ಸುದ್ದಿಗಳು

ಆಟಿ ಅಮವಾಸ್ಯೆಗೆ ಬರಬೇಕಿತ್ತು ಮಳೆ…!

Share
ಡಾ.ಚಂದ್ರಶೇಖರ ದಾಮ್ಲೆ

 

Advertisement
Advertisement

 ಬರಹ : ಡಾ.ಚಂದ್ರಶೇಖರ ದಾಮ್ಲೆ , ಸುಳ್ಯ

 

 

 

Advertisement

ತುಳುನಾಡಿನ ಜಾನಪದ ಬದುಕಿನಲ್ಲಿ ಆಟಿ ತಿಂಗಳೆಂದರೆ ಅತಿ ಮಳೆಯಿಂದಾಗಿ ಬಡತನದ ತಿಂಗಳು. ಕೃಷಿಕರ ಪಾಲಿಗೆ ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ಕಷ್ಟದ ದಿನಗಳ ಕಾಲ. ತುಳು ಸಂಪ್ರದಾಯದಲ್ಲಿ ಮದುವೆಯಾದ ವರ್ಷ ಮಗಳು ತವರಿಗೆ ಬಂದು ಒಂದು ತಿಂಗಳು ಸುಖವಾಗಿ ಕಳೆಯುವ ಸಂಪ್ರದಾಯ ಇದ್ದ ತಿಂಗಳು. ಅನೇಕ ರೋಗಗಳು ಹರಡುವ ಭಯ ಹುಟ್ಟಿಸುತ್ತಿದ್ದ ಆಟಿ ತಿಂಗಳು ದುಸ್ವಪ್ನದಂತೆ ಕಳೆದು ಹೋಗಬೇಕಾಗಿತ್ತು.

ಈ ಆಟಿ ತಿಂಗಳಲ್ಲಿ ಅಮಾವಾಸ್ಯೆಯ ದಿನ ಬಹಳ ಮುಖ್ಯವಾದದ್ದು. ಏಕೆಂದರೆ ಆ ದಿನ ಹಾಲೆ ಮರದಲ್ಲಿ ಪ್ರಕೃತಿಯ ಎಲ್ಲ ಔಷಧಗಳು ಬಂದು ಸೇರುತ್ತವೆ ಎಂಬ ನಂಬಿಕೆ ಇದೆ. ಅದರ ಪ್ರಕಾರ ಆ ದಿನ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು ಹಾಲೆ ಮರದ ಬಳಿಗೆ ಹೋಗಿ ಕಲ್ಲಿನಲ್ಲಿ ಜಜ್ಜಿ ಅದರ ಕೆತ್ತೆಯನ್ನು ತಂದು ಗುದ್ದಿ ರಸತೆಗೆದು ಬರೆ ಹೊಟ್ಟೆಗೆ ಕುಡಿದರೆ ಅದು ಸರ್ವರೋಗ ನಿರೋಧಕ ಎಂಬ ನಂಬಿಕೆ ಇದೆ. ಈ ರೀತಿ ತಮ್ಮ ಆರೋಗ್ಯದ ಬಗ್ಗೆ ರೋಗನಿರೋಧಕ ಪ್ರಯೋಗ ನಡೆಯುತ್ತಿತ್ತು. ಈಗ ಇದು ಮರೆತು ಹೋಗಿರುವ ಸಂಗತಿಯಾಗಿದೆ. ಆಧುನಿಕ ಮಾತ್ರೆ ಸೀರಪ್ ಇಂಜೆಕ್ಷನ್ ಗಳ ಎದುರು ಮೂಢನಂಬಿಕೆ ಎನಿಸಿದೆ. ಆದರೆ ನನಗಿನ್ನೂ ವಿಶ್ವಾಸವಿದೆ. ನಾನು ಪ್ರತಿ ವರ್ಷ ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಖಾಲಿ ಹೊಟ್ಟೆಗೆ ಹಾಲೆ ಮರದ ರಸ ಕುಡಿಯುವ ವಾಡಿಕೆ ಇಟ್ಟುಕೊಂಡಿದ್ದೇನೆ.

ಪಂಚಾಂಗ ಪ್ರಕಾರ ಇಂದು (1-8-2019) ಆಟಿ ಅಮಾವಾಸ್ಯೆ. ಭಾರೀ ಮಳೆ ಇರಬೇಕಿತ್ತು. ಆದರೆ ಎರಡು ದಿನಗಳಿಂದ ಮಳೆ ಇಲ್ಲ. ಸೂರ್ಯೋದಯಕ್ಕೆ ಮೊದಲೇ ಹಾಲೆ ಮರದ ಕೆತ್ತೆ ತರಲು ಹೋದರೆ ಮರದ ತೊಗಟೆ ಮಳೆ ಇದ್ದರೆ ಇರುವಂತೆ ಮೃದುವಾಗಿಲ್ಲ. ಗಟ್ಟಿಯಾಗಿತ್ತು. ಮರದ ಮೈ ಇಡೀ ಇರುವೆಗಳ ಓಡಾಟ. ಅತಿಯಾಗಿ ಸೊಳ್ಳೆಗಳ ಕಾಟ. ಪ್ರಕೃತಿ ನಿಯಮದಂತೆ ಬರಬೇಕಿದ್ದ ಮಳೆ ಬಾರದೆ ವಾತಾವರಣ ಕಲುಷಿತಗೊಂಡಿದೆ. ಹೀಗೇ ಆದರೆ ಡಿಸೆಂಬರ್ ನಿಂದಲೇ ಬರಗಾಲ ಬಾಧಿಸೀತು. ಹಾಗಾಗಿ ಇನ್ನೀಗ ಬಂದಷ್ಟು ಮಳೆ ನೀರನ್ನು ಇಂಗು ಗುಂಡಿಗಳನ್ನು ಮಾಡಿ ಇಂಗಿಸಿಕೊಳ್ಳುವುದು ಒಳ್ಳೆಯದು.

 

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಂಪಾಜೆ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ…

2 hours ago

ಗೆದ್ದದ್ದು ಬೆಂಗಳೂರು ಅಲ್ಲ, ಇಂಗ್ಲೇಂಡಿನ ಡಿಯಾಜಿಯೋ ಕಂಪೆನಿ…!!! ಗೊತ್ತಾ..?

ಎಲ್ಲಿ  ಉಚಿತವೆಂಬ ಆಮಿಶ ಇದೆಯೋ  ಅಲ್ಲಿ ತಳ್ಳಾಟವೂ  ಇರುತ್ತದೆ. ಸರಕಾರಿ ಬಸ್ ಗಳಲ್ಲಿ…

2 hours ago

ಭಾರೀ ಮಳೆ ಸಾಧ್ಯತೆ | ಕೊಡಗು-ಉಡುಪಿ ಜಿಲ್ಲೆಯಲ್ಲಿ ಎಚ್ಚರಿಕೆ | ಕೊಡಗಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ರಜೆ | ಉಡುಪಿಯಲ್ಲಿ ಶಾಲೆಗಳಿಗೆ ರಜೆ |

ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ  ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಗಾಳಿ-ಮಳೆ…

3 hours ago

ನಿಮ್ಮಲ್ಲಿ ಎಳೆ ಅಡಿಕೆ ಬೀಳ್ತಾ ಇದೆಯಾ…? ಕೇಳಲು ಶುರು ಮಾಡಿದ್ದಾರೆ ಅಡಿಕೆ ಬೆಳೆಗಾರರು..!

ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.‌10 ಕಳೆಯುವ ಹೊತ್ತಿಗೆ ವಾತಾವರಣ…

9 hours ago

ಹವಾಮಾನ ವರದಿ | 11-06-2025 | ಮುಂದಿನ 2 ದಿವಸಗಳ ಕಾಲ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆ | ಮುನ್ಸೂಚನೆಯಂತೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಇಲ್ಲ |

ಈಗಿನಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ…

10 hours ago

ಒಂದೇ ರಾಶಿಯಲ್ಲಿ 3 ಗ್ರಹ…..| ತ್ರಿಗ್ರಾಹಿ ಯೋಗವು 50 ವರ್ಷಗಳ ನಂತರ ಸಂಭವಿಸುತ್ತಿದೆ | 5 ರಾಶಿಯವರಿಗೆ ಬಂಪರ್‌ ಲಾಟರಿ..!

ಜೂನ್ 2025ರಲ್ಲಿ ಮಿಥುನ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಗುರು ಗ್ರಹಗಳ ತ್ರಿಗ್ರಾಹಿ…

17 hours ago