Advertisement
ಅನುಕ್ರಮ

ಅಂತರ್ಜಲ ಮಟ್ಟದ ತೀವ್ರ ಕುಸಿತದಿಂದ ಬತ್ತಿದ ಜಲ ಮೂಲಗಳು : ಅಂತರ್ಜಲ ಸಂವರ್ಧನೆಗೆ ಮುಂದಾಗಬೇಕಿದೆ ಸಂಘ ಸಂಸ್ಥೆಗಳು

Share
ಎಲ್ಲೆಡೆ ಬೋರವೆಲ್ ಲಾರಿಗಳು ಮತ್ತೆ ಎಡೆಬಿಡದೆ ಸದ್ದು ಮಾಡುತ್ತಿವೆ. ಮುಂಗಾರು ಮಳೆ ವಿಳಂಬವಾಗಿರುವುದರಿಂದ ಈಗಾಗಲೇ ಕೆರೆ, ಬಾವಿ, ಹೊಳೆ, ನದಿಗಳು ಬತ್ತಿದ್ದು ಕೊಳವೆ ಬಾವಿಗಳಲ್ಲಿ ಕೂಡ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು ಜನರಲ್ಲಿ ಮುಖ್ಯವಾಗಿ ಕೃಷಿಕರಲ್ಲಿ ಆತಂಕ ಮನೆ ಮಾಡಿದೆ. ಜನರು ಹೊಸ ಕೊಳವೆ ಬಾವಿಗಳನ್ನು ಕೊರೆಸಸಿ , ಇರುವ ಕೊಳವೆ ಬಾವಿಗಳ ಆಳವನ್ನು ಹೆಚ್ಚಿಸಿ , ಹೆಚ್ಚುವರಿ ಪೈಪ್ ಗಳನ್ನು ಅಳವಡಿಸಿ ಪಂಪನ್ನು ಇನ್ನಷ್ಟು ಆಳಕ್ಕೆ ಅಳವಡಿಸಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತಿದ್ದಾರೆಯೇ ವಿನಹ ನೀರಿನ ಸಮಸ್ಯೆಗೆ ಮೂಲ  ಕಾರಣ ಏನು ಎಂಬುದರ ಬಗ್ಗೆಯಾಗಲಿ ಅಂತರ್ಜಲ ವೃದ್ಧಿಗಾಗಿ ತಾನು ಏನು  ಮಾಡಬಹುದು ಎಂಬುದರ ಬಗ್ಗೆಯಾಗಲಿ ಯೋಚಿಸುವ ಗೋಜಿಗೆ ಹೋಗದಿರುವುದು  ಅತ್ಯಂತ ಆತಂಕಕಾರಿ ಬೆಳವಣಿಗೆ.
ನಮ್ಮೆಲ್ಲರ  ಈ ಮಟ್ಟದ ಪ್ರಜ್ಞಾಶೂನ್ಯತೆ, ಪ್ರಾಕೃತಿಕ ಸಂಪನ್ಮೂಲಗಳನ್ನು ಮನಸೋಇಚ್ಛೆ ಬಳಕೆ ಮಾಡುವ ದುರಾಸೆಯೇ ಅಂತರ್ಜಲ ಮಟ್ಟ ಅಪಾಯಕಾರಿ ಕುಸಿತ ಕಾಣಲು ಕಾರಣ ಎಂದರೆ ತಪ್ಪಾಗಲಾರದು.
ಕೊಳವೆ ಬಾವಿಗಳು ನೀರಿನ ಶಾಶ್ವತ ಮೂಲಗಳಲ್ಲ :
2 ದಶಕಗಳ ಹಿಂದೆ ಹೆಚ್ಚಾಗಿ ಬೇಸಾಯವನ್ನೇ ನೆಚ್ಚಿಕೊಂಡಿದ್ದ ಜಿಲ್ಲೆಯ ಜನತೆ ಕೊಳವೆ ಬಾವಿಯ ಸೌಲಭ್ಯದ ಪರಿಚಯವಾದ ನಂತರ ಕಾಡು ಕಡಿದು ಗುಡ್ಡ ಬಗೆದು ಅಡಿಕೆ ಕೃಷಿ ಮಾಡಲಾರಂಭಿಸಿದ್ದು ಇದೀಗ ಸಂಪೂರ್ಣ ಅಡಿಕೆ ಕೃಷಿ ಮೇಲೆ ಅವಲಂಬಿತವಾಗಿದೆ. ಅತಿಯಾದ ನೀರು ಬೇಡುವ  ಅಡಿಕೆ ಕೃಷಿಯನ್ನು ವ್ಯಾಪಕವಾಗಿ ವಿಸ್ತರಿಸಿದ ಕೃಷಿಕರು ಇದೀಗ ಕೊಳವೆ ಬಾವಿಗಳು ಕೈ ಕೊಡುತ್ತಲೇ ತಲೆ ಮೇಲೆ ಕೈ ಹೊತ್ತು ಚಿಂತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಳವೆ ಬಾವಿಗಳು ನೀರಿನ ಶಾಶ್ವತ ಮೂಲಗಳಲ್ಲ ಎಂಬ ಸತ್ಯ ನಿಧಾನವಾಗಿ ಜನರಿಗೆ ಅರಿವಾಗಲಾರಂಭಿಸಿದೆ.
ನೀರಿಲ್ಲವೆಂದು ಹೋಮ ಹವನದ ಜೊತೆಗೆ ನೀರಿಂಗಿಸಿ :
ಮಳೆ ನೀರು ಇಂಗಿದರೆ ಮಾತ್ರ ಅಂತರ್ಜಲ ವೃದ್ಧಿ ಸಾಧ್ಯ . ನೀರಿಗಾಗಿ ಪ್ರಾರ್ಥನೆ, ಪೂಜೆ ನಡೆಯಲಿ. ಅದರ ಜೊತೆಗೆ  ಜಲ ಸಂರಕ್ಷಣೆ, ಅಂತರ್ಜಲ ಸಂವರ್ಧನೆ, ನೀರಿಂಗಿಸುವಿಕೆ, ಕೊಳವೆ ಬಾವಿಗೆ ಜಲಮರುಪೂರಣ ಮೊದಲಾದ ಯೋಜನೆಗಳನ್ನು ತಮ್ಮ  ಜಮೀನಿನಲ್ಲಿ ಅನುಷ್ಠಾನಗೊಳಿಸಿ ಯಶಸ್ಸು ಪಡೆಯಬೇಕಿದೆ.
ಅಂತರ್ಜಲವನ್ನು ವೃದ್ಧಿಸಿಕೊಂಡು ತಮ್ಮ ಭೂಮಿ ಹಸನಾಗಿಸಿದ ಸಾಧಕರ ಬಗ್ಗೆ ತಿಳಿದು, ಮಾರ್ಗದರ್ಶನ ಪಡೆದು ನಮ್ಮ ಜಮೀನಿನಲ್ಲಿಯೂ ಅನುಷ್ಠಾನಗೊಳಿಸಿದರೆ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಜಲಾನಯನ ಇಲಾಖೆಯವರು ನಿರ್ಮಿಸಿರುವ ಕಿಂಡಿ ಅಣೆಕಟ್ಟುಗಳಿಗೆ ಮಳೆಗಾಲ ಕಳೆದ ನಂತರ ಹಲಗೆಗಳನ್ನು ಅಳವಡಿಸಲು ಜನರು  ಉತ್ಸಾಹ ತೋರಬೇಕು.
ಅಂತರ್ಜಲ ಸಂವರ್ಧನೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಸಂಘ ಸಂಸ್ಥೆಗಳು :
ಜನತೆಯಲ್ಲಿ ಆತಂಕ ಸೃಷ್ಟಿಸಿರುವ ಅಂತರ್ಜಲ ಮಟ್ಟದ ಕುಸಿತದ ಬಗ್ಗೆ, ಪರಿಹಾರ ಮಾರ್ಗೋಪಾಯಗಳ ಬಗ್ಗೆ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘ ಸಂಸ್ಥೆಗಳು  ಜನರನ್ನು ಜಾಗೃತಗೊಳಿಸಬೇಕಿದೆ. ಕೊಳವೆ ಬಾವಿಗಳಿಗೆ ಜಲ ಮರುಪೂರಣ, ಇಂಗುಗುಂಡಿಗಳ ನಿರ್ಮಾಣ, ಮನೆಯ ಮೇಲ್ಚಾವಣಿಗೆ ಬೀಳುವ ಮಳೆ ನೀರಿನ ಕೊಯ್ಲು ಮೊದಲಾದ ಯೋಜನೆಗಳನ್ನು ಗ್ರಾಮ ಗ್ರಾಮಗಳಲ್ಲಿ ಕೈಗೆತ್ತಿಕೊಂಡು ಆಂದೋಲನದ ಮಾದರಿಯಲ್ಲಿ ಅಂತರ್ಜಲ ಸಂವರ್ಧನೆಗೆ ಜನರನ್ನು ಪ್ರೇರೇಪಿಸಿದಾಗ ಮಾತ್ರ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ.
* ಗುರುಪ್ರಿಯಾ ನಾಯಕ್
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…

4 hours ago

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

24 hours ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

1 day ago

ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ

ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…

1 day ago

ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ

ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್‌ನಲ್ಲಿ ಆಮದು…

1 day ago

ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ

ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…

1 day ago