ಸುಳ್ಯ ಲಂಚಾವತಾರ : ನೋಂದಣಿ ಮಹಾಪರಿವೀಕ್ಷಕರಿಗೆ ದೂರು

Advertisement

ಸುಳ್ಯ: ಸುಳ್ಯದ ಉಪನೋಂದಣಿ ಕಚೇರಿಯ ಅಧಿಕಾರಿಯಿಂದ ನಿರಂತರವಾಗಿ  ನಡೆಯುತ್ತಿದ್ದ  ಲಂಚಾವತಾರ, ಭ್ರಷ್ಟಾವಾರದ ಬಗ್ಗೆ ಮಾಧ್ಯಮಗಳಲ್ಲಿ  ವಿಡಿಯೋ ಸಹಿತ ವರದಿಯಾಗಿರುವುದು ರೈತರಿಗೆ ಹಾಗೂ ಶ್ರಮಿಕರಿಗೆ ಸಂತಸವಾಗಿದ್ದು, ಆ ಕಚೇರಿಯ  ನೈಜ ಸಂಗತಿ ಅನಾವರಣಗೊಂಡಿದೆ. ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಈ ಲಂಚ ಹಗರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮವನ್ನು  ಕೈಗೊಳ್ಳಬೇಕು ಎಂದು  ಆಮ್ ಆದ್ಮೀ ಪಕ್ಷದ ಅಶೋಕ್ ಎಡಮಲೆ ಇ ಮೈಲ್ ಮೂಲಕ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಿಗೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಇ ಮೈಲ್ ಮೂಲಕ ಒತ್ತಾಯಿಸಿದ್ದಾರೆ.

Advertisement

ಸಾರ್ವಜನಿಕರೂ ಇ ಮೈಲ್  ಅಥವಾ ಪತ್ರ ಬರೆದು ಒತ್ತಾಯ ಮಾಡಬೇಕಿದೆ. ಈ ಮೂಲಕ ಸುಳ್ಯದಲ್ಲಿ  ನಡೆಯುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಬೇಕಿದೆ. ಜನಪ್ರತಿನಿಧಿಗಳು ಭ್ರಷ್ಟಾಚಾರ, ಲಂಚ ಪಡೆಯುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಬೇಕಿದೆ.

Advertisement
Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸುಳ್ಯ ಲಂಚಾವತಾರ : ನೋಂದಣಿ ಮಹಾಪರಿವೀಕ್ಷಕರಿಗೆ ದೂರು"

Leave a comment

Your email address will not be published.


*