ಸ್ವಚ್ಛತಾ ಕಾರ್ಯ ಒಂದು ದಿನದ್ದಲ್ಲ, ಅದು ನಿರಂತರ

April 28, 2019
4:28 PM

ಸುಬ್ರಹ್ಮಣ್ಯ: ಸ್ವಚ್ಛತಾ ಕಾರ್ಯ ಎನ್ನುವುದು ಒಬ್ಬರದ್ದು, ಒಂದು ಸಂಘಟನೆಯದ್ದು ಮಾತ್ರವೇ ಅಲ್ಲ. ಅದು ಎಲ್ಲರ ಜವಾಬ್ದಾರಿ ಹಾಗೂ ಅದು ನಿರಂತರ.. ಹೀಗೆಂದು ಎಚ್ಚರಿಸಿದ್ದು ಎಂದು ರಾಜ್ಯ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement
Advertisement

ಅವರು ಕುಕ್ಕೆಸುಬ್ರಹ್ಮಣ್ಯದಲ್ಲಿ ಎರಡು ದಿನಗಳ ಕಾಲ ಯುವ ಬ್ರಿಗೇಡ್ ವತಿಯಿಂದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಡೆದ #ಕುಮಾರ_ಸಂಸ್ಕಾರ ನದಿ ಸ್ವಚ್ಛತಾ ಆಂದೋಲನದ ಬಳಿಕ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಸಮಾಜವು ಯಾವತ್ತೂ ಸಮಾಜಮುಖಿಯಾಗಿ ಯೋಚನೆ ಮಾಡಬೇಕು. ಇದರಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ.ಯಾವುದೇ ಗ್ರಾಮಗಳ ಅಭಿವೃದ್ಧಿಗೆ ಜಲಮೂಲ ಅತ್ಯಗತ್ಯ.ಜಲಮೂಲದ ನದಿಗಳ ಸಂರಕ್ಷಣೆಗೆ ಯುವ ಜನಾಂಗ ಕಠಿಬದ್ದವಾಗಬೇಕು ಎಂದರು.
ಸ್ವಚ್ಛತಾ ಕಾರ್ಯ ಎನ್ನುವುದು ಒಂದು ದಿನದ್ದು ಆಗಬಾರದು, ಅದು ನಿರಂತರವಾಗಿರಬೇಕು. ಹಾಗಾದಾಗ ನದಿಯನ್ನು ಉಳಿಸಬಹುದು.ಸ್ಥಳಿಯರು ನದಿ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಶೀಲಾ ಹೊಸಮನೆ, ಜೇಸಿಸ್ ವಲಯಾಧಿಕಾರಿ ರವಿಕಕ್ಕೆಪದವು, ಗ್ರಾ.ಪಂ.ಸದಸ್ಯ ಪ್ರಶಾಂತ್ ಭಟ್ ಮಾಣಿಲ, ಪಿಡಿಓ ಮುತ್ತಪ್ಪ, ನಮ್ಮ ಸುಬ್ರಹ್ಮಣ್ಯ ಯುವ ಬಳಗದ ರಮೇಶ್ ಭಟ್, ಸೂರ್ಯ ಭಟ್, ಅನಂತ ವೇದಿಕೆಯಲ್ಲಿದ್ದರು.ಯುವ ಬ್ರಿಗೇಡ್ ಸದಸ್ಯರು, ಸಹೋದರಿ ನಿವೇದಿತಾ ಪ್ರತಿಷ್ಠಾನದ ಸದಸ್ಯರು, ನಮ್ಮ ಸುಬ್ರಹ್ಮಣ್ಯ ಯುವ ಬಳಗದ ಸದಸ್ಯರು ಮತ್ತು ಇತರ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದ ನೇರಳೆಹಣ್ಣು ಜಾಗತಿಕ ಮಾರುಕಟ್ಟೆಗೆ ಲಗ್ಗೆ | ಮೊದಲ ಬಾರಿಗೆ ಲಂಡನ್‌ಗೆ ರಫ್ತು
June 25, 2025
11:39 AM
by: The Rural Mirror ಸುದ್ದಿಜಾಲ
ಹಾಸನ ಜಿಲ್ಲೆಯಲ್ಲಿ ಮೆಕ್ಕೆಜೋಳದ ಬಿಳಿ ಸುಳಿ ರೋಗದ ಅಧ್ಯಯನಕ್ಕಾಗಿ ವಿಜ್ಞಾನಿಗಳ ತಂಡದಿಂದ ಅಧ್ಯಯನ
June 25, 2025
11:31 AM
by: The Rural Mirror ಸುದ್ದಿಜಾಲ
ಗ್ರಾಮೀಣ ಉದ್ಯಮಿಗಳ  ಸಬಲೀಕರಣ
June 25, 2025
11:26 AM
by: The Rural Mirror ಸುದ್ದಿಜಾಲ
ಅಡಿಕೆ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಅವರಿಗೆ ಮತ್ತೊಮ್ಮೆ ಅಂತರಾಷ್ಟ್ರೀಯ ಮನ್ನಣೆ
June 25, 2025
6:52 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror