ಸಾಂಸ್ಕೃತಿಕ

ಅ.12 ರಿಂದ ಧರ್ಮಸ್ಥಳದಲ್ಲಿ “ವೀಣೆಯ ಬೆಡಗು” : ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಧರ್ಮಸ್ಥಳ: ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ವಸಂತ ಮಹಲ್‍ನಲ್ಲಿ ಬೆಂಗಳೂರಿನ ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಅ.12 ಮತ್ತು 13 (ಶನಿವಾರ ಮತ್ತು ಭಾನುವಾರ) “ವೀಣೆಯ ಬೆಡಗು” – ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Advertisement

ಅ. 12 ರಂದು ಶನಿವಾರ ಸಂಜೆ ಗಂಟೆ 4 ರಿಂದ ಪ್ರೊ. ಅರವಿಂದ ಹೆಬ್ಬಾರ್ ಮತ್ತು ಬಳಗದವರಿಂದ ವೃಂದಗಾಯನ ನಡೆಯಲಿದೆ. ವಿದ್ವಾನ್ ಕೃಷ್ಣ ಪವನ್‍ ಕುಮಾರ್ ಮೃದಂಗ ವಾದಕರಾಗಿ ಸಹಕರಿಸುವರು.

ಸಂಜೆ ಗಂಟೆ 5 ರಿಂದ ಡಾ. ಸಹನಾ, ಎಸ್.ವಿ. (ವೀಣೆ), ವಿದ್ವಾನ್ ಬಿ.ಎಸ್. ಪ್ರಶಾಂತ್ (ಮೃದಂಗ) ಮತ್ತು ವಿದ್ವಾನ್‍ ಟಿ.ಎನ್. ರಮೇಶ್ (ಘಟಂ) ಕಾರ್ಯಕ್ರಮ ನೀಡುವರು.
ಸಂಜೆ ಗಂಟೆ 7 ರಿಂದ  ಎ. ಕನ್ಯಾಕುಮಾರಿ (ಪಿಟೀಲು) ವಿದ್ವಾನ್ ಬಿ. ವಿಠಲ ರಂಗನ್ (ಸಹವಾದನ) ವಿದ್ವಾನ್‍ ಜಯಚಂದ್ರರಾವ್ (ಮೃದಂಗ), ವಿದ್ವಾನ್‍ ಎನ್. ಅಮೃತ್ (ಖಂಜರಿ) ಮತ್ತು ವಿದ್ವಾನ್ ಬಿ. ರಾಜಶೇಖರ್ (ಮೋರ್ಚಿಂಗ್) ಕಾರ್ಯಕ್ರಮ ನಡೆಸಿಕೊಡುವರು.

ಅ.13 ರಂದು ಭಾನುವಾರ ಸಂಜೆ ಗಂಟೆ 3.30 ರಿಂದ ವಿದ್ವಾನ್ ಬಾಲಸುಬ್ರಹ್ಮಣ್ಯ ಮತ್ತು ಬಳಗದವರಿಂದ ವೃಂದಗಾಯನ ನಡೆಯಲಿದೆ. ವಿದುಷಿ ಸಿ.ಎಸ್. ಉಷಾ (ಪಿಟೀಲು) ಮತ್ತು ವಿದ್ವಾನ್ ಬಿ.ಎಸ್. ಆನಂದ್ (ಮೃದಂಗ) ಸಹಕರಿಸುವರು.
ಸಂಜೆ ಗಂಟೆ 4.30 ರಿಂದ ಡಾ.ಗೀತಾ ಭಟ್‍ ಅವರಿಂದ ವೀಣಾವಾದನ ಕಾರ್ಯಕ್ರಮ ನಡೆಯಲಿದೆ.
ಸಂಜೆ 5.30 ರಿಂದ ನೀಲಾ ರಾಂಗೋಪಾಲ್‍ ಅವರ ಗಾಯನ ಕಾರ್ಯಕ್ರಮವಿದೆ.
ಸಂಜೆ ಗಂಟೆ 7.30 ರಿಂದ ವಿದ್ವಾನ್‍ ರಾಮಕೃಷ್ಣನ್ ಮೂರ್ತಿ ಮತ್ತು ಬಳಗದವರಿಂದ ಸಂಗೀತ ಗಾಯನವಿದೆ.

ಪ್ರಶಸ್ತಿ ಪ್ರದಾನ ಸಮಾರಂಭ:

Advertisement

 

ಇದೇ 12 ರಂದು ಶನಿವಾರ ಸಂಜೆಗಂಟೆ 6 ರಿಂದ ವಸಂತ ಮಹಲ್‍ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಶಸ್ತಿ ಪ್ರದಾನ ಮಾಡುವರು.

ಪ್ರಶಸ್ತಿ ಪುರಸ್ಕೃತರು:

ವೀಣೆ ಶೇಷಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ: ಪದ್ಮಶ್ರೀ ಸಂಗೀತ ಕಲಾನಿಧಿ ಎ. ಕನ್ಯಾಕುಮಾರಿ (ಒಂದು ಲಕ್ಷರೂ. ನಗದು ಪುರಸ್ಕಾರ. ಪ್ರಾಯೋಜಕರು: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು)

ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕರಾಷ್ಟ್ರೀಯ ಪ್ರಶಸ್ತಿ:

Advertisement

ಸಂಗೀತ ಕಲಾ ಆಚಾರ್ಯ, ಸಂಗೀತ ಕಲಾ ರತ್ನ ನೀಲಾ ರಾಂಗೋಪಾಲ್ (ಪುರಸ್ಕಾರ: ಒದು ಲಕ್ಷರೂ. ನಗದು ಪ್ರಾಯೋಜಕರು : ಎ.ಎಚ್. ರಾಮರಾವ್, ಅಧ್ಯಕ್ಷರು, ನ್ಯಾಷನಲ್‍ ಎಜ್ಯುಕೇಶನ್ ಸೊಸೈಟಿ ಮತ್ತು ಸುಧಾರಾಮರಾವ್, ಬೆಂಗಳೂರು)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವ್ಯಾಪಾರದಲ್ಲಿ ಈ ರಾಶಿಯವರಿಗೆ ಗಳಿಕೆಯ ಬದಲು ಖರ್ಚು ಹೆಚ್ಚಾಗುವ ಸೂಚನೆ

ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…

6 hours ago

ಭೂಮಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ಮರುಯಾನ | ಕ್ಯಾಲಿಫೋರ್ನಿಯಾದ ಕಡಲತೀರದಲ್ಲಿ ಇಳಿಯಲಿರುವ ನೌಕೆ

ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…

14 hours ago

ಬದುಕು ಪುರಾಣ | ಮನವನ್ನು ಚುಚ್ಚುವ ಅಳಿಲು

ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…

14 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಧಾತ್ರಿ ಕೆ ರಾವ್

ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…

1 day ago