ಆಚರಣೆ ಮನೆಗೆ ಮಾತ್ರ ಸೀಮಿತವಲ್ಲ: ಡಾ. ಪೀಟರ್ ವಿಲ್ಸನ್ ಪ್ರಭಾಕರ್

October 30, 2019
10:17 PM

ಪುತ್ತೂರು: ಹಬ್ಬಗಳು ಕೇವಲ ಮನೆಯ ಆಚರಣೆಗೆ ಸೀಮಿತವಾಗಬಾರದು, ಬದಲಾಗಿ ಎಲ್ಲ ಸಂಸ್ಥೆಗಳಲ್ಲಿ ಆಚರಿಸುವಂತಾಗಬೇಕು. ದೀಪಾವಳಿ ಎಂಬುದು ದೀಪಗಳ ಹಬ್ಬವಾಗಿದೆ. ಅದರಂತೆಯೆ ಇದು ಮನುಷ್ಯನ ಮನಸ್ಸು, ಹೃದಯವನ್ನು ಶುದ್ಧವಾಗಿಸಿ ಕ್ರೂರ ಗುಣವನ್ನು ತೊಡೆದುಹಾಕುವುದರ ಸಂಕೇತ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.

Advertisement
Advertisement
Advertisement
Advertisement

ಅವರು ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗ ಆಯೋಜಿಸಿದ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು. ಹಬ್ಬ ಎಂದರೆ ಎಲ್ಲರೂ ಸೇರಿ ಆಚರಿಸುವುದು ಮಾತ್ರವಲ್ಲ, ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಮುಂದಿನ ಜೀವನ ನಡೆಸಲು ದಾರಿಯಾಗಬೇಕು. ಅಂತೆಯೇ ಆಚರಣೆಯ ಮುಖ್ಯ ಉದ್ದೇಶವೇ ಸಂಬಂಧದ ಗಟ್ಟಿಗೊಳಿಸುವಿಕೆ ಆಗಿದೆ ಎಂದು ಹೇಳಿದರು.

Advertisement

ಸ್ನಾತಕೋತ್ತರ ಅಧ್ಯಯನ ಹಾಗೂ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯಸರಸ್ವತಿ ಬಿ. ಮಾತನಾಡಿ, ದೀಪಾವಳಿಯಲ್ಲಿ ಬೆಳಕಿಗೆ ಹೆಚ್ಚಿನ ಸ್ಥಾನವಿದೆ. ಸಾಲು ಸಾಲು ದೀಪಗಳನ್ನು ಹಚ್ಚಿ ಬದುಕಿನ ಅಂಧಕಾರವನ್ನು ಹೋಗಲಾಡಿಸಬೇಕು. ಮಣ್ಣಿನಿಂದ ಮಾಡಿದ ಹಣತೆಯು ಒಂದು ಸಂದೇಶವನ್ನು ನೀಡುತ್ತದೆ ಅದೇನೆಂದರೆ, ಮಣ್ಣಿನಿಂದ ಬಂದವನು ಮಣ್ಣಿಗೇ ಸೇರಬೇಕು. ದೀಪಾವಳಿ ಎಂದರೆ ಸಂಭ್ರಮದ ಜೊತೆಗೆ ಒಗ್ಗೂಡುವಿಕೆಯ ಹಬ್ಬ ಎಂದು ಹೇಳಿದರು.

ದೀಪಾವಳಿಯು ಜೀವನದ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ನೀಡುವ ಹಬ್ಬವಾಗಬೇಕು, ಹಾಗೆಯೇ ಎಲ್ಲರೂ ಒಗಟ್ಟಾಗಿ ಬದುಕುವಂತಾಗಬೇಕು. ಎಲ್ಲರೂ ದೀಪವನ್ನು ಹಚ್ಚಿ ಹೊಸ ಜೀವನವನ್ನು ಪ್ರಾರಂಭಿಸಬೇಕು ಎಂದು ಅವರು ಹೇಳಿದರು.

Advertisement

ಈ ಸಂದರ್ಭ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿವಿಧ ವಿಭಾಗಗಳ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಗಳಾದ ಅನುಶಾ ಸಿ.ಎಚ್. ಪ್ರಾರ್ಥಿಸಿದರು. ಅಶಿತಾ ಸ್ವಾಗತಿಸಿದರು. ಅಕ್ಷಿತ್ ವಂದಿಸಿದರು. ಪ್ರಿಯ ಪಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |
February 1, 2025
7:07 PM
by: The Rural Mirror ಸುದ್ದಿಜಾಲ
ಕೇಂದ್ರ ಬಜೆಟ್‌ | ಕೃಷಿ-ಗ್ರಾಮೀಣ-ಆರೋಗ್ಯದ ಕಡೆಗೂ ಗಮನ |
February 1, 2025
2:28 PM
by: The Rural Mirror ಸುದ್ದಿಜಾಲ
ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror