ಮನರಂಜನೆ

ಅರೆಭಾಷೆಯಲ್ಲೊಂದು ವಿನೂತನ ರಂಗಪ್ರಯೋಗ : ಮನ ಸೆಳೆದ ‘ಎಮ್ಮ ಮನೆಯಂಗಳದಿ’

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಸುಳ್ಯ: ಸಮೃದ್ಧ ಭಾಷೆಯಾದ ಅರೆಭಾಷೆಯಲ್ಲಿ ಸೃಷ್ಠಿಯಾಗುವ ನಾಟಕಗಳು ತನ್ನ ಆಕರ್ಷಕ ಅಭಿನಯ, ಮನೋಜ್ಞ ಭಾಷಾ ಪ್ರಯೋಗದ ಮೂಲಕ ಗಮನ ಸೆಳೆಯುತ್ತವೆ.
ರಂಗಭೂಮಿಯಲ್ಲಿ ಅರೆಭಾಷಾ ಪ್ರಯೋಗಗಳು ವಿರಳವಾದರೂ ಬಂದಿರುವ ನಾಟಕಗಳು ಬದುಕಿಗೆ ಆಪ್ತವಾಗಿ ಜನ ಮನ ಗೆಲ್ಲುತ್ತದೆ. ಇದಕ್ಕೆ ಒಂದು ಸೇರ್ಪಡೆ ರಂಗಭೂಮಿಯ ಭರವಸೆಯ ಕಲಾವಿದ ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೊಕೇಶ್ ಊರುಬೈಲು ನಿರ್ದೇಶನದ ‘ಎಮ್ಮ ಮನೆಯಂಗಳದಿ’ ಅರೆಭಾಷೆ, ಸಂಸ್ಕೃತಿ ಪ್ರತಿಬಿಂಬಿಸುವ ನಾಟಕ
ಗ್ರಾಮೀಣ ಜನಪದ ಕಥಾಹಂದರದಲ್ಲಿ ರಚಿತವಾದ ರಂಗ ಪ್ರಯೋಗ.  ಬೇಸಾಯ, ಬಿಸುಕಾಣಿಕೆ, ಬೇಟೆ, ಮಾಗಣೆ ಪಟೇಲರು ಮತ್ತು ಸಾಮಾನ್ಯ ರೈತರ ಬಾಂಧವ್ಯ ಜೊತೆಗೆ ಜಾತಿ,ಧರ್ಮ,  ಆಸ್ತಿ ,ಅಂತಸ್ತು ಮೀರಿದ ಪ್ರೇಮ, ಹಿರಿಯರ ಸಮ್ಮುಖದ ವಿವಾಹ , ಮದುವೆಯ  ಸಂಭ್ರಮದ ಜೊತೆಗೆ  ಅರೆಭಾಷಿಕ ಸಂಪ್ರದಾಯದ ಸೋಬಾನೆ ಹಾಡಿನ  ನವೀರಾದ ಸಂಗೀತದ ಜೊತೆಗೆ ಕಚಗುಳಿಯಿಡುವ ಸಂಭಾಷಣೆಗಳಿಗೆ ಅದ್ಭುತವಾಗಿ ರಂಗದ ಮೇಲೆ ಜೀವ ತುಂಬುವ ಕಲಾವಿದರು. ಸುಮಾರು ಒಂದು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟು ರಂಜಿಸುವ ,”ಎಮ್ಮ ಮನೆಯಂಗಳದಿ”ನಾಟಕಕ್ಕೆ ಸಾಕ್ಷಿಯಾಗಿದ್ದು ಪಂಜದ ಶ್ರೀ ಪಂಚಲಿಂಗೇಶ್ವರ ಸಭಾಂಗಣ.
ರಂಗದಲ್ಲಿ ಭವಾನಿ ಶಂಕರ್ ಅಡ್ತಲೆ, ಶಿವಪ್ರಸಾದ್ ಆಲೆಟ್ಟಿ, ದೇವಿಪ್ರಸಾದ್ ಕಾಯರ್ತೋಡಿ, ಪುಷ್ಪರಾಜ್ ಗೋಳಿತೊಟ್ಟು,ಸಂಪ್ರೀತಾ ರೈ ಕಾಯರ್ತೋಡಿ,ಶಶಿಕಾಂತ್ ಮಿತ್ತೂರು, ಶ್ವೇತಾ ಕೇರ್ಪಳ, ರಕ್ಷಿತ್ ಉಬರಡ್ಕ,  ಗಾನ, ಅಶ್ವಿನಿ ಪೇರಾಲು, ಮೋಕ್ಷಿತ್ ಕನಕಮಜಲು,  ಜವಾಹರ್ ಕೊಯಿಂಗಾಜೆ,ಜೈದಿಪ್, ಕೇಶವ ಪ್ರಸನ್ನ ಮನೋಜ್ಞ ಅಭಿನಯ ಪ್ರದರ್ಶಿಸಿದರು. ನೇಪಥ್ಯದಲ್ಲಿ ಶುಭದಾ .ಆರ್. ಪ್ರಕಾಶ್, ಮೇಘಕೃಷ್ಣ ಕಾಯರ್ತೋಡಿ, ಲೋಹಿತಾಶ್ವ ಪರಮಂಡಲ, ಕಮಲಾಕ್ಷ ಆಚಾರ್ಯ, ವಿಜಯಕುಮಾರ್ ಮಯೂರಿ
ಸಹಕರಿಸಿದರು.
ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಮತ್ತು ಜೇಸಿಐ ಪಂಜ ಕಾರ್ಯಕ್ರಮ ಪ್ರಾಯೋಜಿಸಿದ್ದರು. ಲೋಕೇಶ್ ಊರುಬೈಲು ನಿರ್ದೇಶನದ ಅರೆಭಾಷೆ ನಾಟಕ ‘ಮಾಯಕ’ ವು ಹತ್ತಾರು ಪ್ರದರ್ಶನ ಕಂಡು ಜನ ಮನ ಗೆದ್ದಿತ್ತು.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |

ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…

2 hours ago

ಹೊಸರುಚಿ | ಗುಜ್ಜೆ ಚಟ್ನಿ

ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ 3/4 ಕಪ್ ,ನೀರು…

3 hours ago

ಮಂಗಳ ಗ್ರಹ ಸಂಚಾರ ಯೋಗ | ಈ 7 ರಾಶಿಗೆ ರಾಜಯೋಗ

2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…

3 hours ago

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…

13 hours ago

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

1 day ago