ಪುತ್ತೂರು: ಅಡಿಕೆ ಹಾನಿಕಾರಕವೆಂದು ಒಂದು ಲಾಬಿ ನಿರಂತರ ಅಪಪ್ರಚಾರ ನಡೆಸುತ್ತಿದೆ. ಕಳೆದ ಎರಡು ದಶಕಗಳಿಂದ ಇದು ನಡೆಯುತ್ತಿದೆ. ಮಾಧ್ಯಮಗಳಲ್ಲಿ, ಸೆಮಿನಾರ್ ಗಳಲ್ಲಿ ಈ ಬಗ್ಗೆ ಪ್ರಯತ್ನಿಸಲಾಗುತ್ತಿದೆ. ಪಾರ್ಲಿಮೆಂಟ್ನಲ್ಲಿ ಕೂಡಾ ಪುನ: ಪುನ: ಪ್ರಶ್ನೆಗಳನ್ನು ಕೇಳಿಸುವ ಮೂಲಕ ಅದರ ದುರುದ್ದೇಶ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಹೇಳಿದ್ದಾರೆ.
ಅಧಿಕಾರಿಗಳ ಮೂಲಕ ನಡೆಯುವ ಇದು ಮಂತ್ರಿಗಳಿಗೂ ತಿಳಿಯುವುದಿಲ್ಲ. ಸಾಕಷ್ಟು ಅಧಿಕಾರಿಗಳು, ವಿಜ್ಞಾನಿಗಳು, ವೈದ್ಯರು ಹಾಗೂ ಬುದ್ಧಿಜೀವಿಗಳಂತೆ ನಟಿಸುವವರು ಇದರಲ್ಲಿ ಶಾಮೀಲಾಗಿರುತ್ತಾರೆ. ಬದಲಾಗಿ ಈವರೆಗೆ ಯಾವುದೇ ನೈಜ ಸಂಶೋಧನೆಯು ಅಡಿಕೆ ಹಾನಿಕಾರಕವೆಂದು ಹೇಳಿಲ್ಲ. ಬಹಳಷ್ಟು ವಿದೇಶಿ ಸಂಶೋಧನೆಗಳು ಅಡಿಕೆಯ ಉಪಯೋಗವು ಆರೋಗ್ಯಕ್ಕೆ ಪೂರಕವೆಂದೇ ಹೇಳಿವೆ. ಇತ್ತೀಚೆಗೆ ಸಿಪಿಸಿಆರ್ ಐ ಕಾಸರಗೋಡಿನಲ್ಲಿ ನಡೆದ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಕೂಡಾ ಅಡಿಕೆಯ ಬಗ್ಗೆ ಯಾವುದೇ ಋಣಾತ್ಮಕ ಪರಿಣಾಮಗಳ ಬಗ್ಗೆ ಉಲ್ಲೇಖ ಬಂದಿಲ್ಲ. ಆದರೆ ಈ ವಿಷಯಗಳು ಮಾಧ್ಯಮಗಳಲ್ಲಿ ಬೆಳಕಿಗೆ ಬರುವುದಿಲ್ಲ. ಇಂತಹ ಲಾಬಿಗಳು ಕೆಲಸ ಮಾಡುವುದು ಸರ್ವವಿದಿತ.
ಉದಾಹರಣೆಗಾಗಿ
1) ತೆಂಗಿನ ಎಣ್ಣೆ ಹಾನಿಕಾರಕ ಎಂದು ಪ್ರಚುರಪಡಿಸಿ ಸಾಕಷ್ಟು ಹಾನಿ ಮಾಡಲಾಗಿದೆ.
2) ಕೊಲೆಸ್ಟರಾಲ್ ಬಗ್ಗೆ ಭಯ ಹುಟ್ಟಿಸಿ ಸಾಕಷ್ಟು ತೊಂದರೆ ಮಾಡಲಾಗಿದೆ. ಒಂದು ಅಂದಾಜಿನಂತೆ ಔಷಧ ಕಂಪೆನಿಗಳಿಗೆ Trillian Dollar (1000 Billions) ವ್ಯಾಪಾರ ಒದಗಿಸಿದೆ.
3) ಹಾಗೆಯೇ ಡಯಾಬೆಟಿಕ್ ಹಾಗೂ ರಕ್ತದೊತ್ತಡಗಳ ಬಗ್ಗೆ ಸುಳ್ಳು ಮಾಹಿತಿ ಸೃಷ್ಟಿಸಿ ಔಷಧ ಕಂಪೆನಿಗಳು ಕೋಟ್ಯಾಂತರ ಗಳಿಸುತ್ತಿವೆ.
ಇವೆಲ್ಲ ಒಂದು ಆಪತ್ಕಾರಿ ಬೆಳವಣಿಗೆ. ಕಾಣದ ಕೈಗಳ ಈ ಕೃತ್ಯ ಖಂಡನಾಕಾರಿ. ಆದರೆ ಇಂತಹ ಪ್ರಯತ್ನ ನೈಜ ಹಾನಿಕಾರಕ ವಸ್ತುಗಳ ಬಗ್ಗೆ ಇಲ್ಲ ಯಾಕೆ. ಉದಾ: ಮದ್ಯ, ತಂಬಾಕು ಹಾಗೂ ಮಾದಕವಸ್ತುಗಳು.
ಅಡಿಕೆಯ ಉಪಯೋಗ ನಿಜವಾಗಿ ಲಾಭದಾಯಕ. ಶುಭಕಾರ್ಯಗಳಲ್ಲಿ ಔಷಧವಾಗಿ ಶತಮಾನಗಳಿಂದ ಇದು ಬಳಕೆಯಲ್ಲಿದೆ. ಅಜೀರ್ಣ, ಚರ್ಮರೋಗ ಇವುಗಳಿಗೆ ವ್ಯಾಪಕವಾಗಿ ಬಳಕೆಯಲ್ಲಿದೆ. ಹಿತಮಿತ ಬಳಕೆ ಆರೋಗ್ಯವರ್ಧಕ. ಇಷ್ಟೆಲ್ಲ ತಿಳಿದೂ ಸರಕಾರದ ಸ್ಪಷ್ಟ ನಿರ್ದೆಶನದ ಹೊರತಾಗಿಯೂ ಬಹಳಷ್ಟು ಕಳಪೆ ಗುಣಮಟ್ಟದ ಅಡಿಕೆ ಆಮದು ಆಗುತ್ತಿದೆ. ಎಲ್ಲಾ ಅಡೆತಡೆಗಳನ್ನು ಮೀರಿ ಇದು ದೇಶದ ಒಳಗೆ ನುಸುಳುತ್ತಿದೆ. ಕೃಷಿಕರಿಗೆ ನ್ಯಾಯಬೇಕು. ನೀರಿನ ಕೊರತೆ, ನುರಿತ ಕಾರ್ಮಿಕರ ಕೊರತೆ, ಏರುತ್ತಿರುವ ಒಳಸುರಿಗಳ ಬೆಲೆ, ಕೊಳೆರೋಗ ಮೂಲಕ (ಪರಿಣಾಮಕಾರಿ ಔಷಧ ಲಭ್ಯವಿಲ್ಲದಿರುವುದು) ಕಂಗಾಲಾಗಿರುವ ಬೆಳೆಗಾರರಿಗೆ ಸೂಕ್ತ ಪರಿಹಾರ ಬೇಕು ಎಂದು ಮಂಚಿ ಶ್ರೀನಿವಾಸ ಆಚಾರ್ ಒತ್ತಾಯಿಸಿದ್ದಾರೆ.
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…