ಸುಳ್ಯ: ಸುಳ್ಯ ಪೊಲೀಸ್ ಠಾಣೆಯಲ್ಲಿ ಸಂಭ್ರಮ ಸಡಗರದ ಆಯುಧ ಪೂಜಾ ಉತ್ಸವ ನಡೆಯಿತು. ಪುರೋಹಿತ ನಾಗರಾಜ ಭಟ್ ಮತ್ತು ನಟರಾಜ ಶರ್ಮ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದು ವಾಹನ ಪೂಜೆ ನಡೆಸಲಾಯಿತು. ಬಳಿಕ ಮಹಾ ಪೂಜೆ ನಡೆಯಿತು. ಹುಲಿ ವೇಷ, ಗೊಂಬೆ ಕುಣಿತ, ಸಿಡಿ ಮದ್ದಿನ ಪ್ರಯೋಗ ವಿಶೇಷತೆಯಾಗಿತ್ತು.
ವೃತ್ತ ನಿರೀಕ್ಷಕ ಆರ್.ಸತೀಶ್ ಕುಮಾರ್, ಉಪನಿರೀಕ್ಷಕ ಎಂ.ಆರ್.ಹರೀಶ್ ಮತ್ತು ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ಪ್ರಮುಖರಾದ ಎಂ.ವೆಂಕಪ್ಪ ಗೌಡ, ನವೀನ್ ಕುಮಾರ್ ರೈ ಮೇನಾಲ, ಸುಬೋದ್ ಶೆಟ್ಟಿ ಮೇನಾಲ, ಪಿ.ಎಸ್.ಗಂಗಾಧರ, ಎಸ್.ಸಂಶುದ್ದೀನ್, ಹರೀಶ್ ಬೂಡುಪನ್ನೆ, ಅಕ್ಷಯ್.ಕೆ.ಸಿ, ಡಾ.ಲೀಲಾಧರ್, ಮಧುಸೂದನ ಕುಂಭಕ್ಕೋಡು, ಲತಾ ಮಧುಸೂದನ್, ಹರೀಶ್ ಉಬರಡ್ಕ, ಇಬ್ರಾಹಿಂ ಗಾಂಧಿನಗರ, ಸುರೇಶ್ ಅಮೈ, ಸಂತೋಷ್ ಮಡ್ತಿಲ, ರಜತ್ ಅಡ್ಕಾರ್, ನಿವೃತ್ತ ಎಸ್ಐ ನಾರಾಯಣ ರೈ ಮತ್ತಿತರರು ಉಪಸ್ಥಿತರಿದ್ದರು.

Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


