ಯಕ್ಷಗಾನ : ಮಾತು-ಮಸೆತ

‘ಆಳು’ ಎಂಬ ಶಬ್ದ ಎರಡರ್ಥವನ್ನು ಕೊಡುತ್ತದೆ….

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

(ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಹರಿಶ್ಚಂದ್ರ)
ಪ್ರಸಂಗ : ರಾಜಾ ಹರಿಶ್ಚಂದ್ರ

Advertisement
Advertisement

(ಸಂದರ್ಭ : ವೀರಬಾಹುಕನ ಸಾಂಗತ್ಯದಲ್ಲಿ ಹರಿಶ್ಚಂದ್ರ ಸ್ಮಶಾನವಾಸಿಯಾಗುತ್ತಾನೆ. ಇಲ್ಲಿ ಸಂಪಾದಿಸಿದ ಧನವನ್ನು ವಿಶ್ವಾಮಿತ್ರ ಶಿಷ್ಯ ನಕ್ಷತ್ರಿಕನಿಗೆ ಹಸ್ತಾಂತರಿಸುತ್ತಾನೆ)

“ವಿಶ್ವಾಮಿತ್ರ ಶಿಷ್ಯರೇ, ಈಗಲಾದರೂ ನನ್ನನ್ನು ಆ ಪಾಶದಿಂದ ಬಿಡುಗಡೆಗೊಳಿಸುತ್ತೀರಾ? ಆಗಲಿ. ಧನ್ಯನಾದೆ. ಚಕ್ರವರ್ತಿಯಾಗಿದ್ದ ನಾನು ವೀರ ಬಾಹುಕನ ಆಜ್ಞೆಯಂತೆ ಪ್ರತಿಯೊಂದು ಹೆಣಕ್ಕೂ ಎಷ್ಟು ಹಣವನ್ನು ಸಂಪಾದಿಸಬೇಕೋ, ಅಷ್ಟು ಹಣವನ್ನು ಸಂಪಾದಿಸುತ್ತಾ, ಒಡೆಯನಿಗೆ ಸಲ್ಲಬೇಕಾಗಿದ್ದ ಹಣವನ್ನು ಅವನಿಗೆ ಸಮರ್ಪಿಸುತ್ತಿದ್ದೇನೆ.

ಪಟ್ಟಾಭಿಷೇಕವಾಗುವಾಗ ಹಿರಿಯರು ಹೇಳಿದ ಮಾತು ನೆನಪಾಗುತ್ತದೆ ಪ್ರಜೆಗಳೆಲ್ಲಾ ನಿನ್ನನ್ನು ಕೇಂದ್ರೀಕರಿಸಿಯೇ ಗೃಹಸ್ಥಾಶ್ರಮಿಗಳಾಗುತಾರೆ, ಅಲ್ಲ ಬ್ರಹ್ಮಚಾರಿಗಳಾಗಿರುತ್ತಾರೆ. ಅವನು ಯಾವುದೇ ಆಶ್ರಮ ಸ್ವೀಕಾರ ಮಾಡಬೇಕಿದ್ದರೂ ಕೂಡಾ ಭರವಸೆ ಸಿಂಹಾಸನದಲ್ಲಿ ಕುಳಿತ ನಿನ್ನಿಂದ ಬರಬೇಕು. ಆದ ಕಾರಣ ನೀನು ಕಾವಲುಗಾರನಾಗಬೇಕಾಗುತ್ತದೆ.
ನೀನಾಳು, ರಾಜ್ಯವನ್ನಾಳು. ಇಲ್ಲಿ ‘ಆಳು’ ಎಂಬ ಶಬ್ದ ಎರಡರ್ಥವನ್ನು ಕೊಡುತ್ತದೆ. ಬಾಕಿದ್ದವರನ್ನೆಲ್ಲ ‘ಆಳುವುದು’ ಎಂಬ ಅರ್ಥ ಒಂದಾದರೆ, ರೂಢಿಯ ಮಾತಿನಂತೆ ನೀನು ‘ಆಳು’! ಅವರೆಲ್ಲಾ ಆಳುಗಳಲ್ಲ, ಎಲ್ಲರನ್ನು ಆಳುವ ಆಳಾಗಿ ನೀನು ಬಾಳಬೇಕು. ಆ ಮಾತು ಈ ಹೊತ್ತು ಅನುಭವಕ್ಕೆ ಬಂತು. ಒಮ್ಮೆ ಎಲ್ಲರನ್ನು ಆಳಿದೆ. ಈಗ ನಿಜವಾದಂತಹ ‘ಆಳು’ ಶಬ್ದಕ್ಕೆ ಪ್ರತೀಕವೆನಿಸಿದ್ದೇನೆ. ಸುಡುಗಾಡಿನಲ್ಲಿ ಸುಡುಗಾಡಿನ ಕಾವಲುಗಾರನಾದ ಒಬ್ಬ ಚಾಂಡಾಲನ ಆಳು. ವ್ಯಸನವಿಲ್ಲ. ಯಾಕೆಂದರೆ, ಹಂಸತೂಲಿಕಾತಲ್ಪದಲ್ಲಿ ಪವಡಿಸಿದಂತಹ ಸುಖವನ್ನು ಮರೆಯಬೇಕಿದ್ದರೆ ಬರೇ ನೆಲದಲ್ಲಿ ಮಲಗಬೇಕು. ಈ ಜೀವನದಲ್ಲಿ ಜೀವನದ ಎರಡು ಪುಟವನ್ನು ಯಾವನು ಅಧ್ಯಯನ ಮಾಡುತ್ತಾನೋ ಅವನು ಮರಳಿ ಹುಟ್ಟುವುದಿಲ್ಲವಂತೆ. ಪಾತ್ರಕ್ಕೆ ಬಂದುದೇ ಪಂಚಾಮೃತ. ಇಲ್ಲೇ ಇರುತ್ತೇನೆ…”

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಹವಾಮಾನ ವರದಿ | 02-06-2025 | ಸಾಮಾನ್ಯ ಮಳೆ ಮುಂದುವರಿಕೆ | ಜೂನ್ ತಿಂಗಳಲ್ಲಿ ದುರ್ಬಲ ಮುಂಗಾರು ಸಾಧ್ಯತೆ |

ಮುಂಗಾರು ದುರ್ಬಲಗೊಂಡಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ಚಟುವಟಿಕೆಗಳು ಉಂಟಾದರೆ ಮಾತ್ರ ಮುಂಗಾರು ಸ್ವಲ್ಪ…

2 hours ago

ಕೊರೊನಾ ಬಗ್ಗೆ ಮುನ್ನೆಚ್ಚರಿಕೆಯ ಹೊರತು ಭಯಭೀತರಾಗುವ ಅವಶ್ಯಕತೆಯಿಲ್ಲ

ರಾಜ್ಯದಲ್ಲಿ  ಕೊರೋನ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ಏನೂ ಇಲ್ಲ ಎಂದು  ಆರೋಗ್ಯ ಸಚಿವ…

5 hours ago

ಭೂಕುಸಿತ ಹಿನ್ನೆಲೆ | ಪಶ್ಚಿಮಘಟ್ಟ ಧಾರಣ ಸಾಮರ್ಥ್ಯದ ಅಧ್ಯಯನಕ್ಕೆ ಸಚಿವ  ಈಶ್ವರ್ ಖಂಡ್ರೆ ಸೂಚನೆ

ದಕ್ಷಿಣ ಕನ್ನಡ, ಕೊಡಗು ಮೊದಲಾದ ಭಾಗದಲ್ಲಿ ಮಳೆಗೆ ಭೂಕುಸಿತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ…

9 hours ago

ರಾಜ್ಯದ ಹಲವೆಡೆ ಗುಡುಗು ಮಿಂಚು ಸಹಿತ ಮಳೆ ಸಾಧ್ಯತೆ | ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಹಲವೆಡೆ  ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ…

9 hours ago

ಸಿಂಹ ರಾಶಿಯನ್ನು ಪ್ರವೇಶಿಸಲಿರುವ ಮಂಗಳ | ಜೂನ್ 7 ರಿಂದ 3 ರಾಶಿಯವರಿಗೆ ಶುಭ ಫಲ

2025ರ ಜೂನ್ 7 ರಿಂದ ಮಂಗಳ ಗ್ರಹವು ಸಿಂಹ ರಾಶಿಗೆ ಪ್ರವೇಶ ಮಾಡಲಿರುವುದು…

9 hours ago

ಜೂನ್ 15 ರಂದು ಮಿಥುನ ರಾಶಿಗೆ ಸೂರ್ಯ | 12 ರಾಶಿಗಳ ಫಲಾಫಲ ಹೀಗಿದೆ….

ಹೆಚ್ಚಿನ ವಿವರಗಳನ್ನು ಪಡೆಯಲು ಜ್ಯೋತಿಷ್ಯರೊಂದಿಗೆ ಸಂಪರ್ಕಿಸಬಹುದು. 9535156490

1 day ago