಳನ್ನು ನೋಡುತ್ತಲೇ ಮಾಲಕರಿಗೆ ತಿಳಿಯಂತೆ ನೋಟುಗಳನ್ನು  ಎಗರಿಸಿದರು. 2000, 500 ಹೀಗೇ ಎಲ್ಲಾ ಬಗೆಯ ನೋಟುಗಳನ್ನು ವೀಕ್ಷಣೆ ಮಾಡುತ್ತಾ ಜೇಬಿಗೆ ನಾಜೂಕಾಗಿ ತುಂಬಿದರು. ವ್ಯಾಪಾರ ನಡೆಯದೆ ಬಳಿಕ ಹಿಂತಿರುಗಿದರು. ನಂತರ ಅಂಗಡಿ ಮಾಲಕರು ಹಣ ಎಣಿಸಿದಾಗ 33 ಸಾವಿರದಷ್ಟು ಹಣ ನಾಪತ್ತೆಯಾಗಿತ್ತು. ತಕ್ಷಣವೇ ಸಿಸಿ ಕ್ಯಾಮಾರದ ಮೂಲಕ ವಿಡಿಯೋ ಗಮನಿಸಿದಾಗ ಹಣ ಎಗರಿಸಿದ ಬಗ್ಗೆ ತಿಳಿದಿದೆ. ಈ ಸಂಬಂಧವಾಗಿ ಇದುವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 20-08-2026 | ಕರಾವಳಿಗೆ ಇನ್ನೂ ಮಳೆ ವಿರಾಮವಿಲ್ಲ…! ಆ.23–25 ಕ್ಕೆ ಮತ್ತೆ ಮಳೆ ಹೆಚ್ಚಾಗುವ ಸೂಚನೆ
August 20, 2026
1:01 PM
by: ಸಾಯಿಶೇಖರ್ ಕರಿಕಳ
ಅಡಿಕೆ ತೋಟಗಳು ಹೆಚ್ಚುತ್ತಿವೆ… ಹಾಗಿದ್ದರೆ ಕರ್ನಾಟಕದಲ್ಲಿ ಇಳುವರಿ ಏಕೆ ಕುಸಿಯುತ್ತಿದೆ?
August 20, 2026
12:26 PM
by: ದ ರೂರಲ್ ಮಿರರ್.ಕಾಂ
ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯವೇ ದೊಡ್ಡ ಶಕ್ತಿಮೂಲ
August 19, 2026
8:42 PM
by: ದ ರೂರಲ್ ಮಿರರ್.ಕಾಂ
ಎಲ್ ನಿನೋ ಆತಂಕದ ನಡುವೆಯೂ ಖಾರಿಫ್ ಬಿತ್ತನೆ 1,000 ಲಕ್ಷ ಹೆಕ್ಟೇರ್ ದಾಟಿದೆ
August 19, 2026
6:48 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror