Advertisement
ಅನುಕ್ರಮ

ಅಪ್ಪನೆಂದರೆ ಅಪ್ಪ ಅಷ್ಟೇ!!!!

Share
ಮಕ್ಕಳು ಆ ದಿನ  ಖುಷಿಯಿಂದಲೇ ಒಳ ಬಂದವು, ಅಪ್ಪ, ಅಪ್ಪ ಎಂದು ಕರೆಯುತ್ತಲೇ ಮನೆ ತುಂಬಾ ಓಡಾಡಿದರು. ಬಾಯಾರಿಕೆ ಕುಡಿಯುತ್ತಿದ್ದ ಅಪ್ಪನ ನ್ನು ನೋಡಿ ಬಹಳ ಹರ್ಷಿಸಿದರು. ಯಾವತ್ತೂ ಅಪ್ಪ ಕೆಲಸ ಮುಗಿಸಿ ಬರುವಾಗ ಮಲಗಿರುತ್ತಿದ್ದ ಮಕ್ಕಳು ಇಂದು ಶಾಲೆಯಿಂದ ಬರುವಾಗಲೇ ಮನೆಯ ಹೊರಗಿದ್ದ ಚಪ್ಪಲುಗಳನ್ನು ನೋಡಿ ಸಂತೋಷ ಪಟ್ಟವು. ಈ ದಿನ ಅಪ್ಪನೊಂದಿಗೆ ಸಂತೋಷವಾಗಿ ಕಳೆಯಬಹುದಲ್ಲಾ ಎಂದು ಕುಣಿದಾಡಿದವು. ಮನೆಗೆ ಬಂದ ಮಕ್ಕಳನ್ನು ಕರೆದುಕೊಂಡು ಪೇಟೆಗೆ ಹೋದ ಅಪ್ಪ ಬೇಕೆನಿಸಿದೆಲ್ಲವನ್ನು ತೆಗೆಸಿ ಕೊಟ್ಟು ಕಣ್ಣಿನಲ್ಲಿ ಪ್ರೀತಿಯ  ಸೂಸಿದಾಗ ಅಪ್ಪನ ಬಗೆಗಿನ ಕೋಪ ವೆಲ್ಲಾ ತಣ್ಣಗೆ ದೂರವಾಯ್ತು. ಅಪ್ಪ ಜೊತೆಗಿದ್ದರೆ ಜಗತ್ತೇ ನಮ್ಮದು ಎಂಬ ಖುಷಿಯ ಮುಂದೆ ಉಳಿದೆಲ್ಲಾ ಭಾವನೆಗಳು ಗೌಣ.
ಗೆಳೆಯರ ಅಪ್ಪಂದಿರು ವಾಕಿಂಗ್, ಔಟಿಂಗ್ ಅಂತ ಕರೆದುಕೊಂಡು ಹೋಗುತ್ತಿದ್ದರೆ ನಮ್ಮ ಅಪ್ಪನನ್ಬು ಕಾಣುವುದೇ ಅಪರೂಪ ಎಂಬಂತ ಪರಿಸ್ಥಿತಿ ಮನೆಯಲ್ಲಿ.ಬೆಳಗಿನ ಹೊತ್ತು ಎಳುವಾಗಲೇ ಅಪ್ಪ ಕೆಲಸಕ್ಕೆ ಹೋಗಿಯಾಗಿರುತ್ತಿತ್ತು.  ಮನೆ ವಾರ್ತೆ ಗಳಲ್ಲಿ  ನಿರತಳಾಗಿರುವ ಅಮ್ಮನನ್ನು  ನೋಡುತ್ತಾ ಬೆಳೆವ ಮಕ್ಕಳಿಗೆ ಅಪ್ಪನ ಭಾವನೆಗಳು ಅರ್ಥವೇ ಆಗದು.
ದಿನದಿಂದ ದಿನಕ್ಕೆ ಏರುತ್ತಿರುವ ದಿನಬಳಕೆಯ ಸಾಮಾನುಗಳ ಖರ್ಚು, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ, ಸ್ವಂತದ್ದು ಅಂತ ಒಂದು ಪುಟ್ಟ ಎರಡು ಬೆಡ್ ರೂಮ್ ಗಳ ಮನೆಯ  ಕನಸು ,ಇದರ ನಡುವೆ ಹೆಚ್ಚುತ್ತಿರುವ ಪ್ರಾಯ, ಅದರೊಂದಿಗೆ ಕಾಯಿಲೆ ಕಸಾಲೆಗಳು. ಓಹ್ ಒಂದೇ ಎರಡೇ ಅಪ್ಪಂದಿರ ಸಮಸ್ಯೆಗಳು. ಕೆಲವರು  ವಟವಟ ಮಾತನಾಡುವವರು ಹಂಚಿಕೊಳ್ಳುತ್ತಾರೆ ಮೌನ ದಲ್ಲಿರುವವರು ಮನಸಲ್ಲೇ ಕೊರಗುತ್ತಾರೆ. ಒಟ್ಟಾರೆ ಯಾಗಿ ತಮ್ಮ ಸುಖವನ್ನು ಬದಿಗೊತ್ತಿ  , ತನ್ನವರು, ಮನೆ ಮಕ್ಕಳು ಅಂತ ದುಡಿಯುವುದು ಅಪ್ಪ ಅಮ್ಮಂದಿರಿಗೆ ಮಾತ್ರ ಸಾಧ್ಯ. ಅಮ್ಮಂದಿರು ಕಷ್ಟ ಸುಖ ಹಂಚಿಕೊಳ್ಳುತ್ತಾರೆ, ಅಪ್ಪಂದಿರು ಭಾವನೆಗಳನ್ನು ವ್ಯಕ್ತಪಡಿಸುವುದನ್ನು ಇಷ್ಟಪಡಲಾ ರರು.  ಒಂದು ನಿರ್ದಿಷ್ಟ ವೇತನ ಪಡೆಯು ವ ಉದ್ಯೋಗವಿದ್ದಾಗ  ಮಕ್ಕಳ ಆವಶ್ಯಕತೆ ಗಳಿಗೆ ಸ್ಪಂದಿಸುವ ದೈರ್ಯವಿರುತ್ತದೆ ಆದರೆ  ಎಲ್ಲಾ ಅಪ್ಪಂದಿರಿಗೂ ಆ ಭಾಗ್ಯವಿರುವುದಿಲ್ಲ ತಾನೇ..‌?ದಿನ ನಿತ್ಯದ ಅಗತ್ಯ ಗಳನ್ನು ಪೂರೈಸಲೇ ಹೆಣಗುವ  ಹೆತ್ತವರಿರುತ್ತಾರೆ. ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಎಷ್ಟೋ ಸಂಸಾರಗಳಿವೆ. ಅಲ್ಲಿ ಯಾವ ಭಾವನೆಗಳಿಗೂ ಬೆಲೆಯಿಲ್ಲ. ಆಯಾ ಹೊತ್ತಿನ ಅಗತ್ಯ ಗಳು ಪೂರೈಕೆ ಯಾದರೆ ಸಾಕು ಎಂಬ ಭಾವ ಮಾತ್ರ.
ಅಪ್ಪನೆಂದರೆ ತನ್ನೆಷ್ಟೋ ಕನಸುಗಳನ್ನು ಮನಸಿನಲ್ಲೇ ಕಟ್ಟಿ ಹಾಕಿ ಮಕ್ಕಳಲ್ಲಿ ಹೊಸ ಬದುಕಿನ,ಒಳ್ಳೆಯ ಭವಿಷ್ಯಕ್ಕೆ ಗಟ್ಟಿಯಾದ ಅಡಿಪಾಯ ಹಾಕಲು ಅಗತ್ಯವಾದುದನ್ನು ಒದಗಿಸುವುದರಲ್ಲೇ ತನ್ನ ಸಂತೋಷ ಕಾಣುವವನು.
ಬದುಕಿನ ಹಲವು ಮುಖಗಳ ಅನಾವರಣ ನಮಗಾಗದಂತೆ ಬೆಳೆಸುವುದು ಅಪ್ಪಂದಿರಿಂದ ಮಾತ್ರವೇ ಸಾಧ್ಯ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

7 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

12 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

1 day ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

2 days ago