ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಲ್ಯಾಬ್ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯ ಕೆ. ಅವರು ಅ.31 ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.
1986ರ ಜ.1ರಂದು ಉದ್ಯೋಗಕ್ಕೆ ಸೇರಿಕೊಂಡಿದ್ದ ಇವರು, ಇದೀಗ ಸುಮಾರು 33 ವರ್ಷ 10 ತಿಂಗಳುಗಳ ಸುದೀರ್ಘ ವೃತ್ತಿಗೆ ವಿದಾಯ ಹೇಳಲಿದ್ದಾರೆ. ಗಾಬ್ರ ಹಾಗೂ ಸುಂದರಿ ದಂಪತಿಯ ಪುತ್ರನಾದ ಇವರು ಎಸ್ಎಸ್ಎಲ್ಸಿ ಶಿಕ್ಷಣದ ತರುವಾಯ ಸ್ವಲ್ಪ ಸಮಯದ ನಂತರ ಈ ವೃತ್ತಿಗೆ ಸೇರಿಕೊಂಡಿದ್ದರು. ಪ್ರಸ್ತುತ ನೆಹರೂನಗರದ ಕಲ್ಲೇಗ ಸಮೀಪದಲ್ಲಿ ವಾಸವಿರುವ ಇವರಿಗೆ ಕಿರಣ್ಮುರಳಿ, ಅರದಮುರಳಿ ಹಾಗೂ ಯಶಸ್ವಿನಿ ಎಂಬ ಮೂವರು ಮಕ್ಕಳಿದ್ದಾರೆ. ದಿ. ಕಲಾವತಿ ಇವರ ಪತ್ನಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel