ನರಿಮೊಗರು: ಈ ಯುವಕ ನೋಡಲು ಎಲ್ಲರಂತೆಯೇ ಸಾಮಾನ್ಯರಂತೆಯೇ ಕಾಣುತ್ತಾರೆ.ಆದರೆ ಇವರ ಸಮಸ್ಯೆ ಮಾತ್ರ ವಿಶೇಷವಾದದು.ಸುಮಾರು 27 ವರ್ಷ ಪ್ರಾಯದ ಈ ಯುವಕನ ಹೆಸರು ಪುನೀತ್,ನರಿಮೊಗರು ಗ್ರಾಮದ ಕೆದ್ಕಾರು ನಿವಾಸಿ ಮೋನಪ್ಪ ಗೌಡರ ಪುತ್ರ.
ಈ ಯುವಕನಿಗೆ ಹುಟ್ಟುವಾಗಲೇ ಮೂತ್ರಕೋಶ ಹಾಗೆ ಜನನಾಂಗವಿಲ್ಲದೆ ಇದ್ದವರು.ಹೊಕ್ಕಳು ಮೂಲಕ ಮೂತ್ರ ಹೋಗುತ್ತಿದ್ದು,ಶಸ್ತ್ರ ಚಿಕಿತ್ಸೆ ಬಳಿಕ ಹೊರಗಡೆ ಚೀಲ ಜೋಡಿಸಿ ಮೂತ್ರ ಹೋಗುವಂತೆ ಪುನೀತ್ ಆವರು 5 ವರ್ಷದ ಬಾಲಕನಾಗಿದ್ದಾಗ ಮಾಡಲಾಗಿತ್ತು.ಇದು ವೈದ್ಯಕೀಯ ಲೋಕದಲ್ಲೇ ವಿಶೇಷ ಪ್ರಕರಣವೆಂದು ಮಾಧ್ಯಮಗಳಲ್ಲಿ 22 ವರ್ಷಗಳ ಹಿಂದೆ ಭಾರಿ ಸುದ್ದಿಯಾಗಿತ್ತು.ಹೀಗೆ ಬಾಲ್ಯದಿಂದ ಈಗಿನವರೆಗೂ ಈತನ ಚಿಕಿತ್ಸೆಗಾಗಿ ಮನೆಯವರು ಲಕ್ಷಾಂತರ ವ್ಯಯ ಮಾಡಿದ್ದಾರೆ.
ಹಲವು ಬಾರಿ ಕಿಡ್ನಿ ಸಮಸ್ಯೆ ಕಂಡು ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ.ಆದರೆ ಕೆಲ ಸಮಯದಿಂದ ತೀರಾ ಅನಾರೋಗ್ಯ ಎದುರಿಸುತ್ತಿರುವ ಈ ಯುವಕನ ಮನೆಯವರಿಗೆ ಈಗ ಮಗನ ಚಿಕಿತ್ಸೆಗೆ ಹಣ ಹೊಂದಿಸುವುದು ಸವಾಲಿನ ಕೆಲಸವಾಗಿದೆ.ಈಗ ಅನಾರೋಗ್ಯದಿಂದಾಗಿ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಲಕ್ಷಾಂತರ ವ್ಯಯಿಸಲಾಗಿದ್ದು,ಮುಂದಿನ ಚಿಕಿತ್ಸೆಗೆ ಆರ್ಥಿಕ ಅಡಚಣೆಯಲ್ಲಿದ್ದಾರೆ. ಇವರು ದಾನಿಗಳು ಆರ್ಥಿಕ ಸಹಕಾರ ನೀಡುವಂತೆ ವಿನಂತಿಸಿಕೊಂಡಿದ್ದಾರೆ.
ಸಹಾಯ ಮಾಡುವ ದಾನಿಗಳು ಈ ಖಾತೆಗೆ ಜಮೆ ಮಾಡುವಂತೆ ಕೋರಿದ್ದಾರೆ. ಸಂಪರ್ಕ ಮೋನಪ್ಪ ಗೌಡ 8496827014, 9980575433
ಇಂಡೋನೇಷ್ಯಾದ ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯದಿಂದ ವರ್ಷಕ್ಕೆ 3.6 ಬಿಲಿಯನ್ ಘನ ಮೀಟರ್…
ಎಲ್ ನಿನೋ ಆತಂಕದ ನಡುವೆಯೂ ಭಾರತದಲ್ಲಿ 2026ರ ಖಾರಿಫ್ ಬಿತ್ತನೆ 1,000 ಲಕ್ಷ…
ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೆ ಬಿಸಿಲು–ಮೋಡದೊಂದಿಗೆ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆ…
ತುಮಕೂರು ಕೈಗಾರಿಕಾ ನೋಡ್ಗೆ 1,736 ಎಕರೆ ಮೀಸಲು. ₹7,000 ಕೋಟಿ ಹೂಡಿಕೆ, 88…
ಮಂಗಳೂರು ಮತ್ತು ಬೆಂಗಳೂರಿನಲ್ಲಿ ವಿವಿಧ ಕಂಪೆನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಆ.20…
ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…