Advertisement
ಅಪರಾಧ

ಅಡುಗೆ ಸರಿ ಮಾಡಲಿಲ್ಲ ಎಂದು ಪತ್ನಿಯನ್ನು ಇರಿದು ಕೊಂದ ಪತಿ..!

Share

ಪುತ್ತೂರು:ಅಡುಗೆ ಸರಿಯಾಗಿ ಮಾಡಲಿಲ್ಲ ಎಂಬ ವಿಚಾರಕ್ಕೆ ಕೋಪಗೊಂಡು ಪತಿಯೇ ಪತ್ನಿಯನ್ನು  ಇರಿದು ಕೊಂಡ ಘಟನೆ ಪುತ್ತೂರು ತಾಲೂಕಿನ ಕಲ್ಲಪದವು ಎಂಬಲ್ಲಿ  ನಿನ್ನೆ ರಾತ್ರಿ ನಡೆದಿದೆ. ಗಣೇಶ್ ಎಂಬಾತ ಕೊಲೆ ಮಾಡಿದ ಆರೋಪಿ, ಅಕ್ಷತಾ ಮೃತ ಪಟ್ಟವರು.

ಪುತ್ತೂರು ತಾಲೂಕಿನ  ಕಲ್ಲಪದವು ಎಂಬಲ್ಲಿ ಗಣೇಶ್ ಎಂಬಾತನು ತನ್ನ ಮನೆಯಲ್ಲಿ ಪತ್ನಿ ಅಕ್ಷತಾ ಎಂಬಾಕೆಯನ್ನು ಕ್ಷುಲ್ಲಕ ಕಾರಣಕ್ಕಾಗಿ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದು, ಗಾಯಗೊಂಡ ಅಕ್ಷತಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಸಂಜೆ ವೇಳೆ ಅಡುಗೆ ಸರಿ ಮಾಡಲಿಲ್ಲ ಎಂಬ ಪತಿ-ಪತ್ನಿಗೆ ಮಾತು ಬೆಳೆದು ಚೂರಿಯಿಂದ ಗಣೇಶನು ಅಕ್ಷತಾಳಿಗೆ ಇರಿದಿದ್ದ. ಈ ಸಂದರ್ಭ ಗಾಯಗೊಂಡ ಅಕ್ಷತಾ ಪಕ್ಕದ ಮನೆಗೆ ತೆರಳಿದಾಗ ಅಲ್ಲಿಗೂ ಬಂದು  ಇರಿಯಲು ಯತ್ನಿಸಿದಾಗ ಅಲ್ಲಿದ್ದವರು ಆತನನ್ನು ತಡೆದಿರುತ್ತಾರೆ. ಆಗ ಆರೋಪಿಯು ಸ್ಥಳದಿಂದ ಓಡಿಹೋಗಿದ್ದ.

ಕುತ್ತಿಗೆ, ಮುಖ ಮತ್ತಿತರ ಕಡೆ ಗಂಭೀರ ಗಾಯಗೊಂಡು ಕುಸಿದು ಬಿದ್ದ ಅಕ್ಷತಾ ಅವರನ್ನು ಆಟೋರಿಕ್ಷಾದಲ್ಲಿ ಅಕ್ಷತಾ ಅವರ ತಾಯಿ ಹಾಗೂ ಗಣೇಶನ ಅಣ್ಣನಾದ ಬಾಲಕೃಷ್ಣ ಅವರು  ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ  ಅಕ್ಷತಾ ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕು  ನಿಡ್ಪಳ್ಳಿ ಗ್ರಾಮದ ದೊಂಬಟೆಬರಿ ಮನೆ ಕಮಲ ಎಂಬವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು , ತಲೆಮರೆಸಿಕೊಂಡಿದ್ದ ಆರೋಪಿ ಗಣೇಶ್ ಎಂಬಾತನನ್ನು ಬಂಧಿಸಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ | ಮತ್ತೆ ಚೇತರಿಕೆಯ ಸಂಕೇತ ನೀಡಿದ ಅಡಿಕೆ ಧಾರಣೆ

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಜಿಗೆ ₹5 ಏರಿಕೆ ದಾಖಲಾಗಿದ್ದು, ಹೊಸ ಅಡಿಕೆ…

1 hour ago

ಒಂದು ದಿನದ ತೀವ್ರ ಬಿಸಿಲು 3,400 ಹೆಚ್ಚುವರಿ ಸಾವುಗಳಿಗೆ ಕಾರಣ…? ಭಾರತದ ಬಗ್ಗೆ ಬೆಚ್ಚಿಬೀಳಿಸುವ ಅಧ್ಯಯನ

ಭಾರತದಲ್ಲಿ ಕೇವಲ ಒಂದು ದಿನದ ತೀವ್ರ ಬಿಸಿಲು ಸುಮಾರು 3,400 ಹೆಚ್ಚುವರಿ ಸಾವುಗಳಿಗೆ…

5 hours ago

ಹವಾಮಾನ ಬಿಕ್ಕಟ್ಟಿನ ನಡುವೆಯೂ ಕೃಷಿ ಉಳಿಸುವ ದಾರಿ ಕಂಡುಕೊಂಡ ದಕ್ಷಿಣ ಏಷ್ಯಾ ದೇಶಗಳು – ಸ್ಥಳೀಯ ಆವಿಷ್ಕಾರಗಳಿಗೆ ಹೆಚ್ಚಿದ ಮಹತ್ವ

ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳು ಹವಾಮಾನ ಬದಲಾವಣೆ ಮತ್ತು ಆಹಾರ ಭದ್ರತೆ ಸವಾಲುಗಳನ್ನು…

6 hours ago

ಮುಂಗಾರು ಅಧಿಕೃತ ದಿನಾಂಕ ತಪ್ಪಿತು..! ಜೂನ್ ಮೊದಲ ವಾರದ ಬಳಿಕವೇ ಭಾರೀ ಮಳೆ ಸಾಧ್ಯತೆ ಎಂದ ಸ್ಕೈಮೆಟ್

ಈ ಬಾರಿ ಮುಂಗಾರು ತನ್ನ ಸಾಮಾನ್ಯ ಪ್ರವೇಶ ದಿನಾಂಕವನ್ನು ತಪ್ಪಿಸಿದೆ ಎಂದು ಸ್ಕೈಮೆಟ್…

15 hours ago

ಹೊಸ ಪಕ್ಷ ಸ್ಥಾಪನೆ ಊಹಾಪೋಹ – ‘ಇನ್ನೆರಡು ದಿನಗಳಲ್ಲಿ ಸ್ಪಷ್ಟನೆ ಕೊಡುತ್ತೇನೆ’ ಎಂದ ಅಣ್ಣಾಮಲೈ

ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ಊಹಾಪೋಹಗಳ…

16 hours ago

ಹವಾಮಾನ ವರದಿ | 01-06-2026 | ಜೂನ್ 4 ರಿಂದ ಕರಾವಳಿಯಲ್ಲಿ ಮುಂಗಾರು ಚಟುವಟಿಕೆ ಆರಂಭ ಸಾಧ್ಯತೆ – ಜೂನ್ 8ರಿಂದ ಮಳೆ ಮತ್ತಷ್ಟು ಹೆಚ್ಚಳದ ಸೂಚನೆ

ಕರ್ನಾಟಕದ ವಿವಿಧ ಭಾಗಗಳಲ್ಲಿ ಸಂಜೆ ಹಾಗೂ ರಾತ್ರಿ ಮಳೆಯ ವಾತಾವರಣ ಮುಂದುವರಿಯಲಿದೆ. ಜೂನ್…

22 hours ago