MIRROR FOCUS

ಅಡಿಕೆ ಬೆಳೆಗಾರರಿಗೆ ಮತ್ತೊಂದು ಸಿಹಿ ಸುದ್ದಿ : ಅಡಿಕೆ ಐಸ್ ಕ್ರೀಂ ಕೂಡಾ ಸಾಧ್ಯ….!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಡಿಕೆ ಬೆಳೆಗಾರರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಇದುವರೆಗೆ ಅಡಿಕೆ ಚಾಕೋಲೇಟ್ ಮಾಡಲಾಗುತ್ತಿತ್ತು. ಈಗ ಅಡಿಕೆ ಐಸ್ ಕ್ರೀಂ ಕೂಡಾ ಟೇಸ್ಟಿಯಾಗಿದೆ. ಈಗಾಗಲೇ ಕೆಲವು ಶುಭ ಕಾರ್ಯಕ್ರಮದಲ್ಲಿ ವಿತರಣೆಯಾಗಿದ್ದು, ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಅಡಿಕೆಯ ಸಿರಪ್ ಮೂಲಕ ಐಸ್ ಕ್ರೀಂ ಮಾಡಲಾಗುತ್ತದೆ.

Advertisement

ಅಡಿಕೆಯ ಚೊಗರನ್ನು ಬಳಸಿ ಚಾಕಲೇಟ್ ತಯಾರಿಸಲು ಸಾಧ್ಯ ಎಂಬುದನ್ನು ಬಂಟ್ವಾಳ ತಾಲೂಕು ವಿಟ್ಲ ಸಮೀಪದ ಪ್ರಗತಿಪರ ಕೃಷಿಕ, ಸಂಶೋಧಕ ಬದನಾಜೆ ಶಂಕರ ಭಟ್ ತೋರಿಸಿಕೊಟ್ಟಿದ್ದಾರೆ. ಅಡಿಕೆಯ ಬಳಕೆ ಉತ್ತರ ಭಾರತದಲ್ಲಿ ಮಾತ್ರವೇ ಹೆಚ್ಚಾಗಿ ಇತ್ತು, ಅಲ್ಲಿ ನಿತ್ಯವೂ ಬಳಕೆ ಮಾಡುತ್ತಾರೆ.  ಆದರೆ ಇತ್ತೀಚೆಗೆ ಅಡಿಕೆ ಮಾರುಕಟ್ಟೆ ಅಸ್ಥಿರ ಮಾಡುವ ಪ್ರಯತ್ನ ನಡೆಯಿತು. ಅಡಿಕೆಯಲ್ಲಿ  ವಿವಿಧ ಅಂಶ ಇದೆ, ಹಾನಿಕಾರಕ ವಸ್ತುಗಳು ಇವೆ ಎಂದೂ ಬಿಂಬಿಸಲಾಯಿತು. ಆದರೆ ಅಡಿಕೆಯಲ್ಲಿ  ಯಾವುದೇ ಹಾನಿಕಾರಕ ಅಂಶವಿಲ್ಲ ಎಂದು ಪದೇ ಪದೇ ಸಾರಲಾಯಿತು. ಇಂತಹ ಸಂದರ್ಭದಲ್ಲಿ ಅಡಿಕೆಯಿಂದ ಹಲವು ವಿಧದ ಉತ್ಪನ್ನಗಳನ್ನು ತಯಾರಿಸಬಹುದು ಮತ್ತು ಜಗತ್ತಿನಾದ್ಯಂತ ಮಾರುಕಟ್ಟೆ ನಿರ್ಮಾಣ ಮಾಡಬಹುದು ಎಂಬುದು ಇತ್ತೀಚಿನ ದಿನದ ಸಂಶೋಧನೆಯಿಂದ ದೃಢ ಪಟ್ಟಿದೆ.

 

ಬದನಾಜೆ ಶಂಕರ ಭಟ್ ಅವರು ಅಡಿಕೆಯ ಚೊಗರನ್ನು ಬಳಸಿಕೊಂಡು ‘ಬಟರ್ ಸುಪಾರಿ ಚೊಕೋ’ ತಯಾರಿಸಿದ್ದು, ಸುಮಾರು 6 ಎರಡು ತಿಂಗಳ ಕಾಲ ಕೆಡದಂತೆ ಉಳಿಸಿಕೊಳ್ಳಲು ಸಾಧ್ಯ ಎಂಬುದನ್ನು ತೋರಿಸಿದ್ದಾರೆ. 1 ಕೆ ಜಿ ಅಡಿಕೆಯಲ್ಲಿ ಸುಮಾರು 150 ಚಾಕಲೇಟ್ ತಯಾರಿಸಬಹುದಾಗಿದ್ದು, ಎಲ್ಲಾ ಖರ್ಚುಗಳನ್ನು ಸೇರಿಸಿದರೂ ಚಾಕಲೇಟ್ ಅನ್ನು 2 ರೂ. ಗೆ ಮಾರುಕಟ್ಟೆಯಲ್ಲಿ ಜನರಿಗೆ ನೀಡಬಹುದೆಂಬುದು ಭಟ್ಟರ ಅಭಿಪ್ರಾಯವಾಗಿದೆ.

Advertisement

ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇವೆ, ಬೆಳೆಯನ್ನೇ ನಿಷೇಧಿಸಬೇಕೆಂಬ ವಿಜ್ಞಾನಿಗಳಿಗೆ ಸವಾಲಾಗಿ ಸಂಶೋಧನೆಗಳನ್ನು ಮಾಡಿದ ಭಟ್ಟರು ಅಡಿಕೆ ಆರೋಗ್ಯಕ್ಕೆ ಉತ್ತಮ ಎನ್ನುವ ವಿಚಾರವನ್ನು ಸಾರುವಂತೆ ಮಾಡಿದ್ದಾರೆ. ಅಡಿಕೆಯ ಹಲವು ಉತ್ಪನ್ನಗಳನ್ನು ಮನೆಯಲ್ಲಿ ಯಾರು ಬೇಕಾದರೂ ತಯಾರಿಸಿ ಬಳಸಬಹುದೆಂಬುದನ್ನು ಪ್ರಯೋಗಗಳ ಮೂಲಕ ದೃಢ ಪಡಿಸಿದ್ದಾರೆ.

 

ಇದೀಗ ಅಡಿಕೆ ಐಸ್ ಕ್ರೀಂ ಕೂಡಾ ಹೆಚ್ಚು ಇಷ್ಟವಾಗುವ ವಸ್ತುವಾಗಿದೆ. ಅಡಿಕೆಯ ಚೊಗರು ಅಥವಾ ಅಡಿಕೆಯ ಸಿರಪ್ ತಯಾರಿಸಿ ಅದರ ಮೂಲಕ ರಾಸಾಯಕನಿಕ ರಹಿತವಾದ ಐಸ್ ಕ್ರೀಂ ತಯಾರಿ ಮಾಡಲು ಸಾಧ್ಯವಿದೆ. ಇದೀಗ ಅಡಿಕೆ ಐಸ್ ಕ್ರೀಂ ಅನ್ನು ವಿಟ್ಲದ ಐಸ್ ಕ್ರೀಂ ತಯಾರಕರು ತಯಾರು ಮಾಡಿ ಶುಭ ಕಾರ್ಯಕ್ರಮಗಳಿಗೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ಬಂದಿದೆ. ಅಡಿಕೆಯ ಸಿರಪ್ ಬದನಾಜೆಯ ಶಂಕರ್ ಭಟ್ ಅವರು ತಯಾರಿಸಿ ಐಸ್ ಕ್ರೀಂ ತಯಾರಕರಿಗೆ ನೀಡಿದ್ದಾರೆ. ಇದೇ ಸಿರಪ್ ಬಳಸಿ ಬರ್ಫಿ ಸೇರಿದಂತೆ ಅಡಿಕೆಯ ಪ್ಲೇವರ್ ಬರುವ ತಿಂಡಿ ತಯಾರು ಮಾಡಬಹುದು ಎನ್ನುತ್ತಾರೆ ಬದನಾಜೆ ಶಂಕರ ಭಟ್.

 

Advertisement

ಹಲವು ಸಂಶೋಧನೆ:
ಬದನಾಜೆ ಶಂಕರ ಭಟ್ಟರು ಅಡಿಕೆಯ ದಾರಣೆ ಕುಸಿದು ಹೋದ ಸಮಯದಲ್ಲಿ ಏನಾದರೂ ಹೊಸತನ್ನು ಮಾಡಬೇಕು ಮತ್ತು ಅಡಿಕೆಯ ವಿವಿಧ ಉತ್ಪನ್ನಗಳ ಮೂಲಕ ಅಡಿಕೆಯ ಬೇಡಿಕೆಯನ್ನು ಹೆಚ್ಚಿಸಬೇಕೆಂಬ ನಿಟ್ಟಿನಲ್ಲಿ ಸಂಶೋಧನೆಗೆ ಮುಂದಾಗಿದ್ದರು. ಸುಮಾರು 8 ವರ್ಷಗಳಿಂದ ಅಡಿಕೆಯ ತಂಪುಪಾನೀಯ, ಅಡಿಕೆಯ ಸಾಮೂನು, ಅಡಿಕೆಯ ವೈನ್, ಅಡಿಕೆ ವಾಯಿಂಟ್ ಮೆಂಟ್, ಅಡಿಕೆ ವಾರ್ನಿಷ್, ಅಡಿಕೆಯ ಉಪ್ಪಿನಕಾಯಿ ಮಾಡಿ ಯಶಸ್ವಿಯನ್ನು ಕಂಡಿದ್ದಾರೆ.ಇದೀಗ ಪಿವಿಸಿ ಪೈಪ್ ಜೋಡಣೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಗಮ್ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಭಟ್ಟರು ಸದ್ಯ ಪೈಪ್ ಜೋಡಣೆಗೆ ಅಡಿಕೆಯ ಗಮ್ ತಯಾರಿಕೆ ಮಾಡಬಹುದೆಂಬ ಸಂಶೋಧನೆಯಲ್ಲಿ ತೊಡಗಿದ್ದಾರೆ.

 

(( ಸಹಕಾರ : ನಿಶಾಂತ್ ಬಿಲ್ಲಂಪದವು ))

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

View Comments

  • ಅಡಕೆ ಐಸ್ಕ್ರೀಮ್ ಬಹಳ ಚೆನ್ನಾಗಿದೆ. ಅದರ ಚೊಗರನ್ನು ತಗೆದ ಕಾರಣ ಅದರ ಸ್ವಾದ ನನಗೆ ಬಹಳ ಇಷ್ಟ ಅಯಿತು. ಇತ್ತೀಚೆಗೆ ಬದನಾಜೆಗೆ ಹೋಗಿದ್ದಾಗ ತಿನ್ನಲು ಕೊಟ್ಟು ಅನುಭವ ಕೇಳಿದ್ದರು. ಅದರಲ್ಲಿ ಎಲ್ಲವೂ ನೈಸರ್ಗಿಕ ಎಂಬುದು ಮತ್ತೊಂದು ಲಾಭ.

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಕೇತುವಿನ ಕಾಟ: ಈ ರಾಶಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆ ಬೇಕು..!

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಒಂದು ನಿಗೂಢ ಗ್ರಹವಾಗಿದ್ದು, ಆಧ್ಯಾತ್ಮಿಕತೆ, ಕರ್ಮ, ಮತ್ತು ಜೀವನದಲ್ಲಿ…

2 hours ago

ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ

ಕೋಲಾರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ಸೇರಿದಂತೆ ಯಾವುದೇ…

2 hours ago

ಹಾವೇರಿ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವರದಾ, ತುಂಗಭದ್ರಾ ನದಿ

ಹಾವೇರಿ ಜಿಲ್ಲೆಯಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ಕ್ರಮೇಣ…

2 hours ago

ರಾಜ್ಯದ 10 ಜಿಲ್ಲೆಯಲ್ಲಿ ಶ್ರಮಿಕ, ತಾತ್ಕಾಲಿಕ ವಸತಿ ಸಮುಚ್ಛಯ ನಿರ್ಮಿಸಲು ನಿರ್ಧಾರ

ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, 23 ಅಸಂಘಟಿತ ವರ್ಗಗಳ…

2 hours ago

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದಾಗಿ 148 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ

ಹಾವೇರಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಿಂದಾಗಿ 148.57 ಹೆಕ್ಟೇರ್ ಪ್ರದೇಶದಲ್ಲಿದ್ದ…

2 hours ago

ಚಾಲಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣ | ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಇಲಾಖೆ

ಹಾಸನದಲ್ಲಿ ಸಂಭವಿಸಿದ ಹೃದಯಾಘಾತ ಕುರಿತಂತೆ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆಯಾಗಿದೆ ಎಂದು ಆರೋಗ್ಯ…

2 hours ago