MIRROR FOCUS

ಅಡಿಕೆ ಮರ ಏರಲು ಬೈಕ್ ಯಂತ್ರ…! , ಯಂತ್ರ ಸಿದ್ಧಪಡಿಸಿದ ಅಡಿಕೆ ಬೆಳೆಗಾರ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಅಡಿಕೆ ಮರ ಏರಲು ವಿವಿಧ ಪ್ರಯತ್ನವಾಗುತ್ತಿದೆ. ಅಡಿಕೆ ಬೆಳೆಗಾರರ ಬಹುದೊಡ್ಡ ಸಮಸ್ಯೆ ಹಾಗೂ ಪರಿಹಾರಕ್ಕಾಗಿ ಕಾತರದಿಂದ ಕಾಯುವ ಸ್ಥಿತಿ ಇದೆ. ಇದೀಗ ಅಡಿಕೆ ಬೆಳೆಗಾರ  ಗಣಪತಿ ಭಟ್ ಅವರು ಹೊಸದೊಂದು ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಅದು ಬೈಕ್ ಮಾದರಿಯ ಯಂತ್ರ.  ಇದರ ಮೇಲೆ ಕುಳಿತ ವ್ಯಕ್ತಿ ಅತ್ಯಂತ ಸುಲಭವಾಗಿ ಅಡಿಕೆ ಮರದ ತುದಿಯನ್ನು ತಲುಪಿ ಅಡಿಕೆ ಕೊಯ್ಯಬಹುದು ಹಾಗೂ ಔಷಧಿಯನ್ನು ಸಿಂಪಡಿಸಬಹುದು.
ಮಳೆಗಾದಲ್ಲಿ ಅಡಿಕೆ ಮರಕ್ಕೆ ಔಷಧಿ ಸಿಂಪಡಣೆ ಮಾಡಲು ಮತ್ತು ವರ್ಷದ ಅಂತ್ಯದಲ್ಲಿ ಅಡಿಕೆ ಕೊಯ್ಯಲು ಅಡಿಕೆ ಮರವನ್ನು ಹತ್ತುವುದು ಅನಿವಾರ್ಯ ಕೆಲಸ.  ಕಾರ್ಮಿಕರು ತಮ್ಮ ಕಾಲಿನ ಸುತ್ತ ಹಗ್ಗವನ್ನು ಕಟ್ಟಿ ಮತ್ತು ಕೈಯಲ್ಲಿ ಒಂದು ತುಂಡು ಬಟ್ಟೆ ಸುತ್ತಿದ ಹಗ್ಗವನ್ನು ಹಿಡಿದುಕೊಂಡು ತೆಂಗಿನ ಮರ ಅಥವಾ ಅಡಿಕೆ ಮರವನ್ನು ಹತ್ತುತ್ತಾರೆ. ಅವರಿಗೆ ಯಾವುದೇ ರಕ್ಷಾ ಕವಚ ಇರುವುದಿಲ್ಲ.  ಕೈತಪ್ಪಿದರೆ ಕೆಳಕ್ಕೆ ಬೀಳುವ ಅಪಾಯ ಅಪಾರ ಪ್ರಮಾಣದಲ್ಲಿದೆ. ಈ ರೀತಿ ಬಿದ್ದವರು ಮತ್ತೆ ಏಳಲಾಗದ ಸ್ಥಿತಿ ತಲುಪಿದ ಉದಾಹರಣೆಯೂ ಸಾಕಷ್ಟಿದೆ. ಇದಕ್ಕಾಗಿ ವಿವಿಧ ಪ್ರಯತ್ನ ನಡೆಯುತ್ತಿದೆ.ಅಡಿಕೆ ಮರ ಬೆಳೆಸಲು ರೈತರು ಹಾಕುವ ಶ್ರಮವೆಲ್ಲಾ ಮಳೆಗಾಲದಲ್ಲಿ ಅತ್ಯಧಿಕ ಮಳೆಯ ಕಾರಣದಿಂದಾಗಿ ಕೊಳೆರೋಗ ಬಾಧಿಸಿ ನಾಶವಾಗುತ್ತದೆ, ಜೊತೆಗೆ ನುರಿತ ಕಾರ್ಮಿಕರ ಕೊರತೆಯಿಂದ ಬೆಳೆ ನಾಶವಾಗುತ್ತದೆ.
ಇದೀಗ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಗಣಪತಿ ಭಟ್ ಮೋಟಾರ್ ಮಾದರಿಯ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರದ ಮೂಲಕ ಅಡಿಕೆ ಮರ ಹತ್ತುವ ದೃಶ್ಯವುಳ್ಳ ವೀಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದೆ. ಬೆಳೆಗಾರರಲ್ಲಿ  ಹೊಸ ಭರವಸೆ ಮೂಡಿಸಿದೆ.
ಸಹಕಾರ : news13.in
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಬ್ಬರ್‌ ಆಮದು | ರಬ್ಬರ್‌ ಬೆಳೆಗಾರರಿಗೆ ತರಲಿದೆ ಧಾರಣೆ ಸಂಕಷ್ಟ

ದೇಶದಲ್ಲಿ ರಬ್ಬರ್‌ ಉತ್ಪಾದನೆ ಹೆಚ್ಚಳದ ನಡುವೆ ಇದೀಗ ರಬ್ಬರ್‌ ಆಮದು ನೀತಿಯು ರಬ್ಬರ್‌…

3 hours ago

ಅಕ್ರಮವಾಗಿ ಅಡಿಕೆ ಸಾಗಣೆ ಪ್ರಕರಣ | ಪಶ್ಚಿಮ ಬಂಗಾಳದಲ್ಲಿ ಅಡಿಕೆ ವ್ಯಾಪಾರಿಯ ಬಂಧನ

ಅಕ್ರಮವಾಗಿ ಅಡಿಕೆ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್ಬರಿ…

4 hours ago

ಸುಳ್ಯದಲ್ಲಿ ಏಕೆ ಇದೆಲ್ಲಾ ಬಗೆಹರಿಯದ ಸಮಸ್ಯೆ…? | ರಸ್ತೆ-ವಿದ್ಯುತ್‌-ಸೇತುವೆಗಳು ಮರೀಚಿಕೆಯೇ..? |

ಸುಳ್ಯದ ಬಹುತೇಕ ಪ್ರದೇಶ ಅರಣ್ಯದಿಂದ ಕೂಡಿದೆ. ಮಲೆನಾಡು ತಪ್ಪಲು ಪ್ರದೇಶವಾದ್ದರಿಂದ ಮಳೆಯೂ ಹೆಚ್ಚು,…

4 hours ago

ಹವಾಮಾನ ವರದಿ | 24-06-2025 | ಬದಲಾಯ್ತು ಹವಾಮಾನ ಲಕ್ಷಣಗಳು | ಜೂ.28 ವರೆಗೂ ಉತ್ತಮ ಮಳೆ ನಿರೀಕ್ಷೆ |

ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆಯ ಕಾರಣದಿಂದ ಮುಂಗಾರು ಸ್ವಲ್ಪ ಚುರುಕಾಗಿದ್ದು,…

13 hours ago

ದಾಖಲೆ ಧಾರಣೆಯತ್ತ ಕೊಬ್ಬರಿ | ತಿಪಟೂರಿನಲ್ಲಿ ಕ್ವಿಂಟಾಲ್‌ ಗೆ ಗರಿಷ್ಠ ದರ 26,167 ರೂಪಾಯಿಗೆ ಮಾರಾಟ

ಕೊಬ್ಬರಿ ಬೆಲೆ ಏರಿಕೆಯಾಗುತ್ತಿದ್ದು ಕ್ವಿಂಟಾಲ್‌ಗೆ 26 ಸಾವಿರ ರೂ. ಗೆ ಮಾರಾಟವಾಗುವ ಮೂಲಕ…

13 hours ago

ಒಬ್ಬರಿಂದೊಬ್ಬರು ಕಾಲೆಳೆದುಕೊಂಡರೆ ಹೇಗೆ..?

ಒಬ್ಬರಿಂದೊಬ್ಬರು ಕಾಲೆದುಕೊಂಡರೆ ಹೇಗಾದೀತು..? ಇದರ ಬದಲಾಗಿ ನೆರವಾಗುವ ಸಂದೇಶ ಹರಿಡಿದರೆ ಹೇಗೆ.. ಈ…

14 hours ago