ಇಂದು ಪ್ರಕೃತಿಯ ವಿಕೋಪ ಆಟಿ ತಿಂಗಳಿಗೇ ಮೀಸಲಾಗಿಲ್ಲ.ಆಷಾಢ ಅಥವಾ ಆಟಿ ತಿಂಗಳು ತುಳುನಾಡಿನ ಜಡಿ ಮಳೆಯ ಕಾಲ. ಈ ತಿಂಗಳು ಶುಭ ಕಾರ್ಯಗಳಿಗೆ ನಿಷಿದ್ಧ. ಆಟಿಡ್ದ್ ಬೊಕ್ಕ ಅರೆಗಾಲ(ಬೇಸಿಗೆ) ಮಾಯಿಡ್ದ್ ಬೊಕ್ಕ ಮರಿಯಾಲ (ಮಳೆಗಾಲ) ಈ ಮಾತು ಈಗ ಈ ತಿಂಗಳಿಗೆ ಅನ್ವಯಿಸುವುದಿಲ್ಲ.
ಹವಾಮಾನ ವೈಪರೀತ್ಯದಿಂದಾಗಿ ರೋಗ ರುಜಿನಗಳ ಕಾಟ ಆಟಿಯಲ್ಲಿ ಅತಿಯಾಗಿತ್ತು. ಆಹಾರ ಧಾನ್ಯಗಳ ಕೊರತೆ ಒಂದೆಡೆಯಾದರೆ ,ಇನ್ನೊಂದೊಡೆ ಪ್ರಕೃತಿಯ ಭಯಾನಕ. ಆಟಿ ತಿಂಗಳಲ್ಲಿ ಮಾರಿ ಕಳೆಯಲು ಆಟಿ ಕಳೆಂಜ ಮನೆ ಮನೆಗೆ ಭೇಟಿ ನೀಡುತ್ತಾನೆ. ಆಟಿ ತಿಂಗಳಲ್ಲಿ ಆಚರಿಸುವ ಆಚರಣೆ, ಆಟ, ಊಟ ಪ್ರತಿಯೊಂದಕ್ಕೂ ಅರ್ಥವಿದೆ. ಆಟಿ ಆಮಾವಾಸ್ಯೆ ದಿನ ಹಾಲೆ ಮರದ ಕೆತ್ತೆಯ ರಸ ಕುಡಿಯುವ ಕ್ರಮ ಈಗಲೂ ಇದೆ . ಈ ಸಂದರ್ಭದಲ್ಲಿ ಸಿಗುವ ಔಷಧೀಯ ಸಸ್ಯಗಳು, ಎಲೆಗಳು ಪೌಷ್ಠಿಕಾಂಶದ ಕೊರತೆಯನ್ನು ನೀಗಿಸುತ್ತದೆ.
ಅಟ್ಟದಲ್ಲಿದ್ದ ಹಲಸಿನ ಬೇಳೆ( ಬೀಜ), ಒಣಗಿಸಿ ಇಟ್ಟ ಹಪ್ಪಳ ಸೆಂಡಿಗೆಗಳು ಕೆಳಗಿಳಿಯುತ್ತದೆ. ಉಪ್ಪು ನೀರಲ್ಲಿ ಹಾಕಿಟ್ಟ ಹಲಸಿನ ಸೊಳೆ ಹಾಗೂ ಮಾವಿನಕಾಯಿ, ಹಾಳಾಗದಂತೆ ಕಾಪಿಟ್ಟ ಹಲಸಿನ ಬೀಜದಿಂದ ಖಾದ್ಯ ಜಿಟಿ ಜಿಟಿ ಮಳೆಗೆ ಹೊಟ್ಟೆಯನ್ನು ಬೆಚ್ಚಗೆ ಮಾಡುತ್ತದೆ. ಅಣಬೆ, ತೊಜಂಕು(ತಗಚೆ) ಸೊಪ್ಪಿನ ಪಲ್ಯ ಮತ್ತು ಪತ್ರೊಡೆ, ಮರಕೆಸುವಿನ ಪತ್ರೊಡೆ, ಹುರುಳಿ ಚಟ್ನಿ, ಉಪ್ಪು ಸೇರಿಸಿ ಬೇಯಿಸಿ ಒಣಗಿಸಿಟ್ಟ ಹಲಸಿನ ಬೀಜ(ಸಾಂತಾಣಿ), ಹಲಸಿನ ಕಾಯಿ ಸೊಂಟೆ, ಮಾಂಬಳ , ಗೆಣಸು, ಹಲಸಿನ ಹಪ್ಪಳ, ಕಣಿಲೆ ಗಸಿ, ಪಲ್ಯ, ಹಲಸಿನ ಹಣ್ಣಿನ ಕಡುಬು, ದೋಸೆ ಮಲೆನಾಡಿನ ಮಳೆಗೆ ಸೊಗಸು ನೀಡುತ್ತದೆ.
ಹಿಂದೆ ಮರ ಕೆಸುವಿಗಾಗಿ ಕಾಡು ಮೇಡು ಅಲೆಯಬೇಕಾಗಿತ್ತು. ಇಂದು ಅಂತಹ ಪರಿಸ್ಥಿತಿ ಇಲ್ಲ. ಈ ತಳಿಗಳನ್ನು ನೆಲದಲ್ಲಿ ಬೆಳೆಸಿ ಮಾರುಕಟ್ಟೆಗೆ ತಲುಪಿಸುತ್ತಾರೆ. ಮಳೆಗಾಲದಲ್ಲಿ ಕಾಣ ಸಿಗುವ ಈ ಮರ ಕೆಸು ಔಷಧೀಯ ಗುಣಗಳನ್ನು ಹೊಂದಿದೆ. ಈ ಕೆಸುವನ್ನು ಬಳಸಿ ಪತ್ರೊಡೆ, ಸಾಂಬಾರ್, ಚಟ್ನಿಗಳನ್ನು ಸವಿಯುವುದರಿಂದ, ಹಸಿವು ಹೆಚ್ಚಾಗುತ್ತದೆ. ಕೆಸುವಿನ ಎಲೆ, ದಂಡಿನಿಂದ ಮಾಡಿದ ಪದಾರ್ಥಗಳು ಹೊಟ್ಟೆಗಂಟು, ಗುಲ್ಮವಾಯು, ಅಜೀರ್ಣಕ್ಕೆ ರಾಮಬಾಣ. ಇದೀಗ ಸುಳ್ಯ ಪೇಟೆಯ ತರಕಾರಿ ಅಂಗಡಿಗಳಲ್ಲಿ ಮರ ಕೆಸುವಿನ ತೋರಣ ನಿಮ್ಮನ್ನು ಸ್ವಾಗತಿಸುತ್ತಿದೆ.
ಮರ ಕೆಸುವಿನ ಪತ್ರೊಡೆ
ಅಕ್ಕಿ, ತೆಂಗಿನಕಾಯಿ, ಬೆಲ್ಲ, ಹುಣಿಸೆಹಣ್ಣು, ಉಪ್ಪು, ಅರಸಿನ(ಕೊತ್ತಂಬರಿ, ಜೀರಿಗೆ , ಒಣಮೆಣಸಿನಕಾಯಿ, ಉದ್ದಿನಬೇಳೆ, ಮೆಂತೆ ಹುರಿದ ಮಸಾಲೆ) ಎಲ್ಲ ಒಟ್ಟಿಗೆ ನುಣ್ಣಗೆ ರುಬ್ಬಿ. ಕೆಸುವಿನ ಎಲೆಯ ಹಿಂಬದಿಗೆ ಹಿಟ್ಟನ್ನು ಹಚ್ಚಿ. ಹೀಗೆ ಒಂದರ ಮೇಲೆ ಒಂದು ಎಲೆ ಇಡುತ್ತಾ ಮಸಾಲೆ ಹಚ್ಚುತ್ತಾ ಆನಂತರ ಇದನ್ನು ಸುರುಳಿ ಸುತ್ತಿ ಹಬೆಯಲ್ಲಿ ಬೇಯಿಸಿ.
ಅರಸಿನ ಎಲೆ ಕಡುಬು:
ನೆನಸಿದ ಬೆಳ್ತಿಗೆ ಅಕ್ಕಿ ಸ್ವಲ್ಪ ಅವಲಕ್ಕಿಯೊಂದಿಗೆ ನುಣ್ಣಗೆ ರುಬ್ಬಿ. ಅರಸಿನ ಎಲೆಗೆ ಹಚ್ಚಿ ಅದರ ಮೇಲೆ ಬೆಲ್ಲ ಬೆರಸಿದ ತೆಂಗಿನತುರಿಯನ್ನು ಇಟ್ಟು ಮಡಚಿ ಹಬೆಯಲ್ಲಿ ಬೇಯಿಸಿ.
ತಿಮರೆ ಚಟ್ನಿ :
ಕೊತ್ತಂಬರಿ, ಒಣಮೆಣಸಿನಕಾಯಿಯನ್ನು ಎಣ್ಣೆ ಹಾಕಿ ಹುರಿದು ತಿಮರೆ ಎಲೆಗಳು, ತೆಂಗಿನ ತುರಿ, ಉಪ್ಪು, ಹುಣಿಸೆಹಣ್ಣು ಒಟ್ಟಿಗೆ ತರಿತರಿಯಾಗಿ ರುಬ್ಬಿ, ಚಟ್ನಿ ತಯಾರು.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…