ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ : ಕೇರಳದಲ್ಲಿ ಭಾರೀ ಮಳೆಯೊಂದಿಗೆ ಸುಳಿಗಾಳಿ ಸಾಧ್ಯತೆ

June 10, 2019
9:23 AM

ತಿರುವನಂತಪುರ: ತಡವಾಗಿ ಆಗಮಿಸಿದ ಮುಂಗಾರು ಮಳೆ ಏನಾಗುತ್ತದೆ ? ದುರ್ಬಲವಾಗುತ್ತಾ ? ವೇಗ ಪಡೆಯುತ್ತಾ ? ಈ ಪ್ರಶ್ನೆಗೆ ಕಾರಣ ಇದೆ. ಇದೀಗ  ಅರಬಿ ಸಮುದ್ರದಲ್ಲಿ ಭಾನುವಾರ ಬೆಳಿಗ್ಗಿನಿಂದಲೇ ವಾಯುಭಾರ ಕುಸಿತ ಉಂಟಾಗಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ತೀವ್ರ ತರಹದ ವಾಯುಭಾರ ಕುಸಿತ ಉಂಟಾಗಿ ಅದು ವಾಯು ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದು  ಸುಳಿ ಗಾಳಿಯಾಗಿ ರೂಪುಗೊಳ್ಳಲಿದೆ ಎಂಬ ಸೂಚನೆ ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Advertisement
Advertisement
Advertisement

ಗಾಳಿಗೆ ಹೆಸರು ನೀಡುವ ಸರದಿ ಈಗ ಭಾರತದ್ದಾಗಿದ್ದು ವಾಯು ಎಂಬ ಹೆಸರು ನೀಡಲಾಗಿದೆ. ಸೋಮವಾರ ರಾತ್ರಿ ವಾಯುಭಾರ ಕುಸಿತ ತೀವ್ರಗೊಳ್ಳಲಿದ್ದು ಅದುವರೆಗೆ ಕೇರಳದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ. ಕರ್ನಾಟಕ, ಗೋವಾ ತೀರಗಳಲ್ಲೂ ಮಳೆಯಾಗುವ ಸಂಭವ ಇದೆ. ಬುಧವಾರದ ವೇಳೆಗೆ ವಾಯುಭಾರ ಕುಸಿತ ಸುಳಿಗಾಳಿಯಾಗಿ ರೂಪಾಂತರಗೊಂಡು ದಕ್ಷಿಣ ಭಾರತದ ತೀರ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಸುತ್ತದೆಯೇ ಹೊರತು ಗಾಳಿ ಬೀಸಿ ನಾಶ ಉಂಟು ಮಾಡುವುದಿಲ್ಲ ಎಂಬ ಸೂಚನೆ ನೀಡಿದೆ. ಇದೇ ಚಂಡಮಾರುತವಾಗಿ ಪರಿವರ್ತನೆ ಸಾಧ್ಯತೆಯೂ ಇದೆ.

Advertisement

ಈಗ ಭಾರೀ ಮಳೆಯಾಗುವ ಸಂಭವವಿದ್ದರೂ ಈ ಬೆಳವಣಿಗೆ ಮುಂಗಾರು ಮಳೆಯನ್ನು ದುರ್ಬಲಗೊಳಿಸುವ ಆತಂಕ ಇದೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ. ಸುಳಿಗಾಳಿ ಗುಜರಾತ್ ತೀರದ ಮೂಲಕ ಪಾಕಿಸ್ಥಾನದ ಕರಾಚಿ ಭಾಗಕ್ಕೆ ಸಾಗುವ ಸಂಭವವಿದ್ದು ಅಲ್ಲೂ ಮಳೆಯಾಗಬಹುದು. ಅದು ಭಾರತದ ತೀರ ಪ್ರದೇಶದ ಮಳೆ ಕಡಿಮೆಯಾಗಲು ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತದೆ.

 

Advertisement

ಮಂಗಳೂರು ಪ್ರದೇಶದಲ್ಲೂ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

 

Advertisement

 

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎಚ್ಚರ… ತಾಯಂದಿರೇ ನಿಮ್ಮ ಮಕ್ಕಳಿಗೆ ಸೆರೆಲಾಕ್ ತಿನ್ನಿಸುತ್ತೀರಾ? ಬಯಲಾಯ್ತು ಶಾಕಿಂಗ್ ಮಾಹಿತಿ : ಮಕ್ಕಳ ಜೀವದೊಂದಿಗೆ ಆಟವಾಡುತ್ತಿರುವ ನೆಸ್ಲೆ
April 18, 2024
3:21 PM
by: The Rural Mirror ಸುದ್ದಿಜಾಲ
ಜೆಡಿಎಸ್‌ ಅಭ್ಯರ್ಥಿ, ಬಿಜೆಪಿ ಚಿಹ್ನೆ..! : Dr ಮಂಜುನಾಥ್‌ರನ್ನ ಬಿಜೆಪಿಯಿಂದ ನಿಲ್ಲಿಸಿದ್ದೇವೆ : ರಾಜಕೀಯ ತಂತ್ರಗಾರಿಕೆ ವರ್ಕೌಟ್‌ ಆಗಬೇಕು – ಹೆಚ್‌ ಡಿ ಕುಮಾರಸ್ವಾಮಿ
April 18, 2024
2:44 PM
by: The Rural Mirror ಸುದ್ದಿಜಾಲ
ಕ್ಷೀಣವಾಗುತ್ತಿರುವ ದೇಶದ ಮೊದಲ ಹಾಗೂ ಗಟ್ಟಿ ಪಕ್ಷ ಕಾಂಗ್ರೆಸ್‌ : ಈ ಬಾರಿ ಅತಿ ಕಡಿಮೆ ಸಂಖ್ಯೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ
April 18, 2024
2:25 PM
by: The Rural Mirror ಸುದ್ದಿಜಾಲ
ದಕ್ಷಿಣ ಭಾರತದಲ್ಲಿ ಬೆಂಗಳೂರು ಏರ್‌ಪೋರ್ಟ್‌ಗೆ ಒಲಿದ ಏವಿಯೇಷನ್‌ ಹಬ್‌ ಆಗುವ ಭಾಗ್ಯ | ಏನಿದು ಏವಿಯೇಷನ್‌ ಹಬ್‌? | ಏರ್ ಇಂಡಿಯಾ ಘೋಷಣೆ
April 17, 2024
2:31 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror