ನರಿಮೊಗರು: ಈ ಯುವಕ ನೋಡಲು ಎಲ್ಲರಂತೆಯೇ ಸಾಮಾನ್ಯರಂತೆಯೇ ಕಾಣುತ್ತಾರೆ.ಆದರೆ ಇವರ ಸಮಸ್ಯೆ ಮಾತ್ರ ವಿಶೇಷವಾದದು.ಸುಮಾರು 27 ವರ್ಷ ಪ್ರಾಯದ ಈ ಯುವಕನ ಹೆಸರು ಪುನೀತ್,ನರಿಮೊಗರು ಗ್ರಾಮದ ಕೆದ್ಕಾರು ನಿವಾಸಿ ಮೋನಪ್ಪ ಗೌಡರ ಪುತ್ರ.
ಈ ಯುವಕನಿಗೆ ಹುಟ್ಟುವಾಗಲೇ ಮೂತ್ರಕೋಶ ಹಾಗೆ ಜನನಾಂಗವಿಲ್ಲದೆ ಇದ್ದವರು.ಹೊಕ್ಕಳು ಮೂಲಕ ಮೂತ್ರ ಹೋಗುತ್ತಿದ್ದು,ಶಸ್ತ್ರ ಚಿಕಿತ್ಸೆ ಬಳಿಕ ಹೊರಗಡೆ ಚೀಲ ಜೋಡಿಸಿ ಮೂತ್ರ ಹೋಗುವಂತೆ ಪುನೀತ್ ಆವರು 5 ವರ್ಷದ ಬಾಲಕನಾಗಿದ್ದಾಗ ಮಾಡಲಾಗಿತ್ತು.ಇದು ವೈದ್ಯಕೀಯ ಲೋಕದಲ್ಲೇ ವಿಶೇಷ ಪ್ರಕರಣವೆಂದು ಮಾಧ್ಯಮಗಳಲ್ಲಿ 22 ವರ್ಷಗಳ ಹಿಂದೆ ಭಾರಿ ಸುದ್ದಿಯಾಗಿತ್ತು.ಹೀಗೆ ಬಾಲ್ಯದಿಂದ ಈಗಿನವರೆಗೂ ಈತನ ಚಿಕಿತ್ಸೆಗಾಗಿ ಮನೆಯವರು ಲಕ್ಷಾಂತರ ವ್ಯಯ ಮಾಡಿದ್ದಾರೆ.
ಹಲವು ಬಾರಿ ಕಿಡ್ನಿ ಸಮಸ್ಯೆ ಕಂಡು ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ.ಆದರೆ ಕೆಲ ಸಮಯದಿಂದ ತೀರಾ ಅನಾರೋಗ್ಯ ಎದುರಿಸುತ್ತಿರುವ ಈ ಯುವಕನ ಮನೆಯವರಿಗೆ ಈಗ ಮಗನ ಚಿಕಿತ್ಸೆಗೆ ಹಣ ಹೊಂದಿಸುವುದು ಸವಾಲಿನ ಕೆಲಸವಾಗಿದೆ.ಈಗ ಅನಾರೋಗ್ಯದಿಂದಾಗಿ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಲಕ್ಷಾಂತರ ವ್ಯಯಿಸಲಾಗಿದ್ದು,ಮುಂದಿನ ಚಿಕಿತ್ಸೆಗೆ ಆರ್ಥಿಕ ಅಡಚಣೆಯಲ್ಲಿದ್ದಾರೆ. ಇವರು ದಾನಿಗಳು ಆರ್ಥಿಕ ಸಹಕಾರ ನೀಡುವಂತೆ ವಿನಂತಿಸಿಕೊಂಡಿದ್ದಾರೆ.
ಸಹಾಯ ಮಾಡುವ ದಾನಿಗಳು ಈ ಖಾತೆಗೆ ಜಮೆ ಮಾಡುವಂತೆ ಕೋರಿದ್ದಾರೆ. ಸಂಪರ್ಕ ಮೋನಪ್ಪ ಗೌಡ 8496827014, 9980575433
ದಕ್ಷಿಣ ಕನ್ನಡ, ಕೊಡಗು ಮೊದಲಾದ ಭಾಗದಲ್ಲಿ ಮಳೆಗೆ ಭೂಕುಸಿತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ…
ರಾಜ್ಯದ ಹಲವೆಡೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ…
2025ರ ಜೂನ್ 7 ರಿಂದ ಮಂಗಳ ಗ್ರಹವು ಸಿಂಹ ರಾಶಿಗೆ ಪ್ರವೇಶ ಮಾಡಲಿರುವುದು…
ಹೆಚ್ಚಿನ ವಿವರಗಳನ್ನು ಪಡೆಯಲು ಜ್ಯೋತಿಷ್ಯರೊಂದಿಗೆ ಸಂಪರ್ಕಿಸಬಹುದು. 9535156490
ಜಗತ್ತಿನಲ್ಲಿ ಎಲ್ಲವನ್ನೂ ಹಣದಿಂದಲೇ ಖರೀದಿ ಮಾಡಲು ಸಾಧ್ಯವಿಲ್ಲ. ನೀತಿ, ನಡತೆ, ಬದ್ಧತೆಗಳು ಹಣ ಕೊಟ್ಟರೂ…
ಯಕ್ಷಗುರು, ಭಾಗವತ ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ ‘ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ’…