Advertisement
ಅಪರಾಧ

ಅಶ್ಲೀಲ ವೀಡಿಯೊ ,ಮಾನಹಾನಿ ತೇಜೊವಧೆ ವೀಡಿಯೋ ಮಾಡಿದರೆ, ಶೇರ್ ಮಾಡಿದರೆ ಏನಾಗುತ್ತದೆ ?

Share

ಶಾಲಾ -ಕಾಲೇಜು ವಿದ್ಯಾರ್ಥಿಗಳು   ಹಾಗೂ ಸಾರ್ವಜನಿಕರು ಗಮನಿಸಲೇಬೇಕಾದ ಅಂಶ ಇದು. ಮೊಬೈಲ್, ಸೋಶಿಯಲ್ ಮೀಡಿಯಾ ಬಳಕೆ ಮಾಡುವ ಮಂದಿ ಎಚ್ಚರದಿಂದ ಬಳಕೆ ಮಾಡಿರಿ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿ ಗಳು ಸಾಮೂಹಿಕ ಅತ್ಯಾಚಾರ ದಲ್ಲಿ ತೊಡಗಿದ ವೀಡಿಯೊ ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಘಟನೆಯ ಆಧಾರದ ಮೇಲೆ ಯಾವುದೇ ಅಶ್ಲೀಲ ವಾದಂತಹ ವೀಡಿಯೊಗಳು ,ಯಾವುದೇ ವ್ಯಕ್ತಿ ಯನ್ನ ತೇಜೊವದೆ ಮಾಡುವಂತಹ ವೀಡಿಯೋ ಗಳು ಧರ್ಮ ಹಾಗೂ ರಾಜಕೀಯ ಕ್ಕೆ ಸಂಬಂಧ ಪಟ್ಟಂತೆ ಮಾನಹಾನಿ ಕಾರಿ ಮಾಡುವಂತಹ ವೀಡಿಯೋ ,ಸಂದೇಶಗಳು ಹರಿದಾಡಿದರೆ “INFORMATION TECHNOLOGY ACT” ಪ್ರಕಾರ 3 ವರ್ಷ ಕ್ಕೂ ಮೇಲ್ಪಟ್ಟು ಜೈಲು ಹಾಗೂ 10 ಲಕ್ಷ ದಂಡವನ್ನ ವಿಧಿಸಬೇಕಾಗುತ್ತದೆ. ಅಲ್ಲದೆ ಅಶ್ಲೀಲ ವಾಗಿ ಬಂದಂತಹ ವೀಡಿಯೊ ಗಳು ಅಥವಾ ಮೆಸೇಜ್ ಗಳು ಆಗಿರಲಿ ಅದರ ಗುಣಮಟ್ಟ ನೋಡದೆ ,ಸತ್ಯಾಸತ್ಯತೆ ತಿಳಿಯದೆ ರವಾನೆ ಮಾಡುವುದರಿಂದ ಕೇಸಿಗೆ ಒಳಗಾಗುತ್ತೀರಿ.ಯಾರು ಸಂದೇಶ ರವಾನಿಸುತ್ತೀರೊ ಅವರ ಭವಿಷ್ಯ ದ ಮೇಲೂ ಪರಿಣಾಮ ಬೀರುತ್ತದೆ ಹಾಗೂ ನಿಮ್ಮ ಮನೆಯ ಘನತೆಗೂ ಕಪ್ಪು ಚುಕ್ಕೆಯಾಗಿದೆ ಇದಕ್ಕೆ ಕಾರಣವೇನೂ ಸಿಗಲ್ಲ. ಅಲ್ಲದೆ “IT ACT” ಪ್ರಕಾರ ನಿಮ್ಮ-ನಿಮ್ಮ ಮೊಬೈಲ್ ನಲ್ಲಿ ಇಂತಹ ಅಶ್ಲೀಲ ವಾದ ಸಂದೇಶ ಗಳು ವೀಡಿಯೋ ಗಳು ಬಂದು ನಿಮ್ಮ ಮೊಬೈಲ್ ನಲ್ಲಿ ಉಳಿಕೆಯಾಗಿದ್ದರೆ ಅದಕ್ಕೆ ನೀವು ಹೊಣೆಯಾಗುತ್ತೀರಿ.ತಕ್ಷಣ ಡಿಲೀಟ್ ಮಾಡುವಲ್ಲಿ ನೀವು ಪ್ರವೃತರಾಗಬೇಕು ಕಾಲೇಜೊಂದರ ವಿದ್ಯಾರ್ಥಿ ಗಳು ಸೇರಿ ಸಾಮೂಹಿಕ ಅತ್ಯಾಚಾರ ಮಾಡುವ ವೀಡಿಯೋಗಳು ,ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು,ಅದು ಕಾನೂನಿನ ಪ್ರಕಾರ ಘೋರ ಅಪರಾಧ ವಾಗಿರುತ್ತದೆ.ಈ ಪ್ರಕರಣ ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ವೀಡಿಯೋ ಹರಿದಾಡಿದವರನ್ನು ಈಗಾಗಲೇ ಬಂಧಿಸಲಾಗುತ್ತಿದೆ.ಆದರೂ ನಿರಂತರವಾಗಿ ಈಗಲೂ ಹರಿದಾಡುತ್ತಿರುವ ವಿಷಯವು ಪೋಲಿಸ್ ಇಲಾಖೆಯ ಗಮನಕ್ಕೆ ಬಂದಿದ್ದು ಅಂತಹವರ ಮೇಲೆ ನಿಗಾ ಗಮನಹರಿಸುತ್ತಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

15 hours ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

17 hours ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

17 hours ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

1 day ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

1 day ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

1 day ago