Advertisement
ಯಕ್ಷಗಾನ : ಮಾತು-ಮಸೆತ

‘ಆಳು’ ಎಂಬ ಶಬ್ದ ಎರಡರ್ಥವನ್ನು ಕೊಡುತ್ತದೆ….

Share

(ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಹರಿಶ್ಚಂದ್ರ)
ಪ್ರಸಂಗ : ರಾಜಾ ಹರಿಶ್ಚಂದ್ರ

Advertisement
Advertisement

(ಸಂದರ್ಭ : ವೀರಬಾಹುಕನ ಸಾಂಗತ್ಯದಲ್ಲಿ ಹರಿಶ್ಚಂದ್ರ ಸ್ಮಶಾನವಾಸಿಯಾಗುತ್ತಾನೆ. ಇಲ್ಲಿ ಸಂಪಾದಿಸಿದ ಧನವನ್ನು ವಿಶ್ವಾಮಿತ್ರ ಶಿಷ್ಯ ನಕ್ಷತ್ರಿಕನಿಗೆ ಹಸ್ತಾಂತರಿಸುತ್ತಾನೆ)

Advertisement

“ವಿಶ್ವಾಮಿತ್ರ ಶಿಷ್ಯರೇ, ಈಗಲಾದರೂ ನನ್ನನ್ನು ಆ ಪಾಶದಿಂದ ಬಿಡುಗಡೆಗೊಳಿಸುತ್ತೀರಾ? ಆಗಲಿ. ಧನ್ಯನಾದೆ. ಚಕ್ರವರ್ತಿಯಾಗಿದ್ದ ನಾನು ವೀರ ಬಾಹುಕನ ಆಜ್ಞೆಯಂತೆ ಪ್ರತಿಯೊಂದು ಹೆಣಕ್ಕೂ ಎಷ್ಟು ಹಣವನ್ನು ಸಂಪಾದಿಸಬೇಕೋ, ಅಷ್ಟು ಹಣವನ್ನು ಸಂಪಾದಿಸುತ್ತಾ, ಒಡೆಯನಿಗೆ ಸಲ್ಲಬೇಕಾಗಿದ್ದ ಹಣವನ್ನು ಅವನಿಗೆ ಸಮರ್ಪಿಸುತ್ತಿದ್ದೇನೆ.

ಪಟ್ಟಾಭಿಷೇಕವಾಗುವಾಗ ಹಿರಿಯರು ಹೇಳಿದ ಮಾತು ನೆನಪಾಗುತ್ತದೆ ಪ್ರಜೆಗಳೆಲ್ಲಾ ನಿನ್ನನ್ನು ಕೇಂದ್ರೀಕರಿಸಿಯೇ ಗೃಹಸ್ಥಾಶ್ರಮಿಗಳಾಗುತಾರೆ, ಅಲ್ಲ ಬ್ರಹ್ಮಚಾರಿಗಳಾಗಿರುತ್ತಾರೆ. ಅವನು ಯಾವುದೇ ಆಶ್ರಮ ಸ್ವೀಕಾರ ಮಾಡಬೇಕಿದ್ದರೂ ಕೂಡಾ ಭರವಸೆ ಸಿಂಹಾಸನದಲ್ಲಿ ಕುಳಿತ ನಿನ್ನಿಂದ ಬರಬೇಕು. ಆದ ಕಾರಣ ನೀನು ಕಾವಲುಗಾರನಾಗಬೇಕಾಗುತ್ತದೆ.
ನೀನಾಳು, ರಾಜ್ಯವನ್ನಾಳು. ಇಲ್ಲಿ ‘ಆಳು’ ಎಂಬ ಶಬ್ದ ಎರಡರ್ಥವನ್ನು ಕೊಡುತ್ತದೆ. ಬಾಕಿದ್ದವರನ್ನೆಲ್ಲ ‘ಆಳುವುದು’ ಎಂಬ ಅರ್ಥ ಒಂದಾದರೆ, ರೂಢಿಯ ಮಾತಿನಂತೆ ನೀನು ‘ಆಳು’! ಅವರೆಲ್ಲಾ ಆಳುಗಳಲ್ಲ, ಎಲ್ಲರನ್ನು ಆಳುವ ಆಳಾಗಿ ನೀನು ಬಾಳಬೇಕು. ಆ ಮಾತು ಈ ಹೊತ್ತು ಅನುಭವಕ್ಕೆ ಬಂತು. ಒಮ್ಮೆ ಎಲ್ಲರನ್ನು ಆಳಿದೆ. ಈಗ ನಿಜವಾದಂತಹ ‘ಆಳು’ ಶಬ್ದಕ್ಕೆ ಪ್ರತೀಕವೆನಿಸಿದ್ದೇನೆ. ಸುಡುಗಾಡಿನಲ್ಲಿ ಸುಡುಗಾಡಿನ ಕಾವಲುಗಾರನಾದ ಒಬ್ಬ ಚಾಂಡಾಲನ ಆಳು. ವ್ಯಸನವಿಲ್ಲ. ಯಾಕೆಂದರೆ, ಹಂಸತೂಲಿಕಾತಲ್ಪದಲ್ಲಿ ಪವಡಿಸಿದಂತಹ ಸುಖವನ್ನು ಮರೆಯಬೇಕಿದ್ದರೆ ಬರೇ ನೆಲದಲ್ಲಿ ಮಲಗಬೇಕು. ಈ ಜೀವನದಲ್ಲಿ ಜೀವನದ ಎರಡು ಪುಟವನ್ನು ಯಾವನು ಅಧ್ಯಯನ ಮಾಡುತ್ತಾನೋ ಅವನು ಮರಳಿ ಹುಟ್ಟುವುದಿಲ್ಲವಂತೆ. ಪಾತ್ರಕ್ಕೆ ಬಂದುದೇ ಪಂಚಾಮೃತ. ಇಲ್ಲೇ ಇರುತ್ತೇನೆ…”

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ

Published by
ನಾ.ಕಾರಂತ ಪೆರಾಜೆ

Recent Posts

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

5 hours ago

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

1 day ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

1 day ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

2 days ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

2 days ago