ಸುದ್ದಿಗಳು

ಅಲ್ ಅಮೀನ್ ಪೆರುವಾಯಿ (ಯುಎಇ) 5 ನೇ ವಾರ್ಷಿಕೋತ್ಸವ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ದುಬೈ: ಬಡಹೆಣ್ಣು ಮಕ್ಕಳ ವಿವಾಹಕ್ಕೆ ಸಹಕಾರ, ಸೂರಿಲ್ಲದ ನಿರ್ಗತಿಕ ಕುಟುಂಬ ಕ್ಕೆ ಆಶ್ರಯ ಕಲ್ಪಿಸುವ, ಶೈಕ್ಷಣಿಕ ಪ್ರೋತ್ಸಾಹ ,  ಹೀಗೆ ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಪೆರುವಾಯಿ ನಾಡಿನ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಿರಂತರ ಸೇವೆ ಗಯ್ಯುತ್ತಿರುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿರುವ ಪೆರುವಾಯಿ ನಾಡಿನ ಅನಿವಾಸಿ ಭಾರತೀಯ ಸಹೃದಯಗಳು ಒಟ್ಟು ಸೇರಿಕೊಂಡು ರಚಿಸಿದ ಅಲ್ ಅಮೀನ್ ಪೆರುವಾಯಿ ಯುಎಇ ಸಮಿತಿಗೆ ಐದು ವರುಷ ತುಂಬಿದ ಸಂಭ್ರಮ ಹೊಸ್ತಿಲಲ್ಲಿದೆ .
ಸಮಿತಿಯ ವಾರ್ಷಿಕ ಮಹಾ ಸಂಭ್ರಮ ಹಾಗೂ ಈದ್ ಸಂಭ್ರಮ ಶಾರ್ಜಾ ಆಡಿಟೋರಿಯಂ ದುಬೈನಲ್ಲಿ ನಡೆಯಿತು . ಸಮಿತಿಯ ಹಮೀದ್ ಬದಿಯಡ್ಕ ಪೆರುವಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು . ಹಮೀದ್ ಕುಂಬ್ಳೆ ಪೆರುವಾಯಿ, ಅಝೀಜ್   ಮುಚ್ಚಿರಪದವು  , ಶಾಫಿ  ಮುಚ್ಚಿರಪದವು ,ಶಾಫಿ ಕಾನ ಹಾಗೂ ಮೂಸ ಸೇನೆರಪಾಲು ಮುಖ್ಯ ಅತಿಥಿಗಳಾಗಿದ್ದರು .
ಮಾನವೀಯ ಮೌಲ್ಯಗಲಿಗೆ ಪ್ರೋತ್ಸಾಹಿಸುತ್ತ, ಸಮಿತಿಯು ಮುಂದಿನ ಒಂದು ವರ್ಷ ದಲ್ಲಿ ಕೈಗೊಳ್ಳಬೇಕಾದ ಸಮುದಾಯ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ಕ್ರಿಯಾ ಯೋಜನೆಯನ್ನು ಈ ಸಂದರ್ಭದಲ್ಲಿ  ತಯಾರಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ :
2019-20 ನೇ ಸಾಲಿನ ನೂತನ  ಅಧ್ಯಕ್ಷರಾಗಿ ರಶೀದ್ ಸೇನೆರಪಾಲು , ಗೌರವಾಧ್ಯಕ್ಷ ರಾಗಿ ಹಮೀದ್ ಬದಿಯಡ್ಕ, ಉಪಾಧ್ಯ ಕ್ಷ ರಾಗಿ ರಫೀಕ್ ಕದ್ರಡ್ಕ ,  ಪ್ರದಾನ ಕಾರ್ಯ ದರ್ಶಿಯಾಗಿ ಸಮೀರ್ ದರ್ಖಾಸ್  ಪೆರುವಾಯಿ, ಜೊತೆ ಕಾರ್ಯದರ್ಶಿ ಯಾಗಿ ರಿಯಾಜ್  ಮುಚ್ಚಿರಪದವು  ಹಾಗೂ ಹನೀಫ್ ಕಡಂಬಿಲ ಹಾಗೂ ಕೋಶಾಧಿಕಾರಿ ಯಾಗಿ ಶರೀಫ್  ಮುಚ್ಚಿರಪದವು  ಇವರುಗಳು ಆಯ್ಕೆ ಗೊಂಡು ,ಕಾರ್ಯಕಾರಿ ಸಮಿತಿಗಳನ್ನು ಒಳಗೊಂಡ ಕಮಿಟಿ ರಚನೆ ಗೊಂಡಿತು .
ರಶೀದ್ ಪೆರುವಾಯಿ ಸ್ವಾಗತಿಸಿ , ಸಿದ್ದೀಕ್ ಕಾನ ಧನ್ಯವಾದ ಗೈದರು . ಅಶ್ರಫ್ ಮುಚಿರಪದವು ಕಾರ್ಯಕ್ರಮ ನಿರೂಪಿಸಿದರು.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶರಧಿ.ಡಿ.ಎಸ್

ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…

3 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕೃತಿಕಾ

ಕೃತಿಕಾ, 9 ನೇ ತರಗತಿ, ಸೈಂಟ್‌ ಆನ್ಸ್‌ ಇಂಗ್ಲಿಷ್‌ ಮೀಡಿಯಂ ಶಾಲೆ, ಕಡಬ…

3 hours ago

ರಾಜ್ಯಾದ್ಯಂತ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮ | ಹೆಬ್ರಿಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಚಾಲನೆ

ಧರ್ಮಸ್ಥಳ ಮತ್ತು ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…

4 hours ago

ಶತ್ರುಗಳಿಂದ ಈ ರಾಶಿಯವರಿಗೆ ಜೀವಕ್ಕೆ ಅಪಾಯವಿದೆ..?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನ, ರಾಶಿಗಳ ಸಂಯೋಜನೆ, ಮತ್ತು ಜನ್ಮಕುಂಡಲಿಯ ಭಾವಗಳು…

4 hours ago

ಹವಾಮಾನ ವರದಿ | 12-07-2025 | ಸಾಮಾನ್ಯ ಮಳೆ ಮುಂದುವರಿಕೆ | ಜು.16 ರಿಂದ ಮಳೆ ಹೆಚ್ಚಳ |

ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.

22 hours ago

ತಾಳೆ ಬೆಳೆ ಕೃಷಿ | ಅಡಿಕೆಯ ಪರ್ಯಾಯ ಬೆಳೆಯ ಬಗ್ಗೆ ಮಾಹಿತಿ

ಅಡಿಕೆ ಬೆಳೆಗೆ ಪರ್ಯಾಯವಾಗಿ ಅಥವಾ ಉಪಬೆಳೆಯಾಗಿ ತಾಳೆ ಬೆಳೆಯನ್ನು ಬೆಳೆಯುವ ಬಗ್ಗೆ ಈಗಾಗಲೇ…

24 hours ago